ಆ್ಯಪ್ನಗರ

ವಾರಭವಿಷ್ಯ 29.7.2018 ರಿಂದ 4.8.2018 ರವರೆಗೆ

- ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡುವಾಗ ಉದಾಸೀನ ಬೇಡ ಧಾರ್ಮಿಕ ಕಾರ್ಯಗಳಿಗೆ ದಾನ ಮಾಡುವುದರಿಂದ ಕಷ್ಟಗಳು ದೂರವಾಗುವವು...

Vijaya Karnataka 29 Jul 2018, 12:00 am
ಮೇಷ:- ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡುವಾಗ ಉದಾಸೀನ ಬೇಡ. ಧಾರ್ಮಿಕ ಕಾರ್ಯಗಳಿಗೆ ದಾನ ಮಾಡುವುದರಿಂದ ಕಷ್ಟಗಳು ದೂರವಾಗುವವು. ಒಳ್ಳೆಯ ಉದ್ಯೋಗಗಳು ನಿಮ್ಮನ್ನು ಹುಡುಕಿಕೊಂಡು ಬರುವವು. ಮಕ್ಕಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸಂಭ್ರಮಿಸುವರು. ಸೈಟು, ಮನೆ ಖರೀದಿಸಲು ಸೂಕ್ತ ಕಾಲ.
Vijaya Karnataka Web horoscope-1 new


ವೃಷಭ:- ಕೋರ್ಟು ಕಚೇರಿಯಲ್ಲಿನ ಕೇಸುಗಳು ನಿಮ್ಮ ಪರವಾಗಿರುವವು. ಆರೋಗ್ಯದ ಕಡೆ ಗಮನ ಕೊಡಿ. ವ್ಯಾಪಾರ ವ್ಯವಹಾರದಲ್ಲಿ ಅನಿರೀಕ್ಷಿತ ತಿರುವು ಬರಲಿದೆ. ಕೆಲವು ನಿರ್ಧಾರಗಳನ್ನು ಧೈರ್ಯದಿಂದ ತೆಗೆದುಕೊಳ್ಳುವಿರಿ. ಇದರಿಂದ ಸಂಗಾತಿ ತಮ್ಮ ಹರ್ಷ ವ್ಯಕ್ತಪಡಿಸುವರು. ಪ್ರಯಾಣ ಕಾಲದಲ್ಲಿ ಎಚ್ಚರಿಕೆ ಇರಲಿ.

ಮಿಥುನ:- ಕದಡಿದ್ದ ಕುಟುಂಬದ ನೆಮ್ಮದಿ ತಿಳಿಯಾಗುವುದು. ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಚಿಂತಿಸುವಿರಿ. ಮಕ್ಕಳ ಪ್ರತಿಭೆಗೆ ತಕ್ಕ ಪುರಸ್ಕಾರ ದೊರೆಯುವುದು. ವ್ಯವಹಾರದಲ್ಲಿ ಅಧಿಕ ಲಾಭ ಸಿಗುವುದು. ಹಮ್ಮಿಕೊಂಡ ಕಾರ್ಯಗಳು ಯಶಸ್ಸು ತಂದುಕೊಡುವವು. ಬರಲಿರುವ ಹೆಚ್ಚಿನ ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸಬೇಕೆಂದು ಆಲೋಚಿಸಿ.

ಕಟಕ:- ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ. ನಿಮಗೆ ದಕ್ಕಬೇಕಾದಷ್ಟೆ ನಿಮ್ಮ ಕೈ ಸೇರುವುದು. ಶುಭ ಕಾರ್ಯಗಳು ಸುಸೂತ್ರವಾಗಿ ನಡೆಯುವವು. ಪ್ರಮುಖ ನಿರ್ಧಾರಗಳನ್ನು ಸದ್ಯಕ್ಕೆ ಕೈಗೊಳ್ಳಬೇಡಿ. ಆರ್ಥಿಕ ಸಫಲತೆ ನಿಮ್ಮಲ್ಲಿ ಪೂರ್ಣ ಧೈರ್ಯ ತುಂಬುವುದು. ದೂರ ಪ್ರಯಾಣದಿಂದ ಆರೋಗ್ಯ ಹದಗೆಡುವುದು.

ಸಿಂಹ:- ಸಾಲ ತೀರಿಸುವಿರಿ. ಸರ್ಕಾರಿ ನೌಕರರಿಗೆ ಬಿಡುವಿಲ್ಲದ ಕೆಲಸವಿದೆ. ವಿನಾಕಾರಣ ದಂಪತಿಯಲ್ಲಿ ವಿರಸ ತಲೆದೋರುವ ಸಾಧ್ಯತೆ ಇದೆ. ಖಾಸಗಿ ಕಂಪೆನಿ ಉದ್ಯೋಗಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಮಗಳಿಗೆ ಸೂಕ್ತ ವರ ದೊರೆಯುವ ಸಾಧ್ಯತೆ ಇದೆ. ಭಾನುವಾರ ಮತ್ತು ಸೋಮವಾರ ಉತ್ತಮ ದಿನ.

ಕನ್ಯಾ:- ವಿವಾದಗಳು ಇತ್ಯರ್ಥಗೊಂಡು ನೆಮ್ಮದಿ ಕಾಣುವಿರಿ. ನಿಮ್ಮ ಮೇಲಿನ ಬೃಹತ್‌ ಜವಾಬ್ದಾರಿಯನ್ನು ಕಳೆದುಕೊಳ್ಳುವಿರಿ. ಮನಸ್ಸು ಹಕ್ಕಿಯಂತೆ ಹಾರಾಡುವುದು. ಈ ಖುಷಿಯಲ್ಲಿ ಮೂರ್ನಾಲ್ಕು ದಿನ ಪ್ರವಾಸ ಕೈಗೊಳ್ಳಿ. ಮಹಿಳೆಯರು ಉದ್ವೇಗಕ್ಕೆ ಒಳಗಾಗದೆ ತಾಳ್ಮೆಯಿಂದ ಇರುವುದು ಒಳ್ಳೆಯದು. ನಿಮ್ಮ ಸಹನೆಯೇ ಬಾಂಧವ್ಯ ವೃದ್ಧಿಸಲಿದೆ.

ತುಲಾ:- ನೀವು ಆಡುವ ಮಾತಿನಲ್ಲಿ ಡಾಂಭಿಕತೆ ನುಸುಳದಿರಲಿ. ತಾಯಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸುವಿರಿ. ರಕ್ತ ಸಂಬಂಧಗಳು ಹಾಳಾಗದಂತೆ ನೋಡಿಕೊಳ್ಳಿ. ಅನವಶ್ಯಕ ವ್ಯವಹಾರಗಳಿಂದ ದೂರವಿರಿ. ರಾಜಕೀಯ ಪಕ್ಷ ದಲ್ಲಿ ಉತ್ತಮ ಸ್ಥಾನ ಸಿಗುವುದು. ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆದು ತೇರ್ಗಡೆಯಾಗುವರು.

ವೃಶ್ಚಿಕ:- ಮಹತ್ತರ ಕಾರ್ಯವೊಂದು ನಿಮ್ಮಿಂದ ಆಗÜಲಿದೆ. ಅದಕ್ಕಾಗಿ ಸಾಮಾಜಿಕವಾಗಿ ಗೌರವಿಸಲ್ಪಡುವಿರಿ. ಮನೆಯಲ್ಲಿ ಸಣ್ಣಪುಟ್ಟ ವಸ್ತುಗಳು ಕಣ್ಮರೆ ಆಗುವ ಸಾಧ್ಯತೆ ಇದೆ. ವಾರಾಂತ್ಯದಲ್ಲಿ ನೀವು ಮಾಡದಿರುವ ತಪ್ಪಿಗೆ ಶಿಕ್ಷೆ ಅನುಭವಿಸುವಿರಿ ಅಥವಾ ಟೀಕೆಗೆ ಗುರಿಯಾಗುವಿರಿ. ವಿದ್ಯುತ್‌ ಪರಿಕರಗಳಿಂದ ಹಾನಿ ಸಂಭವವಿದ್ದು ಅವುಗಳಿಂದ ಆದಷ್ಟು ದೂರ ಇರಿ.

ಧನುಸ್ಸು:- ಹಿರಿಯರ ಆರೋಗ್ಯ ನಿಮಿತ್ತ ಆಸ್ಪತ್ರೆ ಖರ್ಚು ಎದುರಾಗುವುದು. ನಿಮ್ಮ ಶಕ್ತಿ ಮೀರಿ ಕೆಲಸ ಮಾಡದಿರಿ. ಇದರಿಂದ ದೈಹಿಕ ಮತ್ತು ಮಾನಸಿಕ ಹಿಂಸೆಗಳಿಗೆ ಒಳಗಾಗುವಿರಿ. ಕಲಾವಿದರ ಹಾಗೂ ವಿದ್ವಾಂಸರ ಭೇಟಿಯಾಗಲಿದೆ. ಭೂಸಂಬಂಧಿ ವ್ಯವಹಾರಗಳಿಂದ ಒಳಿತಾಗುವುದು. ಸಂಗಾತಿ ಸಲಹೆಯಂತೆ ನಡೆದರೆ ಒಳಿತಾಗುವುದು.

ಮಕರ:- ಅನಿರೀಕ್ಷಿತವಾಗಿ ಸಾಧು ಸಂತರನ್ನು ಭೇಟಿಯಾಗುವಿರಿ. ಗೊಂದಲ ತಿಳಿಯಾಗುವುದು. ಸದ್ಯದಲ್ಲೇ ಶುಭ ಸಮಾಚಾರ ಕೇಳುವಿರಿ. ನಿಮ್ಮ ಹೆಸರು ಮತ್ತು ಒಳ್ಳೆಯತನ ದುರುಪಯೋಗ ಆಗದಂತೆ ನೋಡಿಕೊಳ್ಳಿ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಕುಂಭ:- ಹಮ್ಮಿಕೊಂಡ ಕಾರ್ಯ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಕೃಷಿಕರಿಗೆ ಹಾಗೂ ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಲಾಭವಿದೆ. ಕುಟುಂಬ ಸದಸ್ಯರ ಬೆಂಬಲ ನಿಮಗಿದೆ. ದೈನಂದಿನ ಕೆಲಸಗಳು ನಿರಾತಂಕವಾಗಿ ಮುಗಿಯುವವು. ಮನದ ಅನಿಸಿಕೆಗಳನ್ನು ಹಿರಿಯರ ಅಥವಾ ಹಿತೈಷಿಗಳ ಮುಂದೆ ಹೇಳಿಕೊಳ್ಳಿ.

ಮೀನ:- ನ್ಯಾಯಾಲಯದ ಖಟ್ಲೆಗಳು ನಿಮ್ಮ ಪರವಾಗಲಿವೆ. ವೈಯಕ್ತಿಕ ಜೀವನ ಉತ್ತಮಗೊಳ್ಳಲಿದೆ. ಸರ್ಕಾರಿ ಉನ್ನತಾಧಿಕಾರಿಗಳಿಗೆ ಸ್ಥಾನಪಲ್ಲಟವಾಗಲಿದೆ. ಹಳೆ ಮನೆ ರಿಪೇರಿ ಕಾರ್ಯ ಮಾಡುವಿರಿ ಅಥವಾ ಹಳೆ ಮನೆ ಮಾರಾಟ ಮಾಡುವಿರಿ. ಸಹಕಾರ ಸಂಸ್ಥೆಗಳಿಂದ ಧನ ಸಹಾಯ ದೊರೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ