ಆ್ಯಪ್ನಗರ

Vara Bhavishya:ವೃಷಭ ರಾಶಿಯವರೇ ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಸಡಿಲಿಸಬೇಡಿ: ವಾರ ಭವಿಷ್ಯ ನೋಡಿ

ಫೆಬ್ರವರಿ 23 ರಿಂದ ಫೆಬ್ರವರಿ 29 ರವರೆಗೆ ಮೇಷ ರಾಶಿಯಿಂದ ಮೀನ ರಾಶಿಯವರೆಗೂ ಹನ್ನೆರಡು ರಾಶಿಗಳ ಈ ವಾರದ ರಾಶಿಭವಿಷ್ಯ ಇಲ್ಲಿದೆ ನೋಡಿ.

Vijaya Karnataka Web 23 Feb 2020, 6:01 am
ಹನ್ನೆರಡು ರಾಶಿಗಳಿಗೂ ಸಂಬಂಧಪಟ್ಟಂತೆ ಗ್ರಹಗತಿಗಳು ಬದಲಾದಾಗ ವ್ಯಕ್ತಿಯ ವೃತ್ತಿ ಜೀವನ, ಕೌಟುಂಬಿಕ ಜೀವನ, ಸಾಮಾಜಿಕ ಜೀವನ, ಆರೋಗ್ಯದಲ್ಲಿ ಪ್ರತಿದಿನವೂ ಸಾಕಷ್ಟು ಬದಲಾವಣೆಗಳಾಗುತ್ತವೆ. ಫೆಬ್ರವರಿ 23 ರಿಂದ ಫೆಬ್ರವರಿ 29 ರವರೆಗೆ ಮೇಷ ರಾಶಿಯಿಂದ ಮೀನ ರಾಶಿಯವರೆಗೂ ಹನ್ನೆರಡು ರಾಶಿಗಳ ಈ ವಾರದ ರಾಶಿಭವಿಷ್ಯ ಇಲ್ಲಿದೆ ನೋಡಿ.
Vijaya Karnataka Web kannada weekly horoscope from 23 2 2020 to 29 2 2020
Vara Bhavishya:ವೃಷಭ ರಾಶಿಯವರೇ ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಸಡಿಲಿಸಬೇಡಿ: ವಾರ ಭವಿಷ್ಯ ನೋಡಿ



ಮೇಷ ರಾಶಿ

ಹಿಂದಿನ ದುಡುಕುತನ, ಮುಂಗೋಪ ಕಡಿಮೆಯಾಗಿ ಬಂಧುಗಳೊಡನೆ ಬೆರೆಯುವಿರಿ. ಹಿರಿಯರ ಆಶೀರ್ವಾದದಿಂದ ನೀವು ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಸೋದರರಲ್ಲಿ ಒಗ್ಗಟ್ಟು ಮೂಡಿ ಕುಟುಂಬದ ಕಷ್ಟ, ಸುಖಗಳಲ್ಲಿ ಸಮಪಾಲು ಹಂಚಿಕೊಳ್ಳುವಿರಿ. ಉದ್ಯಮದಲ್ಲಿ ಹೆಚ್ಚಿನ ಯಶಸ್ಸು ಆದಾಯ ತೀವ್ರ ಹೆಚ್ಚಳವಾಗುವುದು.

ವೃಷಭ ರಾಶಿ

ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಸಡಿಲಿಸಬೇಡಿ. ಇದರಿಂದ ಆಗಬೇಕಾದ ಹಾಗೂ ಆಗಬೇಕಾಗಿರುವ ಕೆಲಸ ಸುಲಭವಾಗಿ ನೆರವೇರಲಿವೆ. ಚಾಡಿ ಮಾತುಗಳಿಗೆ ಕಿವಿಗೊಡಬೇಡಿ. ಹಿರಿಯ ಮತ್ತು ಕಿರಿಯರೊಡನೆ ಸ್ನೇಹದಿಂದ ವರ್ತಿಸಿ. ನಿಮ್ಮ ಮಕ್ಕಳಿಗಾಗಿ ಖರ್ಚುಗಳು ಜಾಸ್ತಿ ಆಗುವವು.

ಮಿಥುನ ರಾಶಿ

ಗೃಹ ನಿರ್ಮಾಣದಲ್ಲಿ ತೊಡಗಿಕೊಂಡವರಿಗೆ ಮಧ್ಯದಲ್ಲಿ ತೀವ್ರ ಹಣದ ಮುಗ್ಗಟ್ಟು ಎದುರಾಗುವುದು. ಈ ಸಂದರ್ಭದಲ್ಲಿ ಬೇರೆಯವರ ಬಳಿ ಸಾಲ ಕೇಳಿ ಬರಿಗೈಯಲ್ಲಿ ಬರುವಿರಿ. ಆಗ ಸೋದರಿಯರು ನಿಮಗೆ ಸಂಪೂರ್ಣ ಆರ್ಥಿಕ ಬೆಂಬಲ ನೀಡುವರು. ನೀವು ಬಿಂಕ ತೋರದೆ ಅದನ್ನು ಸ್ವೀಕರಿಸಿ. ಸರ್ಕಾರದ ಹಣ ಗುತ್ತಿಗೆದಾರರಿಗೆ ಶೀಘ್ರವೇ ಸಂದಾಯವಾಗುವುದು.


ಜನ್ಮಕುಂಡಲಿಯಲ್ಲಿ ಕೇತು ಶುಭ ಸ್ಥಾನದಲ್ಲಿದ್ದರೆ ಈ ಅದೃಷ್ಟ ಪಡೆಯಬಹುದು!

ಕಟಕ ರಾಶಿ

ಖಾಸಗಿ ಕಂಪನಿ ನೌಕರರಿಗೆ ವೇತನ ಏರಿಕೆಯಾಗುವುದು. ಮನೆ ಸದಸ್ಯರ ನಡುವಿನ ಭಿನ್ನಾಭಿಪ್ರಾಯಗಳು ದೂರವಾಗಿ ಸೌಹಾರ್ದತೆ ಮೂಡಲಿದೆ. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಹೋಗುವುದನ್ನು ರೂಢಿಸಿಕೊಳ್ಳಿ. ಯಾವುದೇ ರೀತಿಯ ಹೊಗಳಿಕೆ ಅಥವಾ ತೆಗಳಿಕೆಗಳಿಗೆ ಕಿವಿಗೊಡಬೇಡಿ. ಸಹೋದ್ಯೋಗಿ ಕೊಡುವ ಎಲ್ಲಾ ಸಹಕಾರವನ್ನು ತೆಗೆದುಕೊಳ್ಳಿ.

ಸಿಂಹ ರಾಶಿ

ಮತ್ತೊಬ್ಬರ ಸಹಾಯವಿಲ್ಲದೆ ಕೆಲಸ ಮುಗಿಸಿದ ತೃಪ್ತಿ ನಿಮ್ಮದಾಗುವುದು. ಇದರಿಂದ ನಿಮಗೆ ಆತ್ಮವಿಶ್ವಾಸ ಮೂಡಿ ಅಭಿಮಾನ ಪಡುವಿರಿ. ಆಸ್ತಿ ಖರೀದಿಗೆ ಉತ್ತಮ ಸಮಯವಾಗಿದ್ದು, ಈ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಹಣದ ಸಹಾಯ ತಾನಾಗಿಯೇ ಬರುವುದರಿಂದ ಚಿಂತೆ ಬೇಡ. ಮತ್ತೊಬ್ಬರೊಂದಿಗೆ ವಿನಾಕಾರಣ ಮಾತಿನ ಚಕಮಕಿ ಬೇಡ.


ಯಾವ ರಾಶಿಯವರಿಗೆ ಯಾವ ರಾಶಿಯವರು ಉತ್ತಮ ಸ್ನೇಹಿತರಾಗುತ್ತಾರೆ ಗೊತ್ತಾ?

ಕನ್ಯಾ ರಾಶಿ

ನಿಮ್ಮ ಮನೆಯಲ್ಲಿನ ಶುಭ ಕಾರ್ಯಕ್ಕೆ ಹಣ ನೀರಿನಂತೆ ಖರ್ಚಾಗುವುದು. ನೀವು ಜಾರಿ ಬಿದ್ದು ದೇಹದ ಎಡಭಾಗಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇದೆ. ಪ್ರಯಾಣ ಕಾಲದಲ್ಲಿ ನರಸಿಂಹದೇವರ ಸ್ತೋತ್ರ ಪಠಿಸಿ. ನಿಮ್ಮ ಪತ್ನಿ ನಿಮ್ಮ ಎಲ್ಲಾ ಕೆಲಸಗಳಿಗೆ ಬೆಂಬಲ ನೀಡುವರು. ಸಹೋದ್ಯೋಗಿಗಳು ಕೊಡಲಿರುವ ಎಲ್ಲಾ ಸಹಕಾರಗಳನ್ನು ತೆಗೆದುಕೊಳ್ಳಿ. ಸಮಾಜದಲ್ಲಿ ನಿಮ್ಮ ಗೌರವ, ಪ್ರತಿಷ್ಠೆ ಹೆಚ್ಚಲಿವೆ.

ತುಲಾ ರಾಶಿ

ಈ ಹಿಂದೆ ನೀವು ಹೂಡಿಕೆ ಮಾಡಿದ್ದ ಹಣ ಅನಿರೀಕ್ಷಿತವಾಗಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ನಿಮ್ಮ ಕೈ ಸೇರಲಿದೆ. ಅದು ಅಪವ್ಯಯವಾಗದಂತೆ ನೋಡಿಕೊಳ್ಳಿ. ನಿಮ್ಮ ಮಾತಿನಲ್ಲಿ ಹಿಡಿತವಿದ್ದಲ್ಲಿ ನಿಮಗೇ ಕ್ಷೇಮ. ತಪ್ಪಿದ್ದಲ್ಲಿ ಬಂಧುಗಳ ನಡುವೆ ಅಸಮಾಧಾನ ಹೊಗೆಯಾಡುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ನಿಮ್ಮ ತಂತ್ರಗಾರಿಕೆಗೆ ಎದುರಾಳಿಗಳು ಬೆಸ್ತು ಬೀಳುವರು.

ವೃಶ್ಚಿಕ ರಾಶಿ

ಹಿಡಿದ ಕಾರ್ಯ ಮುಗಿಸುವಂಥ ಛಲಗಾರಿಕೆ ನಿಮ್ಮಲ್ಲಿದೆ. ಇದು ನಿಮ್ಮ ಯಶಸ್ಸಿನ ಗುಟ್ಟು. ಆದರೆ ಮಾತನಾಡುವ ಮೊದಲು ಅದರ ಪರಿಣಾಮದ ಬಗ್ಗೆ ಗಮನವಿರಲಿ. ಮತ್ತೊಬ್ಬರ ಮೇಲೆ ಛಲ ಅಥವಾ ಅಧಿಕಾರ ಸ್ಥಾಪಿಸುವ ಹುಂಬತನ ಮಾಡಬೇಡಿ. ಇದರಿಂದ ನೀವು ಧನ ಮತ್ತು ಮಾನ ಕಳೆದುಕೊಳ್ಳಬೇಕಾಗುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು.

ಧನುಸ್ಸು ರಾಶಿ

ನೀವು ಎಷ್ಟೇ ಚುರುಕಾಗಿ ಕೆಲಸ ಮಾಡಲು ಪ್ರಯತ್ನಿಸಿದರೂ ಆಗಬೇಕಾಗಿರುವ ಕೆಲಸಗಳು ಮಂದಗತಿಯಲ್ಲಿ ಸಾಗುವವು. ಇದರಿಂದ ನಿಮ್ಮ ಸಹನೆಯ ಪರೀಕ್ಷೆಯೂ ಆಗಲಿದೆ. ಆದರೆ ಉತ್ತಮ ಫಲಿತಾಂಶ ಕಾಣುವಿರಿ. ನೀವು ಮತ್ತೊಬ್ಬರಿಗೆ ಕೊಟ್ಟ ಹಣ ಸಕಾಲಕ್ಕೆ ಮರಳಿ ಬರದೆ ನೀವೇ ಸಾಲಗಾರರಾಗುವ ಸಂದರ್ಭ ಬರುವುದು.

ಮಕರ ರಾಶಿ

ಆತ್ಮೀಯರೆಂದು ನಂಬಿ ಯಾರ ಸಲಹೆ ಮೇರೆಗೆ ನೀವು ಆಸ್ತಿ ಖರೀದಿಗೆ ಯತ್ನಿಸಿದ್ದೀರೋ ಅವರಿಂದಲೇ ವಂಚನೆಗೆ ಒಳಗಾಗುವ ಸಾಧ್ಯತೆ ಇದೆ. ಸಾಧ್ಯವಾದರೆ ಒಪ್ಪಂದ ರದ್ದುಪಡಿಸಿ. ಇಲ್ಲವಾದರೆ ಮುಂಗಡ ಹಣಕ್ಕೆ ಸಂಚಕಾರ ಬರಲಿದೆ. ಭೂ ವ್ಯವಹಾರದಲ್ಲಿಕೈ ಹಾಕಬೇಡಿ. ಹೊಸದಾಗಿ ನೌಕರಿಗೆ ಸೇರಿದ ಯುವಕರಿಗೆ ವೃತ್ತಿಯಲ್ಲಿಗೊಂದಲ ಮೂಡುವುದು.

ಕುಂಭ ರಾಶಿ

ನಿಮ್ಮ ವಿಪರೀತ ಚಂಚಲತೆಯನ್ನು ಹತೋಟಿಯಲ್ಲಿಡಲು ಧ್ಯಾನ, ಯೋಗಗಳನ್ನು ಅಭ್ಯಾಸ ಮಾಡುವುದು ಲೇಸು. ಗಾಯಕರಿಗೆ ಶಿಷ್ಯರು ಹೆಚ್ಚುತ್ತಾ ಹೋಗುವರು. ನೆರೆಹೊರೆಯವರೊಂದಿಗೆ ಸೌಹಾರ್ದತೆ ಇರಲಿ. ಹಿರಿಯರ ಅಪ್ಪಣೆಯಂತೆ ನಡೆದುಕೊಂಡರೆ ನಿಮ್ಮ ಅನೇಕ ಸಮಸ್ಯೆಗಳು ಪರಿಹಾರವಾಗುವವು.


ಜ್ಯೋತಿಷ್ಯದ ಪ್ರಕಾರ ಈ ಐದು ರಾಶಿಯವರು ಇತರ ರಾಶಿಯವರಿಗಿಂತ ಹೆಚ್ಚು ಸ್ವಾರ್ಥಿಗಳು..!

ಮೀನ ರಾಶಿ

ನೀವು ಆತಂಕದಿಂದಲೇ ತೆಗೆದುಕೊಂಡ ನಿರ್ಧಾರಗಳು ಮುಂದೆ ಗಟ್ಟಿಯಾಗುತ್ತಲೇ ಹೋಗುತ್ತವೆ. ಇದರಿಂದ ಈ ನಿರ್ಧಾರಗಳು ಸ್ಪಷ್ಟವಾಗಿ ನೀವು ಕೈಗೊಳ್ಳಲಿರುವ ಕೆಲಸಗಳು ಹೊಸ ಸ್ವರೂಪ ಪಡೆಯಲಿವೆ. ಸರ್ಕಾರಿ ನೌಕರರಿಗೆ ಅದರಲ್ಲೂಉನ್ನತಾಧಿಕಾರಿಗಳಿಗೆ ಪದೋನ್ನತಿ ವರ್ಗಾವಣೆ ಆಗಲಿದೆ. ನೀವು ಕೆಲಸ ಮಾಡುವ ಸ್ಥಳದಲ್ಲಿ ವರಿಷ್ಠರ ಗಮನ ಸೆಳೆಯಲು ಪ್ರಯತ್ನಿಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ