ಆ್ಯಪ್ನಗರ

ಸಿಂಹ ರಾಶಿಯವರಿಗೆ ನಾನಾ ಮೂಲಗಳಿಂದ ಹಣದ ಹರಿವು: ನಿಮ್ಮ ಭವಿಷ್ಯ ಈ ವಾರ ಹೇಗಿದೆ

ವ್ಯಾಪಾರ, ವ್ಯವಹಾರಗಳಲ್ಲಿ ಅಧಿಕ ಲಾಭವಿದೆ ನಿಮ್ಮ ಮಕ್ಕಳ ಪ್ರಗತಿಯಿಂದ ಸಂತೋಷ ಉಂಟಾಗುವುದು ಸಂಶೋಧಕರಿಗೆ ಸರ್ಕಾರದಿಂದ ಮನ್ನಣೆ ಸಿಗುವುದು...

Vijaya Karnataka 8 Jul 2018, 7:13 am
ಮೇಷ:- ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭವಿದೆ. ನಿಮ್ಮ ಮಕ್ಕಳ ಪ್ರಗತಿಯಿಂದ ಸಂತೋಷ ಉಂಟಾಗುವುದು. ಸಂಶೋಧಕರಿಗೆ ಸರ್ಕಾರದಿಂದ ಮನ್ನಣೆ ಸಿಗುವುದು. ಮನೆಯಲ್ಲಿ ಒಂಟಿತನ ನಿಮ್ಮನ್ನು ಕಾಡುವುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ನೆಮ್ಮದಿ ಕಾಣುವಿರಿ. ಸೋಮವಾರ, ಬುಧವಾರ ಉತ್ತಮ ದಿನಗಳು.
Vijaya Karnataka Web horoscope-1 new


ವೃಷಭ:- ಮನೆ ಖರೀದಿ ಅಥವಾ ಕಟ್ಟುವ ವಿಚಾರದಲ್ಲಿ ದೃಢ ನಿರ್ಧಾರ ತಳೆಯುವುದು ಉತ್ತಮ. ಅವಸರದಲ್ಲಿ ಯಾವುದೇ ಕೆಲಸಗಳನ್ನು ಮಾಡಬೇಡಿ. ಅನವಶ್ಯಕ ಖರ್ಚುಗಳನ್ನು ತಡೆಯುವುದು ಒಳ್ಳೆಯದು. ಸಂಸಾರದಲ್ಲಿ ನೆಮ್ಮದಿ ಸಂತೋಷ ಕಾಣುವಿರಿ. ಮಕ್ಕಳ ವಿವಾಹದ ಬಗ್ಗೆ ಸದ್ಯಕ್ಕೆ ಚಿಂತೆ ಬೇಡ. ಗುರುವಾರ, ಶುಕ್ರವಾರ ಶುಭ ದಿನಗಳು.

ಮಿಥುನ:- ನೀವು ಮಾಡುವ ಉತ್ತಮ ಕಾರ್ಯಗಳಿಗೆ ಮುಕ್ತ ಕಂಠದಿಂದ ಪ್ರಶಂಸೆ ಸಿಗುವುದು. ಸ್ನೇಹಿತರಿಂದ ಸಹಾಯದ ಭರವಸೆ ಸಿಗುವುದು. ಹಣಕಾಸು ಸಂಸ್ಥೆಗಳಿಂದ ಸಾಲ ದೊರೆಯಲಿದೆ. ಮಕ್ಕಳ ವಿದ್ಯಾಭ್ಯಾಸ ಪ್ರಗತಿಯಲ್ಲಿರುವುದು. ನೆರೆಹೊರೆಯವರೊಂದಿಗೆ ವಿಶ್ವಾಸ ವೃದ್ಧಿಸಲಿದೆ. ಕೆಲಸಗಳು ನಿಧಾನವಾಗಿ ಸಾಗಿದರೂ ಫಲಪ್ರದವಾಗಲಿದೆ.

ಕಟಕ:- ಸಹೋದರರ ಸಹಕಾರ ನಿಮಗೆ ದೊರೆಯಲಿದೆ. ಕೋರ್ಟು ಕಚೇರಿಯಲ್ಲಿನ ಕೆಲಸಗಳು ನಿಮ್ಮ ಪರವಾಗಿ ಆಗುವುದು. ಸಾಧು ಸಂತರ ಭೇಟಿಯಿಂದ ನಿಮ್ಮ ಭಾಗ್ಯವೇ ಬದಲಾಗುವುದು. ಕಲಾವಿದರ ಪ್ರತಿಭೆಗೆ ಉತ್ತಮ ವೇದಿಕೆ ದೊರೆಯಲಿದೆ. ಅತಿ ಉತ್ಸಾಹದಿಂದ ಕೆಲಸಗಳನ್ನು ಮಾಡಿ ಮುಗಿಸುವಿರಿ.

ಸಿಂಹ:- ವಿವಿಧ ಮೂಲಗಳಿಂದ ಹಣ ಹರಿದು ಬರುವುದು. ಸೋದರಿಯ ಸಮಸ್ಯೆ ನಿವಾರಣೆಗಾಗಿ ಸ್ಪಂದಿಸುವಿರಿ. ಹೊರಗಿನ ವ್ಯವಹಾರಗಳಿಂದ ದೂರವಿದ್ದು ವಿಶ್ರಾಂತಿ ಪಡೆಯುವಿರಿ. ಉನ್ನತ ವ್ಯಕ್ತಿಗಳೊಡನೆ ಮಾತುಕತೆ ನಡೆಸುವಿರಿ. ಆಸ್ತಿ ಸಂಬಂಧ ವಿಚಾರಗಳು ನಿಮಗೆ ತಲೆನೋವನ್ನುಂಟು ಮಾಡುವ ಸಾಧ್ಯತೆ ಇದೆ.

ಕನ್ಯಾ:- ವಾರಾಂತ್ಯದಲ್ಲಿ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಅಲ್ಲಿಯವರೆಗೂ ನೀವು ಇಚ್ಛಿಸಿದ ಕೆಲಸಗಳಿಗೆ ಹಿನ್ನಡೆಯಾಗುವ ಸಂಭವವಿರುತ್ತದೆ. ಸರ್ಕಾರಿ ಉನ್ನತಾಧಿಕಾರಿಗಳಿಗೆ ಸ್ಥಾನಪಲ್ಲಟ ಆಗಬಹುದು. ಆದಷ್ಟು ಪರಾವಲಂಬಿಗಳಾಗದೆ ಸ್ವಂತಿಕೆ ಬೆಳೆಸಿ. ಆದಾಯ ಸಾಮಾನ್ಯವಾಗಿರುತ್ತದೆ. ಮಂಗಳವಾರ ಮತ್ತು ಬುಧವಾರ ಉತ್ತಮ ದಿನಗಳು.

ತುಲಾ:- ಗ್ರಹ ಸಂಚಾರ ನಿಮ್ಮ ಬಾಳಿನಲ್ಲಿ ಹೊಸ ಗಾಳಿ ಬೀಸಿದೆ. ಹಾಗಾಗಿ ನಿಮ್ಮ ನಡೆನುಡಿಗಳಲ್ಲಿ ಸಾಕಷ್ಟು ಬದಲಾವಣೆ ಕಂಡುಬರುವುದು. ಸಮಾಜ ಸೇವೆಯಿಂದ ಸಂತೃಪ್ತಿ ಇದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವವು. ಅತಿಥಿಗಳ ಆಗಮನದಿಂದ ಸಂಭ್ರಮ ನೆಲೆಸುವುದು. ಆರೋಗ್ಯದ ಕಡೆ ಗಮನ ಹರಿಸಿ.

ವೃಶ್ಚಿಕ:- ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿ ಆದಾಯ ಸಿಗಲಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುವಿರಿ. ಉದ್ಯೋಗ ನಿಮಿತ್ತ ದೂರದ ಊರುಗಳಿಗೆ ಹೋಗಬೇಕಾಗುವುದು. ಸಂಬಂಧಿಗಳ ಸಮಸ್ಯೆ ನಿಮ್ಮ ಮಧ್ಯಸ್ಥಿಕೆಯಲ್ಲಿ ಬಗೆಹರಿಯಲಿದೆ. ಸಂತಸದ ವಾತಾವರಣ ಕಂಡುಬರುವುದು. ಮಂಗಳವಾರ ಮತ್ತು ಬುಧವಾರ ಶುಭ ದಿನಗಳು.

ಧನುಸ್ಸು:- ವೈಯಕ್ತಿಕ ಜೀವನ ಮಧುರವಾಗಿರುವುದು. ಕಚೇರಿ ಕೆಲಸಗಳಿಗೆ ಮೇಲಧಿಕಾರಿಗಳ ಪ್ರಶಂಸೆ ಸಿಗುವುದು. ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧ ಏರ್ಪಡುವುದು. ಸ್ಥಿರಾಸ್ತಿ ಖರೀದಿಗೆ ಮಾತುಕತೆ ನಡೆಯುವುದು. ಸಮಾಜ ಸೇವೆಗೆ ಉತ್ತಮ ಅವಕಾಶ ಇದೆ. ಸಂಗಾತಿ ಸಹಕಾರದಿಂದ ಕೆಲಸಗಳಲ್ಲಿ ಜಯ ಸಿಗುವುದು.

ಮಕರ:- ಸಣ್ಣಪುಟ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಮಡದಿಯೊಂದಿಗೆ ಮನಸ್ತಾಪ ಮತ್ತು ಸರ್ಕಾರಿ ನೌಕರರಿಗೆ ವರ್ಗಾವಣೆ ಇದೆ. ವ್ಯಾಪಾರ ವ್ಯವಹಾರದಲ್ಲಿ ಸಾಧಾರಣ ಆದಾಯ ಬರಲಿದೆ. ಆರೋಗ್ಯ ಅಲಕ್ಷಿಸದೆ ಮನೆ ವೈದ್ಯರ ಸಲಹೆ ಪಡೆಯಿರಿ. ನಿಮ್ಮ ದುಡುಕು ಸ್ವಭಾವವೇ ನಿಮ್ಮ ತೊಂದರೆಗಳಿಗೆ ಕಾರಣವಾಗುವುದು.

ಕುಂಭ:- ನೀವು ಹಮ್ಮಿಕೊಳ್ಳುವ ವ್ಯವಹಾರದಲ್ಲಿ ಲಾಭ ಅಧಿಕವಾಗುವುದು. ಉನ್ನತಾಧಿಕಾರಿಗಳ ಸಹಕಾರ ಸಿಗುವುದು. ಉದರ ಬೇನೆಗೆ ಸಂಬಂಧಪಟ್ಟ ತೊಂದರೆ ಎದುರಾಗುವುದು. ಒಪ್ಪಿಕೊಂಡ ಜವಾಬ್ದಾರಿಯನ್ನು ಸರಿಯಾದ ಸಮಯಕ್ಕೆ ಪೂರೈಸಿ. ಗುರುವಾರ ಮತ್ತು ಶುಕ್ರವಾರ ಉತ್ತಮ ದಿನಗಳು.

ಮೀನ:- ಕೆಲಸಗಳನ್ನು ಧಾವಂತದಲ್ಲಿ ಮಾಡಲು ಹೋಗಿ ನಷ್ಟ ಮಾಡಿಕೊಳ್ಳುವಿರಿ. ನಿಮ್ಮ ಒಳ್ಳೆಯತನವನ್ನು ಬೇರೆಯವರು ದುರುಪಯೋಗ ಪಡಿಸಿಕೊಳ್ಳದಂತೆ ಎಚ್ಚರ ವಹಿಸಿ. ಸಾಲಗಳಿಂದ ಬಿಡುಗಡೆ ಹೊಂದುವಿರಿ. ಆರ್ಥಿಕ ಮಟ್ಟ ಸುಧಾರಿಸುವುದು. ಕೋರ್ಟು ವ್ಯಾಜ್ಯಗಳು ಮುಂದೂಡಲ್ಪಡುವವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ