ಆ್ಯಪ್ನಗರ

ರೋಹಿಣಿ ನಕ್ಷತ್ರಕ್ಕೆ ಸೂರ್ಯ: ಮುಂದಿನ 9 ದಿನ ಭೀಕರ ಸೆಕೆ, ಇವುಗಳನ್ನು ದಾನ ಮಾಡಿ

ಜೂನ್ 17ರವರೆಗೂ ಜೇಷ್ಠ ಮಾಸ ಇರಲಿದ್ದು, ಈ ಮಾಸದ 9 ದಿನಗಳ ಕಾಲ ಭೀಕರ ಸೆಕೆ ಎದುರಾಗಲಿದೆ ಎಂದು ಉತ್ತರ ಪ್ರದೇಶದ ಸಂಸ್ಕೃತ ಸಂಸ್ಥಾನದ ಸಂಸ್ಕೃತ ಸಾಹಿತ್ಯಚಾರ್ಯ ಮಹೇಂದ್ರ ಕುಮಾರ್ ಪಾಠಕ್ ತಿಳಿಸಿದ್ದಾರೆ.

Navbharat Times 25 May 2019, 12:38 pm
ಇಂದಿನಿಂದ (25 ಮೇ) ನೌತಪಾ ಆರಂಭವಾಗಲಿದೆ. ಮುಂದಿನ 9 ದಿನಗಳ ಕಾಲ ಸೂರ್ಯ ಮತ್ತು ಭೂಮಿಯ ನಡುವಿನ ಅಂತರ ಕಡಿಮೆಯಾಗಲಿದ್ದು, ಭೀಕರ ಸೆಕೆ ಉಂಟಾಗಲಿದೆ.
Vijaya Karnataka Web garmi


ಜೂನ್ 17ರವರೆಗೂ ಜೇಷ್ಠ ಮಾಸ ಇರಲಿದ್ದು, ಈ ಮಾಸದ 9 ದಿನಗಳ ಕಾಲ ಭೀಕರ ಸೆಕೆ ಎದುರಾಗಲಿದೆ ಎಂದು ಉತ್ತರ ಪ್ರದೇಶದ ಸಂಸ್ಕೃತ ಸಂಸ್ಥಾನದ ಸಂಸ್ಕೃತ ಸಾಹಿತ್ಯಾಚಾರ್ಯ ಮಹೇಂದ್ರ ಕುಮಾರ್ ಪಾಠಕ್ ತಿಳಿಸಿದ್ದಾರೆ. ಇದಕ್ಕೆ ನೌತಪಾ ಎಂದು ಕರೆಯಲಾಗುತ್ತದೆ. ಇದು ಇಂದಿನಿಂದಲೇ ಪ್ರಾರಂಭವಾಗಿದೆ.

ಈ ದಿನಗಳನ್ನು ನೌತಪಾ ಎಂದು ಕರೆಯುತ್ತಾರೆ

ಇಂದಿನ ಮಧ್ಯ ರಾತ್ರಿ 12.52ರ ಸುಮಾರಿಗೆ ಸೂರ್ಯ ರೋಹಿಣಿ ನಕ್ಷತ್ರವನ್ನು ಪ್ರವೇಶ ಮಾಡಲಿದ್ದು, ಜೂನ್ 8ರ ರಾತ್ರಿ 12.11ರವರೆಗೆ ಇರುತ್ತಾನೆ. ಆದರೆ, ನೌತಪಾ ಮೇ 25 ರಿಂದ ಜೂನ್ 3ರವರೆಗೆ ಇರಲಿದೆ. ರೋಹಿಣಿ ನಕ್ಷತ್ರದ ದೃಷ್ಟಿ ವರ್ಷದಲ್ಲಿ ಒಮ್ಮೆ ಮಾತ್ರ ಸೂರ್ಯನ ಮೇಲೆ ಬೀಳುತ್ತದೆ. ಈ ನಕ್ಷತ್ರ 15 ದಿನಗಳ ಕಾಲ ಇರುತ್ತದೆ. ಆದರೆ, ಆರಂಭದ 9 ದಿನ ಚಂದ್ರ ಯಾವ ನಕ್ಷದ ಮೇಲಿರುತ್ತಾನೋ ಆ ದಿನಗಳನ್ನು ನೌತಪಾ ಎಂದು ಕರೆಯುತ್ತಾರೆ.

ಚಂಡಮಾರುತ ಸಂಕೇತ

ನೌತಪಾದ ದಿನಗಳಲ್ಲಿ ಭೂಮಿ ಮೇಲೆ ತಾಪಮಾನ ಎಷ್ಟು ಏರಿಕೆಯಾಗುತ್ತದೆಯೋ ಎನ್ನುವುದರ ಅನುಗುಣವಾಗಿ ಮುಂದಿನ ದಿನಗಳಲ್ಲಿ ಮಳೆಯಾಗುತ್ತದೆ. ಇದನ್ನು ಶಾಸ್ತ್ರದಲ್ಲಿಯೂ ತಿಳಿಸಲಾಗಿದೆ. ಇದರಿಂದ ಕೆಲ ಪ್ರದೇಶಗಳಲ್ಲಿ ಚಂಡಮಾರುತ ಬೀಸುವ ಸಾಧ್ಯತೆಯೂ ಇರುತ್ತದೆ. ನೌತಪಾದ ಬಳಿಕ ಉತ್ತಮ ಮಳೆಯಾಗುತ್ತದೆ.

ಇವುಗಳನ್ನು ದಾನ ಮಾಡುವುದರಿಂದ ಕಲ್ಯಾಣ ಪ್ರಾಪ್ತ

ರೋಹಿಣಿ ನಕ್ಷತ್ರವನ್ನು ವೃಷಭ ರಾಶಿಯ ಮಸ್ತಿಷ್ಕ ಎಂದು ಕರೆಯುತ್ತಾರೆ. ಈ ನಕ್ಷತ್ರದಲ್ಲಿ ತಾರೆಗಳ ಸಂಖ್ಯೆ ಐದು ಇರುತ್ತದೆ. ಇದರ ಜತೆಗೆ 4 ಗ್ರಹದ ನಕ್ಷತ್ರ ಪರಿವರ್ತನೆಯೂ ಆಗುತ್ತದೆ. ಇದರಿಂದ ಶೀತಲದಾಯಕ ವಸ್ತುಗಳನ್ನು ದಾನ ನೀಡುವುದರಿಂದ ಕಲ್ಯಾಣ ಪ್ರಾಪ್ತಿಯಾಗುತ್ತದೆ. ಮುಂಜಾನೆ ಸ್ನಾನ, ಪೂಜೆ ಮಾಡಿದ ಬಳಿಕ ಮಡಿಕೆ, ಫ್ಯಾನ್, ಕೊಡೆ ದಾನ ಮಾಡುವುದು ಉತ್ತಮ.

ವಿಜ್ಞಾನಿಗಳು ಒಪ್ಪಿದ್ದಾರೆ

ನೌಪತಾ ಆರಂಭವಾದ ಬಳಿಕ ಮುಂದಿನ 9 ದಿನಗಳ ಕಾಲ ಭೀಕರ ಸೆಕೆಯಾಗಲಿದೆ ಎನ್ನುವುದನ್ನು ವಿಜ್ಞಾನಿಗಳು ಸಹ ಒಪ್ಪಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ