ಆ್ಯಪ್ನಗರ

ಅಡುಗೆ ಮನೆಗೆ ವಾಸ್ತು ನಿಯಮ

ಮನೆಯ ಶಕ್ತಿ ಕೇಂದ್ರ, ಆರೋಗ್ಯಧಾಮ ಅಡುಗೆ ಮನೆ. ಇದು ಶುಚಿಯಾಗಿರುವುದರ ಜೊತೆಗೆ ವಾಸ್ತು ನಿಯಮಕ್ಕೆ ಅನುಗುಣವಾಗಿರಬೇಕು. ಅಲ್ಲಿರುವ ಪ್ರತಿಯೊಂದು ಸಾಮಗ್ರಿಗೂ ವಾಸ್ತುವಿನಲ್ಲಿ ನಿರ್ದಿಷ್ಟ ನಿಯಮಗಳನ್ನು ರೂಪಿಸಲಾಗಿದೆ. ಅವುಗಳ ಕುರಿತು ಒಂದಿಷ್ಟು ವಿವರ ಇಲ್ಲಿದೆ.

Vijaya Karnataka Web 26 Mar 2016, 2:43 pm
ಮನೆಯ ಶಕ್ತಿ ಕೇಂದ್ರ, ಆರೋಗ್ಯಧಾಮ ಅಡುಗೆ ಮನೆ. ಇದು ಶುಚಿಯಾಗಿರುವುದರ ಜೊತೆಗೆ ವಾಸ್ತು ನಿಯಮಕ್ಕೆ ಅನುಗುಣವಾಗಿರಬೇಕು. ಅಲ್ಲಿರುವ ಪ್ರತಿಯೊಂದು ಸಾಮಗ್ರಿಗೂ ವಾಸ್ತುವಿನಲ್ಲಿ ನಿರ್ದಿಷ್ಟ ನಿಯಮಗಳನ್ನು ರೂಪಿಸಲಾಗಿದೆ. ಅವುಗಳ ಕುರಿತು ಒಂದಿಷ್ಟು ವಿವರ ಇಲ್ಲಿದೆ.
Vijaya Karnataka Web vaastu for kitchen
ಅಡುಗೆ ಮನೆಗೆ ವಾಸ್ತು ನಿಯಮ


- ಯಾವಾಗಲೂ ಆಗ್ನೇಯ ಅಡುಗೆ ಮನೆಗೆ ಅತ್ಯಂತ ಪ್ರಾಶಸ್ತ್ಯ ದಿಕ್ಕು. ಅಗ್ನಿಯ ದಿಕ್ಕು ಇದಾಗಿರುವುದರಿಂದ ಅದರ ಸಂಪೂರ್ಣ ಲಾಭ ಪಡೆಯಲು ಆ ಭಾಗದಲ್ಲೇ ಕಿಚನ್ ಇರಲಿ.

- ಆಗ್ನೇಯ ಭಾಗದಲ್ಲಿ ಅವಕಾಶವಿಲ್ಲದವರು ಅಡುಗೆ ಮನೆಗೆ ಎರಡನೇ ಆದ್ಯತೆಯಾಗಿ ವಾಯವ್ಯ ದಿಕ್ಕನ್ನು ಆಯ್ದುಕೊಳ್ಳಬಹುದು.

- ಅಡುಗೆ ಮನೆಯ ಬಾಗಿಲು ಉತ್ತರ, ಪೂರ್ವ ಅಥವಾ ಈಶಾನ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿರಬೇಕು. ಗಡಿಯಾರದ ಮುಳ್ಳು ಓಡುವ ರೀತಿ ಬಾಗಿಲು ತೆರೆಯುವಂತಿರಬೇಕು.

- ಅಡುಗೆ ಮಾಡುವಾಗ ಯಾವಾಗಲೂ ಪೂರ್ವಕ್ಕೆ ಮುಖ ಮಾಡಿಕೊಂಡಿರಬೇಕು. ಇದರಿಂದ ನಿವಾಸಿಗಳಿಗೆ ಆರೋಗ್ಯ ಭಾಗ್ಯ ಸಿಗುತ್ತದೆ.

- ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡಿದರೆ ಅಂತಹ ಪುರುಷ ಅಥವಾ ಮಹಿಳೆಗೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

- ದಕ್ಷಿಣ ದಿಕ್ಕಿಗೆ ಮುಖ ಮಾಡಿಕೊಂಡು ಅಡುಗೆ ಮಾಡಿದರೆ ಹಣಕಾಸು ಬಿಕ್ಕಟ್ಟು ಮತ್ತು ಕೌಟುಂಬಿಕ ಸಮಸ್ಯೆಗಲು ಎದುರಾಗುತ್ತವೆ.

- ಮನೆಯ ನೈರುತ್ಯ, ಮನೆಯ ಕೇಂದ್ರ ಭಾಗ ಮತ್ತು ಈಶಾನ್ಯ ಭಾಗದಲ್ಲಿ ಅಡುಗೆ ಮನೆ ಇರಲೇಬಾರದು.

- ಯಾವಾಗಲೂ ಅಡುಗೆ ಮನೆಯ ಬಾಗಿಲಿಗೆ ಸರಿ ಎದುರಾಗಿ ಗ್ಯಾಸ್ ಸ್ಟೌವ್ ಇರದಂತೆ ನೋಡಿಕೊಳ್ಳಬೇಕು.

- ನೀರಿನ ಸಿಂಕ್ ಗ್ಯಾಸ್ ಸ್ಟೌವ್‌ನಿಂದ ಸಾಧ್ಯವಾದಷ್ಟು ದೂರದಲ್ಲಿ ಈಶಾನ್ಯ ದಿಕ್ಕಿನಲ್ಲಿರುವಂತೆ ನೋಡಿಕೊಳ್ಳಿ.

- ಕುಡಿಯುವ ನೀರಿನ ಟ್ಯಾಪ್ ಮತ್ತು ನೀರು ಸಂಗ್ರಹಿಸಿಡುವ ಯಾವುದೇ ಸಾಮಗ್ರಿ ಈಶಾನ್ಯ ದಿಕ್ಕಿನಲ್ಲೇ ಇರಬೇಕು.

- ಡೈನಿಂಗ್ ಟೇಬಲ್ ಅಡುಗೆ ಮನೆಯ ವಾಯವ್ಯ ಭಾಗದಲ್ಲಿ ಇರಲಿ.

- ಗ್ಯಾಸ್ ಸಿಲಿಂಡರ್‌ನ್ನು ಅಡುಗೆ ಮನೆಯ ಆಗ್ನೇಯ ಭಾಗದಲ್ಲಿ ಇಡಬೇಕು.

- ಅಡುಗೆ ಮನೆ ಬಾಗಿಲು ಮತ್ತು ಶೌಚಾಲಯದ ಬಾಗಿಲು ಎದುರುಬದುರಾಗಿ ಇರಬಾರದು.

- ಸ್ನಾನ ಗೃಹ ಮತ್ತು ಶೌಚಾಲಯದಿಂದ ಕೆಳಗೆ ಅಥವಾ ಮೇಲ್ಭಾಗದಲ್ಲಿ ಅಡುಗೆ ಮನೆ ಇರಬಾರದು.

- ಅಡುಗೆ ಮನೆಯ ಮೇಲ್ಭಾಗದಲ್ಲಿ ದೇವರ ಕೋಣೆ ಇದ್ದರೆ ದುರಾದೃಷ್ಟ ಕಾಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ