ಆ್ಯಪ್ನಗರ

ಈ ರಾಶಿಯವರು ಪ್ರತಿ ಬಾರಿ ಪ್ರೀತಿ ಹಾಗೂ ಸ್ನೇಹದಲ್ಲಿ ಮೋಸ ಹೋಗುವುದು ಹೆಚ್ಚು..!

ಮೋಸ ಹೋಗುವವರಿರುವಾಗ ಮೋಸ ಮಾಡುವವರು ಇರುತ್ತಾರೆ ಎನ್ನುವಂತೆ, ಪ್ರೀತಿ ಹಾಗೂ ಸ್ನೇಹದಲ್ಲಿ ಪದೇ ಪದೇ ಮೋಸ ಹೋಗುವವರು ಯಾವ ರಾಶಿಯವರು ಎನ್ನುವುದನ್ನು ತಿಳಿದುಕೊಳ್ಳಿ

Vijaya Karnataka Web 14 Jun 2021, 8:10 pm
ಗ್ರಹಗಳು ಮತ್ತು ನಕ್ಷತ್ರಗಳ ಗುಣದಿಂದಾಗಿ ಆಯಾಯ ರಾಶಿ ನಕ್ಷತ್ರಕ್ಕೆ ಸೇರಿದ ವ್ಯಕ್ತಿಗಳ ಗುಣವೂ ಭಿನ್ನವಾಗಿರುತ್ತದೆ. ಕೆಲವರು ಪದೇ ಪದೇ ಪ್ರೀತಿಯಲ್ಲಾಗಲಿ ಸ್ನೇಹದಲ್ಲಾಗಲಿ ಮೋಸ ಹೋಗುತ್ತಲೇ ಇರುತ್ತಾರೆ. ಅವರ ಪ್ರಾಮಾಣಿಕತೆಯೇ ಇತರರು ಮೋಸಗೊಳಿಸುವಂತೆ ಮಾಡುತ್ತದೆ. ಈ ರೀತಿಯಾಗಿ ಮೋಸ ಹೋಗುವವರು ಯಾವ ರಾಶಿಯವರು ಎನ್ನುವ ಕುತೂಹಲ ನಿಮಗಿದ್ದರೆ ಈ ಸ್ಟೋರಿ ಓದಿ.
Vijaya Karnataka Web must know these zodiac signs people who have always been cheated in friendship and love
ಈ ರಾಶಿಯವರು ಪ್ರತಿ ಬಾರಿ ಪ್ರೀತಿ ಹಾಗೂ ಸ್ನೇಹದಲ್ಲಿ ಮೋಸ ಹೋಗುವುದು ಹೆಚ್ಚು..!


​ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಸ್ನೇಹ ಮತ್ತು ಪ್ರೀತಿ ಬಹಳ ವಿಶೇಷ. ಅವರು ತಮ್ಮ ಪ್ರೀತಿಪಾತ್ರರಿಗಾಗಿ ಯಾವುದೇ ಮಟ್ಟಕ್ಕೆ ಹೋಗಲು ಸಿದ್ಧರಾಗಿರುತ್ತಾರೆ. ಈ ಜನರು ತಮ್ಮ ಸಂಬಂಧವನ್ನು ಪ್ರಾಮಾಣಿಕವಾಗಿ ತೆಗೆದುಕೊಳ್ಳುತ್ತಾರೆ. ತಮ್ಮ ಆಪ್ತರಲ್ಲಿ ಯಾರು ತಮ್ಮನ್ನು ಮೋಸ ಮಾಡುತ್ತಿದ್ದಾರೆಂದು ಅವರಿಗೆ ಅನೇಕ ಬಾರಿ ಅರ್ಥವಾಗುವುದೇ ಇಲ್ಲ.

ಈ ಐದು ರಾಶಿಯವರು ತಾವು ಅಂದುಕೊಂಡಿದ್ದೇ ನಡೆಯಬೇಕು ಎನ್ನುವ ಜಾಯಮಾನದವರು..!

​ಮಿಥುನ ರಾಶಿ

ಮಿಥುನ ರಾಶಿಯವರನ್ನು ಪ್ರೀತಿಯುಳ್ಳವರು ಹಾಗೂ ಬಹುಮುಖ ಪ್ರತಿಭೆ ಎಂದು ಪರಿಗಣಿಸಲಾಗುತ್ತದೆ. ಇವರು ಸದಾ ಸಂತೋಷವಾಗಿರಲು ಬಯಸುತ್ತಾರೆ. ಇವರು ಯಾವುದರ ಬಗ್ಗೆಯೂ ಆಳವಾಗಿ ಯೋಚಿಸುವುದಿಲ್ಲ. ಇದರಿಂದಾಗಿಯೇ ಇವರು ಸ್ನೇಹ ಮತ್ತು ಅವರ ಸಂಬಂಧದಲ್ಲಿ ಅನೇಕ ಬಾರಿ ಮೋಸ ಹೋಗುತ್ತಾರೆ.

ಈ ರಾಶಿಯವರು ಅತ್ಯುತ್ತಮ ಹಾಸ್ಯಪ್ರಜ್ಞೆಯುಳ್ಳವರು..! ನೀವೂ ಇದೇ ರಾಶಿಯವರಾ?

​ಮೇಷ ರಾಶಿ

ಜ್ಯೋತಿಷ್ಯದ ಪ್ರಕಾರ, ಈ ರಾಶಿಚಕ್ರವನ್ನು ಆಳುವ ಗ್ರಹ ಮಂಗಳ. ಈ ರಾಶಿಯವರು ಪ್ರಾಮಾಣಿಕರು ಮತ್ತು ಹೃದಯದಲ್ಲಿ ಪ್ರಾಮಾಣಿಕತೆಯನ್ನೇ ಹೊಂದಿರುತ್ತಾರೆ. ಇವರು ಆಶಾವಾದಿ, ಮುಗ್ಧ ಮತ್ತು ವಿಶ್ವಾಸಾರ್ಹರು. ಅವರು ಸುಲಭವಾಗಿ ಇತರರ ಕೆಟ್ಟ ಸಂಗತಿಗಳನ್ನು ಮರೆತು ಜನರನ್ನು ನಂಬುತ್ತಾರೆ. ಸ್ನೇಹ ಅಥವಾ ಸಂಬಂಧದಲ್ಲಿ ಜನರು ಇವರ ಈ ಗುಣದ ಲಾಭವನ್ನು ಹೆಚ್ಚಾಗಿ ಪಡೆದುಕೊಳ್ಳುತ್ತಾರೆ.

ಮಾತಿನ ಮಲ್ಲರು ಈ ರಾಶಿಯವರು..! ಇವರು ಮಾತಿನಲ್ಲೇ ಎಲ್ಲರನ್ನೂ ಗೆಲ್ಲುತ್ತಾರೆ..!

​ಸಿಂಹ ರಾಶಿ

ಸಿಂಹ ರಾಶಿಚಕ್ರದ ಜನರ ಮೇಲೆ ಸೂರ್ಯನ ಪ್ರಭಾವವಿರುತ್ತದೆ.ಇವರು ಕಠಿಣ ಪರಿಶ್ರಮಿಗಳು ಮತ್ತು ಪ್ರಾಮಾಣಿಕರೆಂದು ಪರಿಗಣಿಸಲಾಗುತ್ತದೆ. ಇವರು ನಿಜವಾದ ಜೀವನ ಸಂಗಾತಿ ಎಂದು ಸಾಬೀತು ಪಡಿಸಿಕೊಳ್ಳುವಂತಹ ಸ್ವಭಾವದವರು. ಅವರು ಇತರರ ಸಂತೋಷದಲ್ಲಿ ತಮ್ಮಸಂತೋಷವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಅವರಲ್ಲಿ ಕಿರಿಕಿರಿಯ ಭಾವನೆ ಇರುವುದಿಲ್ಲ. ಇವರು ಆಶಾವಾದಿಗಳು ಮತ್ತು ಪರೋಪಕಾರಿಗಳು. ಅವರು ವಿಷಯಗಳನ್ನು ಸ್ಪಷ್ಟವಾಗಿ ಹೇಳಲು ಇಷ್ಟಪಡುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ