ಆ್ಯಪ್ನಗರ

ಮನಃಶಾಂತಿಗೆ ವಾಸ್ತು ಟಿಪ್ಸ್

ಸೂರ್ಯೋದಯದ ಚಿತ್ರ ಪಟವನ್ನು ಪೂರ್ವ ದಿಕ್ಕಿನಲ್ಲಿ ಹಾಕಿದರೆ ಸಮಾಜದಲ್ಲಿ ಉತ್ತಮ ಸಂಬಂಧ ಬೆಳೆಯಲು ಸಾಧ್ಯವಾಗುತ್ತದೆ.

Agencies 26 May 2019, 2:31 pm
ಮನೆಯೆಂದ ಮೇಲೆ, ಮನಸ್ಸಿಗೂ, ಮನೆಗೂ ನೆಮ್ಮದಿ, ಶಾಂತಿ ಮುಖ್ಯವಾಗಿರುತ್ತದೆ. ಹೀಗಾಗಿ ಕೆಲವೊಂದು ವಾಸ್ತು ನಿಯಮ, ಕ್ರಮಗಳನ್ನು ಅನುಸರಿಸುವುದು ಅಗತ್ಯ. ವಾಸ್ತು ಸಲಹೆ, ಸೂಚನೆ ಪಾಲಿಸುವುದು ಜನರಿಗೆ, ಮನೆಗೆ ನೆಮ್ಮದಿ ತರುತ್ತದೆ.
Vijaya Karnataka Web Vasthu 2


ಮುಖ್ಯ ದ್ವಾರದ ಗೋಡೆಯಲ್ಲಿ ಗಣೇಶನ ಚಿತ್ರ ಅಥವಾ ವಿಗ್ರಹ ಇಡಬೇಕು. ಗೋಡೆ ಖಾಲಿಯಿದ್ದರೆ ಅದು ಏಕಾಂಗಿತನಕ್ಕೆ ಕಾರಣವಾಗುತ್ತದೆ.

ಈಶಾನ್ಯ ದಿಕ್ಕು ಯಾವಾಗಲೂ ಧ್ಯಾನಕ್ಕೆ ಹೇಳಿ ಮಾಡಿಸಿದ ಜಾಗ. ಆಧ್ಯಾತ್ಮಿಕ ಪ್ರಗತಿಗೆ ಇದು ಪೂರಕವಾಗಿ ಕೆಲಸ ಮಾಡುತ್ತದೆ.

ಉತ್ತಮ ದೃಷ್ಟಿಕೋನ ಮತ್ತು ಯೋಜನೆ ರೂಪಿಸಲು ನೆರವಾಗುವಂತೆ ಈಶಾನ್ಯ ದಿಕ್ಕಿನಲ್ಲಿ ಹಸಿರು ತುಂಬಿದ ಚಿತ್ರವಿರಬೇಕು.

ನೈರುತ್ಯ ದಿಕ್ಕಿನಲ್ಲಿ ಮನೆ ಮಂದಿಯ ಭಾವಚಿತ್ರವನ್ನು ಹಳದಿ ಅಥವಾ ಚಿನ್ನದ ಬಣ್ಣದ ಫ್ರೇಮ್‌ ಹಾಕಿ ಇಡಬೇಕು.

ಇದರಿಂದ ಮನೆಯಲ್ಲಿ ಆರೋಗ್ಯ ತುಂಬುವುದರ ಜೊತೆಗೆ ಪರಸ್ಪರ ಸಂಬಂಧ ಕೂಡ ಉತ್ತಮಗೊಳ್ಳುತ್ತದೆ.

ಸೂರ್ಯೋದಯದ ಚಿತ್ರ ಪಟವನ್ನು ಪೂರ್ವ ದಿಕ್ಕಿನಲ್ಲಿ ಹಾಕಿದರೆ ಸಮಾಜದಲ್ಲಿ ಉತ್ತಮ ಸಂಬಂಧ ಬೆಳೆಯಲು ಸಾಧ್ಯವಾಗುತ್ತದೆ.

ಮಕ್ಕಳ ಸ್ಟಡಿ ಟೇಬಲ್‌ನ್ನು ಪೂರ್ವ ದಿಕ್ಕಿಗೆ ಮುಖ ಮಾಡಿ ಹಾಕಿದರೆ ಅವರು ಕಲಿಕೆಯಲ್ಲಿ ಅಭ್ಯುದಯ ಕಾಣುತ್ತಾರೆ.

ಓಡುತ್ತಿರುವ ಕುದುರೆಯ ಚಿತ್ರವನ್ನು ದಕ್ಷಿಣದಲ್ಲಿ ಹಾಕಿದರೆ ಹಣದ ಹರಿವು ಸ್ಥಿರವಾಗಿರುತ್ತದೆ ಮತ್ತು ಮನೆಯಲ್ಲಿ ಸಾಮರಸ್ಯವಿರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ