ಆ್ಯಪ್ನಗರ

Birth Month Lucky Flower: ಹುಟ್ಟಿದ ತಿಂಗಳಿಗೆ ಅನುಗುಣವಾಗಿ ಹೂವನ್ನು ಗಿಫ್ಟ್ ಮಾಡಿದ್ರೆ, ಸಂಬಂಧ ಬಲಗೊಳ್ಳುತ್ತೆ.!

​Gifting Flowers: ಹೂವುಗಳಿಗೆ ಜನರ ಜೀವನದಲ್ಲಿ ವಿಶೇಷ ಸ್ಥಾನವಿದೆ. ಹೂವುಗಳು ನಿಮ್ಮೊಂದಿಗೆ ಸಂಪರ್ಕ ಹೊಂದಿರುವ ಜನರ ನಡುವಿನ ಸಂಬಂಧಗಳನ್ನು ಬಲಪಡಿಸುತ್ತವೆ. ವಾಸ್ತು ಪ್ರಕಾರ, ಯಾರು ಯಾವ ಹೂವನ್ನು ಉಡುಗೊರೆಯಾಗಿ ನೀಡಬೇಕು..? ಯಾವ ಹೂವನ್ನು ನೀಡಬಾರದು ಎಂದು ಇಲ್ಲಿದೆ ಸಂಪೂರ್ಣ ಮಾಹಿತಿ.

Authored byಸಹನಾ | Vijaya Karnataka Web 27 Nov 2023, 5:00 pm
ಹೂವುಗಳನ್ನು ಇಷ್ಟಪಡದ ಜನರು ಇರುವುದು ಅತೀ ವಿರಳ. ಹಾಗಾಗಿ ಹೆಚ್ಚಿನ ಜನ ತಮ್ಮ ಪ್ರೀತಿ ಪಾತ್ರರಿಗೆ ಹೂವುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಜ್ಯೋತಿಷ್ಯದಲ್ಲಿ ಜನರ ಹುಟ್ಟಿದ ತಿಂಗಳ ಪ್ರಕಾರ, ಕೆಲವು ವಿಶೇಷ ಹೂವುಗಳನ್ನು ಅವರಿಗೆ ಶುಭವೆಂದು ಪರಿಗಣಿಸಲಾಗುತ್ತದೆ. ನೀವು ಒಬ್ಬರ ಜನ್ಮದಿನದಂದು ಉಡುಗೊರೆ ನೀಡುವ ಬಗ್ಗೆ ಯೋಚಿಸುತ್ತಿದ್ದರೆ, ಅವರ ಹುಟ್ಟಿದ ತಿಂಗಳಿಗೆ ಅನುಗುಣವಾಗಿ ಹೂವುಗಳನ್ನು ನೀಡಿ. ಇದು ನಿಮ್ಮ ನಡುವಿನ ಸಂಬಂಧವನ್ನು ಹೆಚ್ಚು ಗಟ್ಟಿಗೊಳಿಸುತ್ತದೆ. ಆದ್ದರಿಂದ ಯಾವ ಹೂವು ಯಾರಿಗೆ ಶುಭ ಎಂದು ತಿಳಿಯಲು ಈ ಲೇಖನವನ್ನು ಓದಿ.
Vijaya Karnataka Web gifting flowers as per the birth month strengthens the relationships
Birth Month Lucky Flower: ಹುಟ್ಟಿದ ತಿಂಗಳಿಗೆ ಅನುಗುಣವಾಗಿ ಹೂವನ್ನು ಗಿಫ್ಟ್ ಮಾಡಿದ್ರೆ, ಸಂಬಂಧ ಬಲಗೊಳ್ಳುತ್ತೆ.!


​ಜನವರಿ

ಜನವರಿ ತಿಂಗಳಲ್ಲಿ ಜನಿಸಿದ ಜನರು ತೀಕ್ಷ್ಣವಾದ ಮತ್ತು ಶಾಂತ ಮನಸ್ಸಿನ ಸ್ವಭಾವವನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಆದ್ದರಿಂದ, ನೀವು ಅವರಿಗೆ ಗುಲಾಬಿ ಮತ್ತು ಬಿಳಿ ಹೂವುಗಳನ್ನು ನೀಡಬಹುದು. ಇದು ನಿಮ್ಮ ಸಂಬಂಧದ ನಡುವೆ ವಿಶ್ವಾಸವನ್ನು ಹೆಚ್ಚಿಸುತ್ತದೆ. ಇದು ಗೊಂದಲವನ್ನು ಸಹ ತೆಗೆದುಹಾಕುತ್ತದೆ.

Shukra Gochar 2023: ಇನ್ನು ಮೂರೇ ದಿನಗಳಲ್ಲಿ ಇವರ ಲಕ್ ಚೇಂಜ್, ಶುಕ್ರ ದೆಸೆ ಆರಂಭ..!

​ಫೆಬ್ರವರಿ

ಫೆಬ್ರವರಿಯಲ್ಲಿ ಜನಿಸಿದವರಿಗೆ ಗುಲಾಬಿ ಹೂವನ್ನು ಶುಭವೆಂದು ಪರಿಗಣಿಸಲಾಗುತ್ತದೆ. ನೀವು ಫೆಬ್ರವರಿಯಲ್ಲಿ ಜನಿಸಿದವರಿಗೆ ಉಡುಗೊರೆ ನೀಡಲು ಬಯಸುವುದಾದರೆ ಗುಲಾಬಿ ಹೂವುಗಳನ್ನು ನೀಡಬಹುದು.

​ಮಾರ್ಚ್

ಮಲ್ಲಿಗೆ ಹೂವುಗಳನ್ನು ಉಡುಗೊರೆಯಾಗಿ ನೀಡುವುದು ಸ್ನೇಹವನ್ನು ಬಲಪಡಿಸುತ್ತದೆ ಮತ್ತು ದೀರ್ಘಕಾಲದ ಸಂಬಂಧಕ್ಕೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಮಾರ್ಚ್ ತಿಂಗಳಲ್ಲಿ ಜನಿಸಿದ ಜನರಿಗೆ ನೀವು ಮಲ್ಲಿಗೆ ಹೂವುಗಳನ್ನು ನೀಡಬಹುದು.

Raja Yoga 2023: 300 ವರ್ಷಗಳ ಬಳಿಕ ಡಿಸೆಂಬರ್ ನಲ್ಲಿ 3 ರಾಜಯೋಗ, ಇವರಿಗೆ ಜಾಕ್ ಪಾಟ್.!

​ಏಪ್ರಿಲ್

ಏಪ್ರಿಲ್ ತಿಂಗಳಲ್ಲಿ ಜನಿಸಿದವರಿಗೆ, ದಾಸವಾಳದ ಹೂವು ಅದೃಷ್ಟಶಾಲಿಯಾಗಿರುತ್ತದೆ. ಏಪ್ರಿಲ್ ನಲ್ಲಿ ಜನಿಸಿದವರ ಸಂತೋಷವು ದಾಸವಾಳದ ಹೂವಿನಿಂದ ಹೆಚ್ಚುವುದು ಎಂದು ಹೇಳಲಾಗುತ್ತದೆ.

​ಮೇ

ಮೇ ತಿಂಗಳಿನಲ್ಲಿ ಜನಿಸಿದವರಿಗೆ ಅದೃಷ್ಟದ ಹೂವು ಬಿಳಿ ಎಂದು ಪರಿಗಣಿಸಲಾಗುತ್ತದೆ. ಈ ಹೂವಿನ ಆಗಮನದಿಂದ, ಅವರ ಜೀವನದಲ್ಲಿ ಶಾಂತಿ ಇರುತ್ತದೆ. ಸಂಬಂಧಗಳು ಸಹ ಹಿಂದಿಗಿಂತಲೂ ಬಲವಾಗಿರುತ್ತವೆ ಎಂದು ಹೇಳಲಾಗುತ್ತದೆ.

Monday Lucky Zodiac Sign: ಇಂದು ಕಾರ್ತಿಕ ಪೂರ್ಣಿಮಾ: ಈ ಶುಭ ಯೋಗದಿಂದ ಇವರ ಮೇಲೆ ಧನವೃಷ್ಟಿ.!

​ಜೂನ್

ಜೂನ್ ತಿಂಗಳಲ್ಲಿ ಜನಿಸಿದವರಿಗೆ ಗುಲಾಬಿ ಹೂವು ಅದೃಷ್ಟದ ಹೂವಾಗಿರುತ್ತದೆ. ಗುಲಾಬಿ ಹೂವು ಸಂಬಂಧಗಳಲ್ಲಿ ಪ್ರೀತಿಯನ್ನು ಉಳಿಸುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಜೂನ್ ತಿಂಗಳಲ್ಲಿ ಜನಿಸಿದವರಿಗೆ ಗುಲಾಬಿ ಹೂವುಗಳನ್ನು ಉಡುಗೊರೆಯಾಗಿ ನೀಡಿ.

​ಜುಲೈ

ಜುಲೈನಲ್ಲಿ ಜನಿಸಿದವರಿಗೆ ಸಂಪಿಗೆ ಹೂವು ತುಂಬಾ ಶುಭಕರವಾಗಿದೆ. ಈ ಹೂವಿನ ಉಡುಗೊರೆಯು ಜುಲೈನಲ್ಲಿ ಜನಿಸಿದವರಿಗೆ ಜೀವನದಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ ಎಂದು ನಂಬಲಾಗಿದೆ.

Mangal-Budh Yuti: ಈ ರಾಶಿಯವರನ್ನು ಕೈ ಹಿಡಿದು ಮುನ್ನಡೆಸುವರು ಬುಧ-ಮಂಗಳ..! ಭರಪೂರ ಲಾಭ

​ಆಗಸ್ಟ್

ಆಗಸ್ಟ್ ನಲ್ಲಿ ಜನಿಸಿದ ಜನರಿಗೆ ಯಾವುದೇ ಹಳದಿ ಬಣ್ಣದ ಯಾವುದೇ ಹೂವು ಅದೃಷ್ಟವನ್ನು ಹೆಚ್ಚಿಸಲಿದೆ. ಇದು ಇವರ ಪ್ರಗತಿಗೆ ದಾರಿ ತೆರೆಯುತ್ತದೆ. ಆದ್ದರಿಂದ ಆಗಸ್ಟ್ ನಲ್ಲಿ ಜನಿಸಿದವರಿಗೆ ಹಳದಿ ಹೂವನ್ನು ಉಡುಗೊರೆಯಾಗಿ ನೀಡಿ.

​ಸೆಪ್ಟೆಂಬರ್

ಸೆಪ್ಟೆಂಬರ್ ನಲ್ಲಿ ಜನಿಸಿದವರಿಗೆ ಕೆಂಪು ಹೂವುಗಳು ಶುಭ. ಈ ಹೂವು ಸಂಬಂಧದಲ್ಲಿ ನಂಬಿಕೆಯನ್ನು ಸೃಷ್ಟಿಸುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಸೆಪ್ಟೆಂಬರ್ ನಲ್ಲಿ ಜನಿಸಿದ ಜನರಿಗೆ ಉಡುಗೊರೆ ನೀಡುವುದಾದರೆ ಕೆಂಪು ಹೂವುಗಳನ್ನು ನೀಡಿ.

Mahadhan Yoga 2023: ಬುಧನಿಂದ ಮಹಾಧನ ಯೋಗ, ಇವರು ಕೋಟ್ಯಾಧಿಪತಿಯಾಗೋದು ನಿಶ್ಚಿತ..!

​ಅಕ್ಟೋಬರ್

ಸೇವಂತಿಗೆ ಹೂವು ಅಕ್ಟೋಬರ್ ತಿಂಗಳಲ್ಲಿ ಜನಿಸಿದವರಿಗೆ ತುಂಬಾ ಶುಭವಾಗಿದೆ. ಇದು ಇವರ ಪ್ರಗತಿಯ ಅವಕಾಶಗಳನ್ನು ಹೆಚ್ಚಿಸುತ್ತದೆ. ಹಾಗಾಗಿ ಅಕ್ಟೋಬರ್ ತಿಂಗಳಲ್ಲಿ ಜನಿಸಿದವರಿಗೆ ಹೂವನ್ನು ಉಡುಗೊರೆಯಾಗಿ ನೀಡುವುದಾದರೆ ಸೇವಂತಿಗೆ ಹೂವನ್ನು ನೀಡಿ.

​ನವೆಂಬರ್

ನವೆಂಬರ್ ತಿಂಗಳಲ್ಲಿ ಜನಿಸಿದವರಿಗೆ ಹಸಿರು ಬಣ್ಣ ತುಂಬಾ ವಿಶೇಷವಾಗಿದೆ. ಹಾಗೆ ಹಸಿರು ಬಣ್ಣದ ಹೂವು ಗಣೇಶನ ಆಶೀರ್ವಾದವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಆದ್ದರಿಂದ ನವೆಂಬರ್ ತಿಂಗಳಲ್ಲಿ ಜನಿಸಿದವರಿಗೆಹಸಿರು ಬಣ್ಣದ ಹೂವುಗಳನ್ನು ನೀಡಿ.

Kartik Purnima 2023: ಕಾರ್ತಿಕ ಪೂರ್ಣಿಮಾದಂದು ಇವರಿಗೆ ರಾಜಯೋಗ, ಸಾಕ್ಷಾತ್ ಮಹಾಲಕ್ಷ್ಮಿಯೇ ಒಲಿಯುವಳು..!

​ಡಿಸೆಂಬರ್

ಡಿಸೆಂಬರ್ ನಲ್ಲಿ ಜನಿಸಿದವರಿಗೆ ಸೂರ್ಯಕಾಂತಿ ಹೂವು ಅದೃಷ್ಟವನ್ನು ಹೆಚ್ಚಿಸುತ್ತದೆ. ಇದು ಇವರ ಜೀವನದಲ್ಲಿ ಸಂತೋಷವನ್ನು ತರುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ಡಿಸೆಂಬರ್ ನಲ್ಲಿ ಜನಿಸಿದ ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ನೀಡುವ ಬಗ್ಗೆ ಯೋಚಿಸುತ್ತಿದ್ದರೆ, ಸೂರ್ಯಕಾಂತಿ ಹೂವು ಉತ್ತಮ ಆಯ್ಕೆಯಾಗಿದೆ.

ಲೇಖಕರ ಬಗ್ಗೆ
ಸಹನಾ
ಸಹನ ಇವರು ಎರಡು ವರ್ಷಗಳ ಕಾಲ ಡಿಜಿಟಲ್ ವಿಭಾಗದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡಿದ್ದು, ಪ್ರಸ್ತುತ ವಿಜಯ ಕರ್ನಾಟಕದ ಜ್ಯೋತಿಷ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸದ ಹೊರತಾಗಿ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿ ಹಾಗು ಕಲಿಯುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಸ್ಕೆಚ್ ಹಾಗು ಪೇಂಟಿಂಗ್ ಮಾಡುವುದು, ಕರಕುಶಲ ಕಲೆ, ಸಂಗೀತ ಕೇಳುವುದು, ಫೋಟೋಗ್ರಫಿ, ಯೋಗ ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ