ಆ್ಯಪ್ನಗರ

ಯುಗಾದಿ ರಾಶಿಫಲ: ಕುಂಭ ರಾಶಿಯವರಿಗೆ ಉತ್ತಮ ಆರ್ಥಿಕ ಲಾಭವನ್ನು ತರುವ ವರ್ಷ

2020-21ರಲ್ಲಿ ಕುಂಭ ರಾಶಿಯವರಿಗೆ ರಾಹು 4 ನೇ ಮನೆಯಲ್ಲಿದ್ದರೆ, ಕೇತು 10 ನೇ ಮನೆಯಲ್ಲಿರುತ್ತಾನೆ. ಆದ್ದರಿಂದ ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ವರ್ಷವು ಉತ್ತಮವಾಗಿದೆ.ಈ ವರ್ಷದಲ್ಲಿ ವೆಚ್ಚಗಳು ಸಾಮಾನ್ಯವಾದರೂ ಗಳಿಕೆಗಳು ಹೆಚ್ಚು. ಕುಂಭ ರಾಶಿಯವರ ಯುಗಾದಿ ವಾರ್ಷಿಕ ಫಲದ ವಿವರ ಇಲ್ಲಿದೆ

Vijaya Karnataka Web 25 Mar 2020, 1:45 pm
ಹಿಂದೂ ಜ್ಯೋತಿಷ್ಯದ ಹನ್ನೆರಡು ರಾಶಿ ಚಕ್ರಗಳಲ್ಲಿ ಕುಂಭ ರಾಶಿ ಹನ್ನೊಂದನೆಯದು.ಧನಿಷ್ಠ ನಕ್ಷತ್ರ 3, 4 ಪಾದಗಳು, ಶತಭಿಷ ನಕ್ಷತ್ರ, ಪೂರ್ವಭಾದ್ರಾ ನಕ್ಷತ್ರ 1, 2, 3 ಪಾದಗಳನ್ನು ಕುಂಭ ರಾಶಿಗೆ ಸೇರಿಸಲಾಗಿದೆ. ಹಿಂದೂ ಪಂಚಾಂಗದ ಪ್ರಕಾರ, 2020-2021ರ ವರ್ಷವು ಶಾರ್ವರಿ ನಾಮ ಸಂವತ್ಸರ. ಇದು ಮಾರ್ಚ್ 25, 2020 ಯುಗಾದಿಯಂದು ಪ್ರಾರಂಭವಾಗಿ, 12 ಏಪ್ರಿಲ್ 2021 ರಂದು ಕೊನೆಗೊಳ್ಳುತ್ತದೆ. ಈ ಹಿಂದೂ ವರ್ಷದ ಅನುಸಾರವಾಗಿ ಕುಂಭ ರಾಶಿಯವರ ವಾರ್ಷಿಕ ರಾಶಿ ಫಲ.
Vijaya Karnataka Web ಕುಂಭ ರಾಶಿ ಯುಗಾದಿ ವಾರ್ಷಿಕ ಫಲ


ಗ್ರಹ ಸಂಚಾರ
ಗುರು 2020 ರ ಮಾರ್ಚ್ 29 ರಿಂದ 2020 ರ ಜೂನ್ 30 ರವರೆಗೆ 12 ನೇ ಮನೆಯಲ್ಲಿ ಇರಲಿದ್ದಾನೆ. 30 ಜೂನ್ 2020 ರಿಂದ 20 ನವೆಂಬರ್ 2020 ರವರೆಗೆ 11 ನೇ ಮನೆಯಲ್ಲಿ ಇರಲಿದ್ದಾನೆ. ಇನ್ನುಳಿದ ವರ್ಷ, ಗುರು 12 ನೇ ಮನೆಯಲ್ಲಿ ನೆಲೆಸಲಿದ್ದಾನೆ. ಶನಿಯು ವರ್ಷಪೂರ್ತಿ 12 ನೇ ಮನೆಯಲ್ಲಿ ಇರುತ್ತಾನೆ. ರಾಹು 5 ನೇ ಮನೆಯಲ್ಲಿ 2020 ಸೆಪ್ಟೆಂಬರ್ 23 ರವರೆಗೆ ಮತ್ತು ವರ್ಷದ ಅಂತ್ಯದವರೆಗೆ 4 ನೇ ಮನೆಯಲ್ಲಿರುತ್ತಾನೆ. ಕೇತು 2020 ರ ಸೆಪ್ಟೆಂಬರ್ 23 ರವರೆಗೆ 11 ನೇ ಮನೆಯಲ್ಲಿ ಮತ್ತು ವರ್ಷದ ಅಂತ್ಯದವರೆಗೆ 10 ನೇ ಮನೆಯಲ್ಲಿರುತ್ತಾನೆ.

ಯುಗಾದಿ ರಾಶಿ ಫಲ: ಧನು ರಾಶಿಯವರ ಇಚ್ಛಾಶಕ್ತಿಯಲ್ಲಿ ಸುಧಾರಣೆ ಕಂಡುಬರುವುದು!

ಸಾಮಾನ್ಯ ಭವಿಷ್ಯ
ಹಿಂದೂ ಪಂಚಾಂಗದ ಪ್ರಕಾರ ಈ ವರ್ಷ ಕುಂಭ ರಾಶಿಯವರಿಗೆ ಉತ್ತಮ ವರ್ಷವಾಗಿದೆ. ಈ ವರ್ಷ ಕುಂಭ ರಾಶಿಯ 12 ನೇ ಮನೆಯಲ್ಲಿ ಶನಿ ಮತ್ತು 11 ಮತ್ತು 12 ಮನೆಗಳಲ್ಲಿ ಗುರು ಚಲಿಸಲಿದ್ದಾನೆ. ಕುಂಭ ರಾಶಿಯವರಿಗೆ 12 ನೇ ಮನೆಯಲ್ಲಿನ (ಶನಿ ಸಾಡೇಸಾತಿ ಪ್ರಾರಂಭ) ಶನಿ, ಆರೋಗ್ಯ, ಕುಟುಂಬ ಮತ್ತು ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಸರಾಸರಿ ಸಮಯವನ್ನು ಕೊಡಲು ಅನುವಾಗುತ್ತದೆ. ಈ ರಾಶಿಯವರು ಖ್ಯಾತಿ ಗಳಿಸಿ, ಉತ್ತಮ ಆರ್ಥಿಕ ಲಾಭಗಳನ್ನು ಹೊಂದುತ್ತಾರೆ.

2020-21ರಲ್ಲಿ ಕುಂಭ ರಾಶಿಯವರಿಗೆ ರಾಹು 4 ನೇ ಮನೆಯಲ್ಲಿದ್ದರೆ, ಕೇತು 10 ನೇ ಮನೆಯಲ್ಲಿರುತ್ತಾನೆ. ಆದ್ದರಿಂದ ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ವರ್ಷವು ಉತ್ತಮವಾಗಿದೆ.ಈ ವರ್ಷದಲ್ಲಿ ವೆಚ್ಚಗಳು ಸಾಮಾನ್ಯವಾದರೂ ಗಳಿಕೆಗಳು ಹೆಚ್ಚು. ಸಂಗಾತಿ ಜೊತೆಗಿನ ಜೀವನವೂ ಸರಾಸರಿ ಇರುತ್ತದೆ.

ಯುಗಾದಿ ರಾಶಿಫಲ: ವೃಶ್ಚಿಕ ರಾಶಿಯವರು ಜೀವನದ ಹೊಸ ಹಂತವನ್ನು ಪ್ರವೇಶಿಸಲಿದ್ದಾರೆ!

ವೃತ್ತಿ ಜೀವನ
ಪಂಚಾಂಗದ ಪ್ರಕಾರ, 2020-21ರ ಅವಧಿಯಲ್ಲಿ ಸಕಾರಾತ್ಮಕವಾಗಿ ವಿಸ್ತಾರಗೊಳ್ಳಲು ಅನೇಕ ಅವಕಾಶಗಳು ದೊರೆಯಲಿವೆ. ನಿಮ್ಮ ಮಹತ್ವಾಕಾಂಕ್ಷೆಗಳು, ಇಚ್ಛೆಗಳು ಈಡೇರುತ್ತವೆ. ನಿಮ್ಮ ಪ್ರವೃತ್ತಿ ಈ ವರ್ಷದಲ್ಲಿ ಮುನ್ನೆಲೆಗೆ ಬರುವುದು. ವೃತ್ತಿಪರ ಜೀವನವು ಪ್ರಮುಖ ಬದಲಾವಣೆಗಳಿಂದ ಸಾಕಷ್ಟು ವಿಕಸನಗೊಳ್ಳುವುದು.
2020 ರ ವಸಂತ ಋತುವಿನಲ್ಲಿ ನಿಮ್ಮ ಉದ್ಯೋಗ ಬದಲಾವಣೆಯ ಸಾಧ್ಯತೆಯಿದೆ. ನಿಮ್ಮ ವೃತ್ತಿಜೀವನಕ್ಕಾಗಿ ದೀರ್ಘಕಾಲೀನ ಯೋಜನೆಗಳನ್ನು ಮಾಡಲು ಶನಿ ನಿಮಗೆ ಸಹಾಯ ಮಾಡುತ್ತಾನೆ. ಹೊಸ ವೃತ್ತಿ ಪರಿಸರಕ್ಕೆ ಹೊಂದಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ. ಇದರಿಂದ ನೀವು ತೃಪ್ತಿಯ ಭಾವವನ್ನು ಅನುಭವಿಸಲಿದ್ದೀರಿ.

ಪ್ರೀತಿ ಮತ್ತು ಆರ್ಥಿಕ ಸ್ಥಿತಿ
ನಿಮ್ಮ ಪ್ರೀತಿ, ಉತ್ಸಾಹ ಮತ್ತು ಭಾವನೆಗಳು ನಿಮ್ಮನ್ನೇ ಮರೆಮಾಡಬಹುದು, ಎಚ್ಚರವಹಿಸಿ. ನೀವು ಹೆಚ್ಚು ಭಾವನಾತ್ಮಕತೆಯನ್ನು ವ್ಯಕ್ತಪಡಿಸುತ್ತಿದ್ದಂತೆ, ನಿಮ್ಮ ಸ್ವಂತ ವ್ಯಕ್ತಿತ್ವಕ್ಕೆ ಧಕ್ಕೆಯಾಗಬಹುದು. ಆದ್ದರಿಂದ ಜಾಗರೂಕರಾಗಿರುವುದು ಒಳ್ಳೆಯದು. ಈ ವರ್ಷ ಕುಂಭ ರಾಶಿಯವರಿಗೆ ಹಣಕಾಸಿನ ವಿಷಯ ಅಮೂರ್ತವಾಗಿದೆ. ಹಿಂದಿನ ಪ್ರಯತ್ನಗಳು ಈ ಅವಧಿಯಲ್ಲಿ ಉತ್ತಮ ವಿತ್ತೀಯ ಹರಿವಿನ ಮೂಲಕ ಫಲವನ್ನು ನೀಡುತ್ತವೆ.
ಮಧ್ಯ ವರ್ಷವು ಒಂದು ಪ್ರಮುಖ ಆರ್ಥಿಕ ಪುನರುಜ್ಜೀವನಕ್ಕೆ ಸಾಕ್ಷಿಯಾಗುತ್ತದೆ. ಬಂದ ಲಾಭದ ಹಣವನ್ನು ಸಕಾರಾತ್ಮಕತೆಯಿಂದ ಬಳಸಿ.

ಅಕ್ರಮ ಸಂಬಂಧಗಳಿಂದ ದೂರವಿರಿ. ವಾಹನ ಚಾಲನೆ ಮಾಡುವಾಗ ಜಾಗೃತೆ ವಹಿಸಿ. ಜನವರಿ, ಮಾರ್ಚ್ ಮತ್ತು ಸೆಪ್ಟೆಂಬರ್ ತಿಂಗಳು ಹುಷಾರಾಗಿರಿ. ಗಾಯಗಳು, ಬೆಂಕಿ ಅನಾಹುತಗಳು, ಕಾನೂನು ಸಮಸ್ಯೆಗಳು ಮತ್ತು ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಿರುವುದರಿಂದ ಕಾಳಜಿ ವಹಿಸಿ.

ಪರಿಹಾರಗಳು
  • ರಾಹು, ಗುರು, ಚಂದ್ರ ಮತ್ತು ಸೂರ್ಯನಂತಹ ದೋಷಪೂರಿತ ಗ್ರಹಗಳಿಗೆ ಶಾಂತಿ ಜಪವನ್ನು ಮಾಡಿ.
  • ದೇವಾಲಯಗಳಿಗೆ ಭೇಟಿ ನೀಡಿ, ಬ್ರಾಹ್ಮಣರಿಗೆ ದಾನ ಮಾಡಿ.
  • ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ