ಆ್ಯಪ್ನಗರ

ವಾಸ್ತು ದೋಷ ನಿವಾರಕ ತುಳಸಿ

ವಾಸ್ತು ದೋಷ ನಿವಾರಕ ತುಳಸಿ * ಕೆಆರ್‌ ಪ್ರಕಾಶ್‌ಬಾಬು ನವೆಂಬರ್‌ 1, ಉತ್ಥಾನ ದ್ವಾದಶಿ ಶುಭ ಅಥವಾ ಅಶುಭ ಯಾವುದೇ ಕಾರ್ಯವಾಗಿರಲಿ ತುಳಸಿ ಬೇಕೇ ಬೇಕು...

Vijaya Karnataka 28 Oct 2017, 6:46 pm

* ಕೆ.ಆರ್‌. ಪ್ರಕಾಶ್‌ಬಾಬು

ನವೆಂಬರ್‌ 1, ಉತ್ಥಾನ ದ್ವಾದಶಿ. ಶುಭ ಅಥವಾ ಅಶುಭ ಯಾವುದೇ ಕಾರ್ಯವಾಗಿರಲಿ ತುಳಸಿ ಬೇಕೇ ಬೇಕು. ಪುರಾಣಗಳ ಪ್ರಕಾರ, ತುಳಸಿ ಗಿಡದ ದರ್ಶನ ಹಾಗೂ ಸ್ಪರ್ಶದಿಂದಲೇ ಪಾಪಗಳು ಪರಿಹಾರವಾಗುತ್ತವೆ. ವಾಸ್ತುದೋಷ ಪರಿಹಾರಕ್ಕೂ ತುಳಸಿ ಗಿಡ ಬಳಕೆಯಾಗುತ್ತದೆ. ತುಳಸಿಯಲ್ಲಿ ಮೂರು ವಿಧಗಳಿವೆ. ಅವೆಂದರೆ ಕೃಷ್ಣ ತುಳಸಿ, ಶ್ರೀ ತುಳಸಿ ಮತ್ತು ಕಾಡು ತುಳಸಿ.

ವಾಸ್ತು ದೋಷ ನಿವಾರಣೆಗೆ : ಪ್ರತಿಯೊಬ್ಬರ ಮನೆಯಂಗಳದಲ್ಲಿ ಅಥವಾ ಹಿತ್ತಲಿನಲ್ಲಿ ತುಳಸಿ ಗಿಡ ಇರಬೇಕು. ಈ ಸಸ್ಯವು ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕವನ್ನು ಹೊರಸೂಸುವ ಕಾರಣ ಮನೆಯೊಳಗಿನ ದುಷ್ಟ ಶಕ್ತಿಗಳು ನಿವಾರಣೆಯಾಗುತ್ತವೆ. ಹಾಗಾಗಿ ಮನೆಯ ಮುಖ್ಯ ದ್ವಾರದ ಮುಂಬದಿಯಲ್ಲಿ ತುಳಸಿಗಿಡವನ್ನು ಹಾಕುವುದು ಒಳ್ಳೆಯದು. ಮನಸ್ಸಿನ ಏಕಾಗ್ರತೆಗೆ ತುಳಸಿಮಣಿಯಿಂದ ಕೂಡಿರುವ ಜಪಮಾಲೆಯಿಂದ ಜಪ ಮಾಡಿ. ತುಳಸಿ ವೃಂದಾವನದ ಬದಿಯಲ್ಲಿ ಕುಳಿತು ಸಂಧ್ಯಾವಂದನೆ, ಧ್ಯಾನ ಮಾಡುವುದರಿಂದ ಮನಸ್ಸಿಗೂ ಮುದವಾಗುತ್ತದೆ. ದೇಹದ ಆರೋಗ್ಯಕ್ಕೂ ಪೂರಕವಾಗುತ್ತದೆ. ವಾಸ್ತು ದೋಷ ನಿವಾರಣೆಗೆ ಪ್ರತಿನಿತ್ಯ ಒಂದು ಎಸಳಾದರೂ ತುಳಸಿ ದಳವನ್ನು ಸಾಲಿಗ್ರಾಮಕ್ಕೆ ಅರ್ಪಿಸುವುದು ಒಳ್ಳೆಯದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ