ಆ್ಯಪ್ನಗರ

ಪಿತೃಯಜ್ಞ ಎಂದರೇನು ಮತ್ತು ಪಿತೃ ಪಕ್ಷದಲ್ಲಿ ಇದರ ಆಚರಣೆಯ ವೈಶಿಷ್ಟ್ಯವೇನು?

ಪಿತೃ ಪಕ್ಷದಲ್ಲಿಈ ಶ್ರಾದ್ಧ ತರ್ಪಣಗಳ ಆಚರಣೆ ವಿಶೇಷ. ಸಾಧ್ಯವಿರುವವರು ಪಿತೃ ಪಕ್ಷದಲ್ಲಿ ಪ್ರತಿದಿನವೂ ಶ್ರಾದ್ಧ ಮಾಡುತ್ತಾರೆ ಇಲ್ಲದಿದ್ದಲ್ಲಿಒಂದು ದಿನ ವಿಶೇಷ ತರ್ಪಣವನ್ನು ಮಾಡಿ ಭೋಜನವನ್ನು ಮಾಡಿಸುತ್ತಾರೆ.

Vijaya Karnataka Web 8 Oct 2018, 10:52 am
ತಂದೆ ತಾಯಿಯರು ಬದುಕಿರುವಾಗ ಅವರನ್ನು ಆದರಿಸಿ ಚೆನ್ನಾಗಿ ನೋಡಿಕೊಳ್ಳುವುದು ಮತ್ತು ಅವರ ಕಾಲಾನಂತರ ಶ್ರಾದ್ಧ, ತರ್ಪಣಗಳ ಮೂಲಕ ಸತ್ಕರಿಸುವುದನ್ನು ಪಿತೃ ಯಜ್ಞ ಎಂದು ಕರೆಯುತ್ತಾರೆ. ವ್ಯಕ್ತಿ ಗತಿಸಿದ ತಿಥಿಯಂದು ಪ್ರತಿ ವರ್ಷ ಶ್ರಾದ್ಧ ಹಾಗೂ ಪ್ರತಿ ಅಮಾವಾಸ್ಯೆ, ಸಂಕ್ರಮಣಗಳಂದು ತರ್ಪಣ ಮಾಡುತ್ತಾರೆ.
Vijaya Karnataka Web pitru yajna


ಈ ಶ್ರಾದ್ಧವು ಎಲ್ಲಾ ಜಾತಿವರ್ಗಗಳ ಜನರೂ ಋುಷಿಗಳು ಹೇಳಿ ಕೊಟ್ಟಿರುವ ತಮ್ಮ ತಮ್ಮ ವಿಧಾನಗಳಲ್ಲಿಅವಶ್ಯಕವಾಗಿ ಆಚರಿಸಬೇಕಾದ ಕರ್ಮವಾಗಿದೆ. ಪಿತೃ ಪಕ್ಷದಲ್ಲಿ ಈ ಶ್ರಾದ್ಧ ತರ್ಪಣಗಳ ಆಚರಣೆ ವಿಶೇಷ. ಸಾಧ್ಯವಿರುವವರು ಪಿತೃ ಪಕ್ಷದಲ್ಲಿ ಪ್ರತಿದಿನವೂ ಶ್ರಾದ್ಧ ಮಾಡುತ್ತಾರೆ ಇಲ್ಲದಿದ್ದಲ್ಲಿ ಒಂದು ದಿನ ವಿಶೇಷ ತರ್ಪಣವನ್ನು ಮಾಡಿ ಭೋಜನವನ್ನು ಮಾಡಿಸುತ್ತಾರೆ.

ಮಹಾಲಯ ತರ್ಪಣ ಹೇಗೆ ವಿಶೇಷವೆಂದರೆ - ಪ್ರತಿ ಅಮಾವಾಸ್ಯೆ ತರ್ಪಣದಲ್ಲಿ ತಂದೆ ಕಡೆಯ ಹಿಂದಿನ ಮೂರು ತಲೆಮಾರು ಹಾಗೂ ತಾಯಿಯ ಕಡೆಯ ಹಿಂದಿನ ಮೂರು ತಲೆಮಾರುಗಳಿಗೆ ಮಾತ್ರ ತರ್ಪಣ ಆದರೆ ಮಹಾಲಯ ತರ್ಪಣದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಗತಿಸಿರುವವರಿಗೆ ತರ್ಪಣ ನೀಡುತ್ತಾರೆ. ಈ ಪಕ್ಷದಲ್ಲಿ ತರ್ಪಣ ಸ್ವೀಕರಿಸುವವರನ್ನು ಕಾರುಣ್ಯ ಪಿತೃಗಳು ಎನ್ನುತ್ತಾರೆ ಮತ್ತು ಈ ಕಾರುಣ್ಯ ಪಿತೃಗಳ ಪಟ್ಟಿಯಲ್ಲಿ ನೇರವಾದ ಪೂರ್ವಜರಲ್ಲದೇ ಗತಿಸಿರುವ ಇತರ ಸಂಬಂಧಿಕರು, ಆಚಾರ್ಯರು ಮತ್ತು ಆಪ್ತ ಮಿತ್ರರೂ ಸಹಾ ಸೇರಿ ತರ್ಪಣದ ಪಟ್ಟಿ ದೊಡ್ಡದಾಗಿರುತ್ತದೆ. ಈ ಕಾರಣದಿಂದಲೂ ಪಿತೃಪಕ್ಷದ ಆಚರಣೆ ವಿಶೇಷವಾಗಿರುತ್ತದೆ.

ಒಬ್ಬ ವ್ಯಕ್ತಿಯ ಅದರಲ್ಲೂ ಗೃಹಸ್ಥನ ಜೀವನದಲ್ಲಿ ಪಿತೃಯಜ್ಞವಷ್ಟೇ ಅಲ್ಲದೇ ಮಹಾ ಯಜ್ಞಗಳೂ ಸಹಾ ಪ್ರಮುಖವಾಗಿರುತ್ತದೆ. ಹೀಗೆ ನೇರವಾದ ಪೂರ್ವಜರಲ್ಲದೇ ಇನ್ನೂ ಅನೇಕ, ಗತಿಸಿರುವವರ ಸದ್ಗತಿಗೆ ಕಾರಣವಾಗಿ ತಾನೂ ಕೃತಾರ್ಥನಾಗುವ ಆಚರಣೆಗಳಿಗೆ ಪಿತೃ ಪಕ್ಷ ಪ್ರಶಸ್ತ ಅವಕಾಶವಾಗಿದ್ದು ಮಹರ್ಷಿಗಳು ನಮಗೆ ಕೊಟ್ಟಿರುವ ಅಪೂರ್ವ ಕೊಡುಗೆಯಾಗಿದೆ. ಆದುದರಿಂದ ಇಂಥ ಅಪೂರ್ವ ಕೊಡುಗೆಯನ್ನು ಸದುಪಯೋಗ ಪಡಿಸಿಕೊಳ್ಳಲು ತಂದೆ ತಾಯಿ ಇರುವವರು ಅವರನ್ನು ಪ್ರೀತ್ಯಾದರಗಳಿಂದ ನೋಡಿಕೊಂಡು ಉಳಿದವರು ಶ್ರಾದ್ಧ, ತರ್ಪಣಗಳಿಂದ ಪಿತೃ ದೇವತೆಗಳನ್ನು ಆರಾಧಿಸಿ ನಾವೆಲ್ಲರೂ ಕೃತಾರ್ಥರಾಗೋಣ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ