Please enable javascript.Kataka Rashi Ugadi Rashi Phala 2024,ಯುಗಾದಿ ಭವಿಷ್ಯ 2024-25: ಕಟಕ ರಾಶಿಯವರಿಗೆ ಈ ಹೊಸ ವರ್ಷ ಏನೇನು ತರಲಿದೆ? - ugadi horoscope 2024 kataka rashi krodhi nama samvatsara rashi phala in kannada - Vijay Karnataka

ಯುಗಾದಿ ಭವಿಷ್ಯ 2024-25: ಕಟಕ ರಾಶಿಯವರಿಗೆ ಈ ಹೊಸ ವರ್ಷ ಏನೇನು ತರಲಿದೆ?

Authored by ಆಶಾ ಸಂಪದ | Agencies 30 Mar 2024, 6:48 pm
Subscribe

Ugadi 2024: ಈ ಸಲ ಶ್ರೀ ಕ್ರೋಧಿ ಸಂವತ್ಸರ. ಹೆಸರಲ್ಲೇ ಕ್ರೋಧ ಇರುವ ಸಂವತ್ಸರ. ಈ ಯುಗಾದಿ ಬಳಿಕ ಹೊಸ ವರ್ಷದಲ್ಲಿ ಕರ್ಕಾಟಕ ರಾಶಿಯವರಿಗೆ ಏನೇನು ಫಲ ಸಿಗಲಿದೆ, ಒಳಿತಾಗಲಿದೆಯೋ, ಎಚ್ಚರಿಕೆಯಿಂದ ಇರಬೇಕೋ ಎಂಬುದರ ಕುರಿತ ಯುಗಾದಿ ವರ್ಷ ಭವಿಷ್ಯ ಇಲ್ಲಿದೆ.

kataka ugadi
2024ರ ಏಪ್ರಿಲ್ 9ರಂದು ಯುಗಾದಿ. ಅಂದು ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷ ಆರಂಭವಾಗಲಿದೆ. ಈ ಹೊಸ ಸಂವತ್ಸರಕ್ಕೆ ಶ್ರೀ ಕ್ರೋಧಿ ಸಂವತ್ಸರ ಎಂದು ಹೆಸರಿದೆ. ಹೆಸರಲ್ಲೇ ಕ್ರೋಧ ಇರುವುದರಿಂದ ಈ ವರ್ಷ ಹೇಗೋ ಎಂಬ ಅನುಮಾನ ಆಸಕ್ತರಲ್ಲಿ ಮೂಡಬಹುದಾಗಿದೆ. ಕರ್ಕಾಟಕ ರಾಶಿಯವರು ಈ ಕುರಿತು ಹೆಚ್ಚು ಆತಂಕ ಪಡುವ ಅವಶ್ಯಕತೆ ಏನೂ ಇಲ್ಲ. ವೃತ್ತಿ ಕ್ಷೇತ್ರದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಇದೇ ಥರ ಬೇರೆ ಬೇರೆ ವಿಚಾರಗಳಲ್ಲಿ ಕರ್ಕಾಟಕ ರಾಶಿಯವರಿಗೆ ಏನೇನು ಫಲಗಳು ದೊರೆಯಲಿವೆ ಎಂಬುದನ್ನು 2024ರ ಈ ಯುಗಾದಿ ರಾಶಿ ಫಲದಲ್ಲಿ ನೋಡೋಣ.


ಕರ್ಕಾಟಕ ರಾಶಿಯವರ ವೃತ್ತಿ ಫಲ
Professional Life
ವೃತ್ತಿ ವಿಚಾರದಲ್ಲಿ ನೀವು ಸಂತೋಷ ಪಡಬಹುದಾದ ಬೆಳವಣಿಗೆಗೆಳು ನಡೆಯಲಿವೆ. ಕೆಲಸದಲ್ಲಿ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ದೊಡ್ಡ ಜವಾಬ್ದಾರಿ ತೆಗೆದುಕೊಳ್ಳುವ ಅವಕಾಶವೂ ಎದುರಾಗಬಹುದಾಗಿದೆ. ನಿಮ್ಮ ಶ್ರಮಕ್ಕೆ ತಕ್ಕ ಫಲ ದೊರೆಯಬಹುದು. ಕಷ್ಟ ಪಟ್ಟಿದ್ದು ಸಾರ್ಥಕ ಎಂಬಂತೆ ಮನ್ನಣೆ ದೊರೆಯುತ್ತದೆ. ಉತ್ತಮ ಫಲ ನಿಮಗೆ ಸಿಗಲಿದೆ. ಕೆಲಸದಲ್ಲಿ ಬಡ್ತಿ ದೊರೆಯಬಹುದಾಗಿದೆ. ವೃತ್ತಿ ಜೀವನಕ್ಕೆ ಸಂಬಂಧಿಸಿದ ಹೊಸ ಕೌಶಲ್ಯಗಳನ್ನು ಕಲಿಯಲಿದ್ದೀರಿ. ವೃತ್ತಿ ಮಾರ್ಗದರ್ಶನವನ್ನು ಪಡೆಯುವ ಮನಸ್ಸು ಮಾಡಬಹುದಾಗಿದೆ. ಈ ಅವಧಿಯಲ್ಲಿ ನೀವು ಮೊದಲಿಗಿಂತ ಹೆಚ್ಚೇ ಕಠಿಣ ಶ್ರಮ ಪಡುತ್ತೀರಿ. ಅದು ಈ ಸಂದರ್ಭಕ್ಕೆ ಅವಶ್ಯವೂ ಹೌದು. ಗಮನವಿಟ್ಟು, ಶಿಸ್ತಿನಿಂದ ಕಾರ್ಯನಿರ್ವಹಣೆ ಮಾಡಬೇಕಾಗುತ್ತದೆ. ಸಹೋದ್ಯೋಗಿಗಳ ಜೊತೆ ಉತ್ತಮವಾಗಿ ಇರುವುದು ಮುಖ್ಯ. ನೀವು ಉದ್ಯೋಗಿಗಳಾಗಿದ್ದರೆ ವ್ಯಾಪಾರ ಪಾಲುದಾರರಿದ್ದರೆ ಅವರೊಂದಿಗೆ ಜೊತೆಯಾಗಿ ಮುಂದೆ ಸಾಗಬೇಕು. ತಂಡದ ಭಾಗವಾಗಿ, ತಂಡದಲ್ಲಿ ಒಂದಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಉಂಟಾಗಬಹುದು.
Ugadi Rashi Phala 2024: ಮಿಥುನ ರಾಶಿ ಯುಗಾದಿ ಭವಿಷ್ಯ: ಈ ಯುಗಾದಿಯಿಂದ ನಿಮ್ಮ ಕೈ ಹಿಡಿಯಲಿದೆ ಅದೃಷ್ಟ..!

ಕರ್ಕಾಟಕ ರಾಶಿಯವರ ಆರ್ಥಿಕ ಸ್ಥಿತಿಗತಿ
money
ಆರ್ಥಿಕವಾಗಿ ನೀವು ಹಿನ್ನಡೆ ಅನುಭವಿಸುವುದಿಲ್ಲ. ಆ ನಿಟ್ಟಿನಲ್ಲಿ ಸುರಕ್ಷಿತರು. ಜೇಬು ಇದ್ದ ಹಾಗೆಯೇ ಇರುತ್ತದೆ. ನೀವು ಆರಾಮದಾಯಕ ಜೀವನ ನಡೆಸುತ್ತೀರಿ. ಹಣ ಗಳಿಸುತ್ತೀರಿ ಮತ್ತು ಅದಕ್ಕೆ ತಕ್ಕಂತೆ ಉಳಿತಾಯ ಕೂಡ ಮಾಡುತ್ತೀರಿ. ಆರ್ಥಿಕವಾಗಿ 2024 ನಿಮಗೆ ಉತ್ತಮ ವರ್ಷ. ಈ ಅವಧಿಯಲ್ಲಿ ಹೆಚ್ಚುವರಿ ಆದಾಯ ಗಳಿಕೆ ಅವಕಾಶ ಒದಗಿ ಬರಲಿದೆ. ಕೆಲಸಕ್ಕೆ ಹೊರತಾಗಿ ಹೆಚ್ಚುವರಿ ಪ್ರೊಜೆಕ್ಟ್ ಮಾಡುವ ಚಾನ್ಸ್ ಹೊಂದಲಿದ್ದೀರಿ. ದೀರ್ಘಾವಧಿಯ ಹೂಡಿಕೆ ಮಾಡಲು ಇದು ಉತ್ತಮ ಸಮಯ. ಸ್ಟಾಕ್ ಗಳು, ಮ್ಯೂಚುವಲ್ ಫಂಡ್ ಗಳು, ರಿಯಲ್ ಎಸ್ಟೇಟ್ ಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ನಿಮ್ಮ ಹೂಡಿಕೆಗೆ ಲಾಭದಾಯಕ ಪ್ರತಿಫಲ ದೊರೆಯಲಿದೆ. ಆದರೆ ಖರ್ಚು ಮಾಡುವಾಗ ಎಚ್ಚರಿಕೆ ಇರಲಿ. ಖರ್ಚು ಮಾಡಲು ನಿಂತರೆ ಯಾವಾಗ ಜೇಬು ಖಾಲಿಯಾಗುತ್ತದೆ ಎಂಬುದೇ ಗೊತ್ತಾಗುವುದಿಲ್ಲ. ಹಣಕಾಸಿನ ಸ್ಥಿರತೆ ಇದ್ದರೂ ಖರ್ಚು ಮಾಡುವಾಗ ಮಾತ್ರ ಹುಷಾರಾಗಿರಬೇಕು. ಬುದ್ಧಿವಂತಿಕೆಯಿಂದ ಅಗತ್ಯಗಳಿಗೆ ಮಾತ್ರ ಕಾಸು ಖರ್ಚು ಮಾಡಬೇಕು. ನಿಮ್ಮ ಸಮಯ ಚೆನ್ನಾಗಿ ನಡೆಯುತ್ತಿದ್ದರೂ ಅನವಶ್ಯಕವಾಗಿ ಅಪಾಯ ಎದುರು ಹಾಕಿಕೊಳ್ಳಲು ಹೋಗದಿರಿ. ಅತ್ಯಧಿಕ ಲಾಭ ಕಾಣಿಸುತ್ತಿದೆ ಎಂಬ ಕಾರಣಕ್ಕಾಗಿ ಆಲೋಚನೆಯೇ ಮಾಡದೆ ಅಪಾಯಕ್ಕೆ ಎದುರಾಗಬೇಡಿ. ಹಠಾತ್ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಮಾಡಬೇಡಿ. ತಾಳಿದಯವನು ಬಾಳಿಯಾನು.


ಆರೋಗ್ಯ ಕಾಳಜಿ
ಈ ಅವಧಿಯಲ್ಲಿ ಆರೋಗ್ಯವು ಉತ್ತಮ ಸ್ಥಿತಿಯಲ್ಲಿ ಇರುತ್ತದೆ. ಹಿತ ಮಿತವಾದ ಆಹಾರ ಸೇವನೆ ಮಾಡಿಕೊಂಡು ವ್ಯಾಮಾಮ ಮಾಡುತ್ತಾ ಆರೋಗ್ಯ ನೋಡಿಕೊಂಡು ಇರಬಹುದು. ಸ್ವಲ್ಪ ಹೆಚ್ಚಿನ ಕಾಳಜಿ ವಹಿಸಿದರೆ ಇನ್ನೂ ಒಳೆಯದು. ಈ ಸಮಯದಲ್ಲಿ ಮಾನಸಿಕವಾಗಿ ಸದೃಢರಾಗಿರಬಹುದು. ಇದರಿಂದ ಗುರಿ ಸಾಧನೆಗೆ ಸಹಾಯವಾಗುತ್ತದೆ. ಇದಕ್ಕಾಗಿ ನೀವು ಸಮತೋಲಿತ ಜೀವನಶೈಲಿ ಕಾಪಾಡಿಕೊಳ್ಳಬೇಕು. ಸಾಕಷ್ಟು ವಿಶ್ರಾಂತಿ ಪಡೆಯಬೇಕು. ಒತ್ತಡ ನಿರ್ವಹಿಸಬೇಕು. ಶಾಂತ ಚಿತ್ತರಾಗಿ ಇರಬೇಕು. ಈ ಸಮಯದಲ್ಲಿ ವೈದ್ಯರು ಮತ್ತು ದಂತವೈದ್ಯರ ಬಳಿ ಹೋಗಿ ನಿಯಮಿತ ಚೆಕಪ್ ಮಾಡಿಸುವುದು ಒಳ್ಳೆಯದು. ಆರೋಗ್ಯ ಕೈ ಕೊಡುವ ಮೊದಲೇ ಆರೋಗ್ಯ ಕಾಪಾಡಿಕೊಳ್ಳುವುದು ಜಾಣತನ. ಮನಸ್ಸು ಮತ್ತು ದೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಧ್ಯಾನ ಮಾಡಬಹುದು. ಇದರಿಂದ ಒತ್ತಡ ನಿವಾರಣೆ, ಶಾಂತ ಚಿತ್ತ ಎಲ್ಲವೂ ಆಗಲಿದೆ.


ಕೌಟುಂಬಿಕ ಜಿವನ
love
ಕುಟುಂಬದ ಜೊತೆ ಉತ್ತಮ ಬಾಂಧವ್ಯ ನಿರ್ವಹಣೆ ಮಾಡುತ್ತೀರಿ. ಈ ಅವಧಿಯಲ್ಲಿ ಕುಟುಂಬದವರ ಮತ್ತು ನಿಮ್ಮ ಬಾಂಧವ್ಯ ಚೆನ್ನಾಗಿರುತ್ತದೆ. ನಿಮ್ಮ ಕುಟುಂಬದ ಬೆಂಬಲವೇ ನಿಮ್ಮ ದೊಡ್ಡ ಶಕ್ತಿ ಆಗಿರುತ್ತದೆ. ಭಾವನಾತ್ಮಕ ಸಂಬಂಧಗಳು ನಿಮ್ಮನ್ನು ಕಾಳಜಿ ವಹಿಸಲಿವೆ. ಸಾಮರಸ್ಯತೆಯಿಂದ ಸಂತೋಷ ಸಿಗಲಿದೆ. ಎಲ್ಲರೊಂದಿಗೆ ಉತ್ತಮವಾಗಿ ಮಾತುಕತೆ ನಡೆಸುವುದರಿಂದ ಸಂತೋಷ ಸಿಗಲಿದೆ. ಸಮಯ ಕೊಟ್ಟು ಚೆನ್ನಾಗಿ ಮಾತನಾಡಿಸಿದಾಗ ಬಾಂಧವ್ಯ ವೃದ್ಧಿ ಆಗಲಿದೆ. ತಪ್ಪು ತಿಳುವಳಿಕೆ ಉಂಟಾಗುವುದನ್ನು ತಪ್ಪಿಸಲು ನೀವು ಮುಕ್ತವಾಗಿ ಮಾತನಾಡುವುದೇ ಒಳ್ಳೆಯದು. ನಿಮ್ಮ ಭಾವನೆಗಳಲ್ಲಿ, ವಿಚಾರಗಳಲ್ಲಿ ಸ್ಪಷ್ಟತೆ ಇದ್ದಷ್ಟು ಎಲ್ಲವೂ ತಿಳಿಯಾಗಿ ಇರುವುದು.
ಕುಟುಂಬದ ಸದಸ್ಯರ ಜೊತೆಗೆ ಉತ್ತಮ ಬಾಂಧವ್ಯ ರೂಪಿಸಿಕೊಳ್ಳಲು ಅವರೊಂದಿಗೆ ಗುಣಮಟ್ಟದ ಸಮಯ ಕಳೆಯುವುದು ಕೂಡ ಮುಖ್ಯ. ಜೊತೆಯಾಗಿ ತಮ್ಮ ತಮ್ಮ ಆಸಕ್ತಿ, ಹವ್ಯಾಸಗಳ ಕುರಿತು ಚರ್ಚೆ ನಡೆಸುವುದರಿಂದಲೂ ಪರಸ್ಪರ ಮಧ್ಯೆ ಇರಬಹುದಾದ ಭಾರಗಳು ಕಳೆದುಹೋಗುತ್ತವೆ. ಈ ಅವಧಿಯಲ್ಲಿ ಮನೆ ಕಡೆ ಹೆಚ್ಚು ಗಮನ ಕೊಡಬೇಕಾಗಬಹುದು. ಆರ್ಥಿಕ ನಿರ್ವಹಣೆಯ ಜವಾಬ್ದಾರಿ ಹೊರಬೇಕಾಗಬಹುದು. ಕೌಟುಂಬಿಕ ಕಾರ್ಯಕ್ರಮಗಳು ಜರುಗುವ ಸಾಧ್ಯತೆ ಇದೆ. ಕುಟುಂಬದ ಸದಸ್ಯರ ಜೊತೆಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ.
Shani Vakri: ಈ ರಾಶಿಯ ಜನರಿಗೆ ಶನಿ ದಯೆ.. ಅದೃಷ್ಟದ ಜೊತೆಗೆ ಐಷಾರಾಮಿ ಜೀವನ!

ಕರ್ಕಾಟಕ ರಾಶಿಯವರ ಶಿಕ್ಷಣ
ಶಿಕ್ಷಣದ ವಿಚಾರದಲ್ಲಿ ಕರ್ಕಾಟಕ ರಾಶಿಯವರಿಗೆ ಈ ಅವಧಿಯಲ್ಲಿ ಗೆಲುವು ಸಿಗಬಹುದು. ತುಂಬಾ ಚೆನ್ನಾಗಿ ವಿಷಯಗಳನ್ನು ಅರ್ಥ ಮಾಡಿಕೊಂಡು ಗ್ರಹಿಸುವ ಸಾಮರ್ಥ್ಯ ಗಳಿಸುತ್ತೀರಿ. ಅದರಿಂದ ಉತ್ತಮ ಅಧ್ಯಯನ ಮಾಡಲು ಸಾಧ್ಯವಾಗಲಿದೆ. ನೀವು ಆಯ್ಕೆ ಮಾಡಿದ ಅಧ್ಯಯನ ಕ್ಷೇತ್ರದಲ್ಲಿ ಬಲವಾದ ಅಡಿಪಾಯ ಹಾಕಲು ಇದು ಪ್ರಶಸ್ತ ಸಮಯ. ಅದಕ್ಕೆ ಪೂರಕವಾಗಿ ನಿಮ್ಮ ಕೋರ್ಸ್ ಗೆ ನೆರವಾಗುವಂತಹ ಕೌಶಲ್ಯ ಗಳಿಸಿಕೊಳ್ಳಲು ಹೆಚ್ಚುವರಿ ಕೋರ್ಸ್ ಅಥವಾ ಸೆಮಿನಾರ್ ಗಳಲ್ಲಿ ಭಾಗವಹಿಸಬೇಕಾಗಬಹುದು. ಈ ಸಮಯದಲ್ಲಿ ನಿಮ್ಮ ಸುತ್ತಮುತ್ತಲೂ ಇರುವ ಕಲಿಕಾ ವಾತಾವರಣ ನಿಮ್ಮ ನೆರವಿಗೆ ಬರಲಿದೆ. ಎಲ್ಲರೂ ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ. ಈ ಸ್ಫೂರ್ತಿದಾಯಕ ವಾತಾವರಣದಿಂದ ನೀವು ಉತ್ತೇಜನ ಪಡೆದುಕೊಳ್ಳುತ್ತೀರಿ. ಇತರ ಜವಾಬ್ದಾರಿಗಳ ಜೊತೆಗೆ ನೀವು ಅಧ್ಯಯನವನ್ನು ಸಮತೋಲನ ಸ್ಥಿತಿಯಲ್ಲಿ ನಡೆಸಿಕೊಂಡು ಹೋಗಬೇಕಾಗಿರುತ್ತದೆ. ಸಮಯ ನಿರ್ವಹಣೆ ಬಹಳ ಮುಖ್ಯವಾಗಿರುತ್ತದೆ. ಸಮಯ ನಿರ್ವಹಣೆಗೆ ಸೂಕ್ತವಾಗಿ ವೇಳಾಪಟ್ಟಿ ರಚಿಸುವುದರ ಮೂಲಕ ಪರಿಣಾಮಕಾರಿ ಅಧ್ಯಯನ ಮಾಡಬಹುದಾಗಿದೆ.


ಕರ್ಕಾಟಕ ರಾಶಿಯವರ ಮದುವೆ ಭವಿಷ್ಯ
Marriage
ವಿವಾಹದ ನಿರೀಕ್ಷೆಯಲ್ಲಿರುವ ಕರ್ಕಾಟಕ ರಾಶಿಯವರಿಗೆ ಇದು ಉತ್ತಮ ಸಮಯ. ಸಕಾರಾತ್ಮಕ ಸಂಗತಿಗಳು ಜರುಗಬಹುದಾಗಿದೆ. ನಿಮ್ಮ ಸ್ವಭಾವಕ್ಕೆ ಸರಿಹೊಂದು, ಒಂದೇ ರೀತಿ ಮೌಲ್ಯ ಮತ್ತು ಆಸಕ್ತಿ ಹೊಂದಿರುವ ವ್ಯಕ್ತಿಗಳನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಈ ವರ್ಷದ ಮತ್ತೊಂದು ವಿಶೇಷವೆಂದರೆ ಬದ್ಧತೆಯುಳ್ಳ ವ್ಯಕ್ತಿಯ ಜೊತೆ ದೀರ್ಘಾವಧಿ ಸಂಬಂಧಗಳನ್ನು ಸಾಧಿಸುವ ಸಾಧ್ಯತೆ ಬಹಳ ಇದೆ. ಈ ಹಂತದಲ್ಲಿ ನೀವು ಮದುವೆಗೆ ಸಂಪೂರ್ಣ ಸಿದ್ದರಾಗುವ ಲಕ್ಷಣ ಇದೆ. ನಿಮಗೆ ಭಾವನಾತ್ಮಕತೆ ಮತ್ತು ತಿಳುವಳಿಕೆ ಮುಖ್ಯವಾಗಿದೆ. ನಿಮ್ಮ ಜೊತೆಗೆ ಈ ವಿಚಾರಗಳಲ್ಲಿ ಹೊಂದಿಕೊಳ್ಳುವ, ಕಾಳಜಿ ವಹಿಸುವ, ಸಹಾನುಭೂತಿ ಹೊಂದಿರುವ, ನಿಮಗೆ ಭದ್ರತೆಯ ಭಾವನೆಯನ್ನು ಒದಗಿಸುವ ವ್ಯಕ್ತಿಯನ್ನು ನೀವು ಸೆಳೆಯಲಿದ್ದೀರಿ. ಅವರ ಜೊತೆಗಿನ ಉತ್ತಮ ಸಂವಹನವು ಮುಂದಿನ ಬದುಕಿಗೆ ದಾರಿಯಾಗಬಹುದು. ನಿಮ್ಮ ಅಗತ್ಯ ಮತ್ತು ನಿರೀಕ್ಷೆಗಳ ಬಗ್ಗೆ ಮುಕ್ತವಾಗಿ, ಪ್ರಾಮಾಣಿಕವಾಗಿ ಮಾತನಾಡಿದೆ. ಮತ್ತು ಅವರು ಹೇಳುವುದನ್ನು ಗಮನವಿಟ್ಟು ಕೇಳಿ. ಒಳ್ಳೆಯ ದಿನಗಳು ನಿಮ್ಮ ಪಾಲಿಗೆ ಒದಗಿ ಬರಲಿದೆ.
Money Plant Vastu Tips: ಮನಿ ಪ್ಲಾಂಟ್ ಕದ್ದು ನೆಟ್ಟರೆ ಸಂಪತ್ತು ವೃದ್ಧಿ! ಆದರೆ ಈ 5 ವಿಚಾರಗಳು ಗೊತ್ತಿರಲಿ

ಮುನ್ನೆಚ್ಚರಿಕೆಗಳು
ನಿಮ್ಮ ಜಾತಕದ ಗ್ರಹಗಳ ಸ್ಥಾನದಲ್ಲಿ ಗುರು ಅನುಕೂಲಕರ ಸ್ಥಾನದಲ್ಲಿ ಇದ್ದಾನೆ. ಶನಿಯು ನಿಮ್ಮನ್ನು ಸಾಲಕೂಪಕ್ಕೆ ಹಾಕಬಹುದಾದರೂ ಆ ಸಾಲವನ್ನು ನೀವು ಯಶಸ್ವಿಯಾಗಿ ತೀರಿಸುತ್ತೀರಿ.
ನ್ಯಾಯಾಲಯದ ಪ್ರಕರಣಗಳಲ್ಲಿ, ಕಾನಾನು ವಿಚಾರಗಳಲ್ಲಿ ನೀವು ಜಯ ಗಳಿಸುತ್ತೀರಿ.
ಶತ್ರುಗಳು ನಿಮ್ಮ ಬಲಹೀನತೆ ಕುರಿತು ತಿಳಿದುಕೊಳ್ಳುತ್ತಾರೆ. ಅದರಿಂದ ನೀವು ಧೃತಿಗೆಡದೆ ನಿಮ್ಮ ಬಲ ಹೆಚ್ಚಿಸುವುದರ ಕಡೆಗೆ ನೋಡಿಕೊಳ್ಳಿ.


ಪರಿಹಾರಗಳು
ಸೋಮವಾರ ಮತ್ತು ಗುರುವಾರ ಶಿವ ದೇವರನ್ನು ಆರಾಧಿಸಿ. ಸಾಧ್ಯವಾದರೆ ಮಹಾದೇವನ ಸನ್ನಿಧಾನಕ್ಕೆ ಹೋಗಿಬನ್ನಿ.
2 ಮುಖದ ರುದ್ರಾಕ್ಷಿಯನ್ನು ಧರಿಸಿ. ಗೌರಿ ಶಂಕರನ ಪೂಜೆ ಮಾಡಿ.
ಸೋಮವಾರದಂದು ಮುತ್ತು ಧರಿಸಿ. ಶಿವನಿಗೆ ಅಭಿಷೇಕ ಮಾಡಿ.
ಶನಿವಾರದಂದು ಶನಿಯನ್ನು ಪೂಜಿಸಿ. ಶನಿ ಸಂತೃಪ್ತನಾಗಲಿ.
 ಆಶಾ ಸಂಪದ
ಲೇಖಕರ ಬಗ್ಗೆ
ಆಶಾ ಸಂಪದ
ಆಶಾ ಸಂಪದ ಅವರು ಅನುಭವಿ ಪತ್ರಕರ್ತರಾಗಿದ್ದು, ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ 2022ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2014ರಲ್ಲಿ ನ್ಯೂಸ್ ಚಾನೆಲ್ ಮೂಲಕ ವೃತ್ತಿಜೀವನ ಪ್ರಾರಂಭಿಸಿದ ಇವರು ಮಾಧ್ಯಮ ರಂಗದಲ್ಲಿ 9 ವರ್ಷ ಅನುಭವ ಹೊಂದಿದ್ದಾರೆ. ಪ್ರಸ್ತುತ ಜ್ಯೋತಿಷ್ಯ ವಿಭಾಗದ ಸಂಪಾದಕರಾಗಿ 1 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದು, ಅದಕ್ಕೂ ಹಿಂದಿನಿಂದ ವಾರಪತ್ರಿಕೆಗಳಿಗೆ ಪ್ರಚಲಿತ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಲೇಖನಗಳ ಬರವಣಿಗೆಯಿಂದ ಗುರುತಿಸಿಕೊಂಡಿರುತ್ತಾರೆ. ಕೆಲಸದ ಹೊರತಾಗಿ, ಓದು, ಪ್ರವಾಸ, ಫೋಟೋಗ್ರಫಿ, ಯೋಗ ಇವರ ಇಷ್ಟದ ಅಭ್ಯಾಸ-ಹವ್ಯಾಸಗಳು. ಎಸ್.ಎಲ್ ಭೈರಪ್ಪ ಇವರ ನೆಚ್ಚಿನ ಲೇಖಕರು.... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ