ಆ್ಯಪ್ನಗರ

ಅದೃಷ್ಟ ತರಲು ವಾಸ್ತು ನಿಯಮ

ಗೋಡೆಗಳ ಮೂಲೆಗೆ ತಲೆ ಹಾಕಿ ಮಲಗುವುದನ್ನು ಯಾವಾಗಲೂ ತಪ್ಪಿಸಿಕೊಳ್ಳಬೇಕು. ಇಲ್ಲವಾದರೆ ಒತ್ತಡ ಉಂಟಾಗುತ್ತದೆ.

Agencies 7 Sep 2019, 12:06 pm
ಮನೆಯಲ್ಲಿ ಸಂತಸ ತುಂಬಿ, ನಿವಾಸಿಗಳೆಲ್ಲಾ ಸುಖ ಜೀವನ ನಡೆಸಬೇಕು. ಇದಕ್ಕೆ ಅದೃಷ್ಟವನ್ನು ಮನೆಯೊಳಗೆ ತರುವ ವಾಸ್ತು ನಿಯಮಗಳನ್ನು ಪಾಲಿಸಬೇಕು. ಆವುಗಳ ಕುರಿತು ಇಲ್ಲಿದೆ ಒಂದಿಷ್ಟು ಸಲಹೆ.
Vijaya Karnataka Web Home


ಹಾಸಿಗೆಗೆ ಒಂದೇ ಒಂದು ಬೆಡ್‌ಶೀಟ್‌ ಮತ್ತು ಮ್ಯಾಟ್ರೆಸ್‌ ಹಾಕಬೇಕು. ಇದರಿಂದ ವೈವಾಹಿಕ ಸಂಬಂಧ ಉತ್ತಮಗೊಳ್ಳುತ್ತದೆ.

ನವಿಲುಗರಿಯಿಂದ ವಾಸ್ತು ದೋಷ ನಿವಾರಣೆ ಹೇಗೆ?

ಬೆಡ್‌ ರೂಂನಲ್ಲಿ ಪತ್ನಿಯು ಯಾವಾಗಲೂ ಪತಿಯ ಎಡ ಭಾಗದಲ್ಲೇ ಮಲಗಬೇಕು.

ಬೆಡ್‌ ಕೆಳಗಿರುವ ಅನಾವಶ್ಯಕ ವಸ್ತುಗಳನ್ನು ತೆಗೆದು ಬಿಡಬೇಕು. ಇಲ್ಲವಾದರೆ ಜೀವನದಲ್ಲಿ ಮುಂದುವರಿಯಲು ತಡೆಯಾಗುತ್ತದೆ.

ಬೆಡ್‌ ರೂಂ ಯಾವಾಗಲೂ ಕತ್ತಲಾಗಿರಬಾರದು. ಗಾಢ ದೀಪಗಳು ಕೂಡ ಅಲ್ಲಿರಬಾರದು. ಕಿಟಕಿ ಇದ್ದು ಚೆನ್ನಾಗಿ ಗಾಳಿ-ಬೆಳಕು ಆಡುತ್ತಿರಬೇಕು.

ಸ್ನಾನ ಗೃಹದಲ್ಲಿ ನೈಸರ್ಗಿಕ ಹಸಿರು ಗಿಡ ಅಥವಾ ಹಸಿರು ಕ್ಯಾಂಡಲ್‌ ಇಟ್ಟರೆ ನೆಗೆಟಿವ್‌ ಎನರ್ಜಿ ಹೊರ ಹೋಗುತ್ತದೆ.

ಅಡುಗೆ ಮನೆಯಲ್ಲಿ ಗ್ಯಾಸ್‌ ಮತ್ತು ಸಿಂಕ್‌ ನಡುವೆ ಗರಿಷ್ಠ ದೂರ ಕಾಯ್ದುಕೊಳ್ಳಬೇಕು.

ಗೋಡೆಗಳ ಮೂಲೆಗೆ ತಲೆ ಹಾಕಿ ಮಲಗುವುದನ್ನು ಯಾವಾಗಲೂ ತಪ್ಪಿಸಿಕೊಳ್ಳಬೇಕು. ಇಲ್ಲವಾದರೆ ಒತ್ತಡ ಉಂಟಾಗುತ್ತದೆ.

ಈಶಾನ್ಯ ದಿಕ್ಕಿನಲ್ಲಿ ಅಕ್ವೇರಿಯಂ ಇಟ್ಟರೆ ನೆಗೆಟಿವ್‌ ಎನರ್ಜಿಯನ್ನು ಹೊರ ಹಾಕಿ ಒಟ್ಟಾರೆ ಪ್ರಗತಿಗೆ ನೆರವಾಗುತ್ತದೆ.

ಈಶಾನ್ಯ ದಿಕ್ಕಿನಲ್ಲಿ ಚಿಕ್ಕ ನೀರಿನ ಕಾರಂಜಿ ಇಟ್ಟರೆ ಮನೆಯಲ್ಲಿ ಸಾಮರಸ್ಯ ಒಡಮೂಡುತ್ತದೆ.

ಮನೆಯಲ್ಲಿರುವ ಸಮಸ್ತ ವಾಸ್ತು ದೋಷ ನಿವಾರಣೆಗೆ ಪಿರಾಮಿಡ್‌ಗಳನ್ನು ಇಡುವುದು ಅತ್ಯಂತ ಪರಿಣಾಮಕಾರಿ.

ಮುಖ್ಯ ದ್ವಾರದ ಗೋಡೆಯಲ್ಲಿ ಗಣೇಶನ ಚಿತ್ರ ಅಥವಾ ವಿಗ್ರಹ ಇಡಬೇಕು. ಗೋಡೆ ಖಾಲಿಯಿದ್ದರೆ ಅದು ಏಕಾಂಗಿತನಕ್ಕೆ ಕಾರಣವಾಗುತ್ತದೆ.

ಈಶಾನ್ಯ ದಿಕ್ಕು ಯಾವಾಗಲೂ ಧ್ಯಾನಕ್ಕೆ ಹೇಳಿ ಮಾಡಿಸಿದ ಜಾಗ. ಆಧ್ಯಾತ್ಮಿಕ ಪ್ರಗತಿಗೆ ಇದು ಪೂರಕವಾಗಿ ಕೆಲಸ ಮಾಡುತ್ತದೆ.

ಉತ್ತಮ ದೃಷ್ಟಿಕೋನ ಮತ್ತು ಯೋಜನೆ ರೂಪಿಸಲು ನೆರವಾಗುವಂತೆ ಈಶಾನ್ಯ ದಿಕ್ಕಿನಲ್ಲಿ ಹಸಿರು ತುಂಬಿದ ಚಿತ್ರವಿರಬೇಕು.

ನೈರುತ್ಯ ದಿಕ್ಕಿನಲ್ಲಿ ಮನೆ ಮಂದಿಯ ಭಾವಚಿತ್ರವನ್ನು ಹಳದಿ ಅಥವಾ ಚಿನ್ನದ ಬಣ್ಣದ ಫ್ರೇಮ್‌ ಹಾಕಿ ಇಡಬೇಕು.

ಇದರಿಂದ ಮನೆಯಲ್ಲಿ ಆರೋಗ್ಯ ತುಂಬುವುದರ ಜೊತೆಗೆ ಪರಸ್ಪರ ಸಂಬಂಧ ಕೂಡ ಉತ್ತಮಗೊಳ್ಳುತ್ತದೆ.

ಸೂರ್ಯೋದಯದ ಚಿತ್ರ ಪಟವನ್ನು ಪೂರ್ವ ದಿಕ್ಕಿನಲ್ಲಿ ಹಾಕಿದರೆ ಸಮಾಜದಲ್ಲಿ ಉತ್ತಮ ಸಂಬಂಧ ಬೆಳೆಯಲು ಸಾಧ್ಯವಾಗುತ್ತದೆ.

ಮಕ್ಕಳ ಸ್ಟಡಿ ಟೇಬಲ್‌ನ್ನು ಪೂರ್ವ ದಿಕ್ಕಿಗೆ ಮುಖ ಮಾಡಿ ಹಾಕಿದರೆ ಅವರು ಕಲಿಕೆಯಲ್ಲಿ ಅಭ್ಯುದಯ ಕಾಣುತ್ತಾರೆ.

ಓಡುತ್ತಿರುವ ಕುದುರೆಯ ಚಿತ್ರವನ್ನು ದಕ್ಷಿಣದಲ್ಲಿ ಹಾಕಿದರೆ ಹಣದ ಹರಿವು ಸ್ಥಿರವಾಗಿರುತ್ತದೆ ಮತ್ತು ಮನೆಯಲ್ಲಿ ಸಾಮರಸ್ಯವಿರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ