ಆ್ಯಪ್ನಗರ

ಮೊದಲ ಭೇಟಿಯಲ್ಲೇ ಇತರರನ್ನು ತನ್ನೆಡೆಗೆ ಸೆಳೆಯುವ ರಾಶಿಯವರಿವರು..!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಶಿಗಳಿಗನುಗುಣವಾಗಿ ವ್ಯಕ್ತಿಯ ಸ್ವಭಾವವೂ ಭಿನ್ನವಾಗಿರುತ್ತದೆ. ಕೆಲವರದ್ದು ಯಾರೊಂದಿಗೂ ಹೆಚ್ಚು ಬೆರೆಯದೇ ತಮ್ಮಷ್ಟಕ್ಕೆ ತಾವು ಇರುವ ಸ್ವಭಾವವಾದರೆ, ಕೆಲವರದ್ದು ತಮ್ಮ ಮೊದಲ ಭೇಟಿಯಲ್ಲಿಯೇ ಇತರರನ್ನು ತನ್ನೆಡೆಗೆ ಸೆಳೆಯುವ ವ್ಯಕ್ತಿತ್ವ. ಇಂತಹ ಗುಣವಿರುವ ಆ ರಾಶಿಗಳು ಯಾವುವು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

Vijaya Karnataka Web 23 May 2022, 11:47 am
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಶಿಗಳಿಗನುಗುಣವಾಗಿ ವ್ಯಕ್ತಿಯ ಸ್ವಭಾವವೂ ಭಿನ್ನವಾಗಿರುತ್ತದೆ. ಕೆಲವರದ್ದು ಯಾರೊಂದಿಗೂ ಹೆಚ್ಚು ಬೆರೆಯದೇ ತಮ್ಮಷ್ಟಕ್ಕೆ ತಾವು ಇರುವ ಸ್ವಭಾವವಾದರೆ, ಕೆಲವರದ್ದು ತಮ್ಮ ಮೊದಲ ಭೇಟಿಯಲ್ಲಿಯೇ ಇತರರನ್ನು ತನ್ನೆಡೆಗೆ ಸೆಳೆಯುವ ವ್ಯಕ್ತಿತ್ವ. ಕೆಲ ವ್ಯಕ್ತಿಗಳನ್ನು ನೋಡಿದಾಕ್ಷಣ ನಮ್ಮ ಗಮನ ಅವರತ್ತ ಸೆಳೆದುಬಿಡುತ್ತದೆ. ಹೆಚ್ಚು ಆಕರ್ಷಿತರಾಗಿ ಕಾಣಿಸುತ್ತಾರೆ. ಮಾತನಾಡುವ ಶೈಲಿ ಬಹಳ ಆಪ್ತ ಎನಿಸುತ್ತದೆ. ಜನರ ಜೊತೆ ಸದಾಕಾಲ ನಗುನಗುತಾ ಖುಷಿಯಿಂದ ಸಮಯ ಕಳೆಯುತ್ತಾರೆ. ತನ್ನ ಸಾಮರ್ಥ್ಯದೊಂದಿಗೆ ಎಲ್ಲರನ್ನೂ ಸೆಳೆಯುವ ಶಕ್ತಿ ಅವರಿಗಿರುತ್ತದೆ. ಯಾವಾಗಲೂ ಉತ್ಸಾಹದಿಮದ ಕೂಡಿರುತ್ತಾರೆ. ಅವರ ಮಾತನ್ನು ಕೇಳಲು ಆಹ್ಲಾದವೆನಿಸುತ್ತದೆ. ಪಟಪಟ ಮಾತನಾಡುತ್ತಿದ್ದರೂ ಕೇಳುಗರಿಗೆ ಇಂಪಾಗಿರುತ್ತದೆ. ಮುಕ್ತ ಮನಸ್ಸು ಹೊಂದಿದ್ದು ಕೋಪ ಮತ್ತು ಅಹಂಕಾರ ಬಿಟ್ಟು ವಿಭಿನ್ನವಾದ ದೃಷ್ಟಿಕೋನದಲ್ಲಿ ಎಲ್ಲರೊಡನೆ ಗುರುತಿಸಿಕೊಳ್ಳುತ್ತಾರೆ. ಇಂತಹ ಗುಣವಿರುವ ಆ ರಾಶಿಗಳು ಯಾವುವು ಎನ್ನುವ ಮಾಹಿತಿ ಇಲ್ಲಿದೆ ನೋಡಿ.
Vijaya Karnataka Web these 5 zodiac sign people have charming personality
ಮೊದಲ ಭೇಟಿಯಲ್ಲೇ ಇತರರನ್ನು ತನ್ನೆಡೆಗೆ ಸೆಳೆಯುವ ರಾಶಿಯವರಿವರು..!



​ವೃಷಭ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ರಾಶಿಯ ಜನರ ವ್ಯಕ್ತಿತ್ವವು ತುಂಬಾ ಆಕರ್ಷಕವಾಗಿರುತ್ತದೆ. ಇವರನ್ನು ಜನರು ಭೇಟಿಯಾದಾಗ ಅವರ ಅಭಿಮಾನಿಗಳಾಗುತ್ತಾರೆ. ಯಾಕೆಂದರೆ, ಇವರ ಮಾತಿನ ಶೈಲಿ ತುಂಬಾ ಸ್ಟ್ರಾಂಗ್. ವೃಷಭ ರಾಶಿಯವರು ಆಕರ್ಷಕ, ಆಶಾವಾದಿ ಮತ್ತು ಅತ್ಯುತ್ತಮ ಹಾಸ್ಯ ಪ್ರಜ್ಞೆಯನ್ನು ಹೊಂದಿರುತ್ತಾರೆ. ಕಲೆಯನ್ನು ಇಷ್ಟಪಡುವ ಇವರು ತಮ್ಮ ಬದುಕು ಕೂಡ ಬಣ್ಣಗಳಿಂದ ಕೂಡಿರಬೇಕೆಂದು ಆಸೆ ಪಡುತ್ತಾರೆ. ತಮ್ಮನ್ನು ಭೇಟಿಯಾಗುವ ಜನರನ್ನು ಬೇರೆ ಬೇರೆಮಾರ್ಗಗಳಿಂದ ಅವರೊಂದಿಗೆ ಸಮಯ ಕಳೆಯಲು ಆಹ್ವಾನಿಸುತ್ತಾರೆ. ಅವರ ಆಹ್ವಾನಿಸುವ ಸ್ವಭಾವವು ಅವರ ಸುತ್ತಲಿರುವ ಪ್ರತಿಯೊಬ್ಬರಿಂದ ಜನಪ್ರಿಯವಾಗಿದೆ.

ಈ ರಾಶಿಯವರು ತಮ್ಮದೇ ಕಂಫರ್ಟ್‌ ಝೋನ್‌ನಲ್ಲಿ ಇರಬಯಸುವವರು..! ಇವರು ಬದಲಾವಣೆಯನ್ನು ಇಷ್ಟಪಡರು..!

​ಮಿಥುನ

ಮಿಥುನ ರಾಶಿಯ ಅಧಿಪತಿ ಬುಧ ಈ ರಾಶಿಯ ಜನರು ವಸ್ತುಗಳಲ್ಲಿ ಶ್ರೀಮಂತರು. ಈ ರಾಶಿಯ ವ್ಯಕ್ತಿಗಳು ಸಿಹಿಯಾಗಿ ಮಾತಾಡುವುದರಲ್ಲಿ ಪ್ರವೀಣರು. ಜನರ ಹೃದಯಗೆದ್ದು ಸದಾಕಾಲ ಸ್ನೇಹಿತರಾಗಿರುವಂತೆ ಬಯಸುವ ಗುಣ ಮಿಥುನ ರಾಶಿಯವರದ್ದು. ಅದಕ್ಕಾಗಿಯೇ ಈ ಜನರು ತಾವು ಭೇಟಿಯಾಗುವ ಜನರನ್ನು ತಮ್ಮ ಅಭಿಮಾನಿಗಳನ್ನಾಗಿ ಮಾಡುತ್ತಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅವರು ತಮ್ಮ ಮಾತಿನ ಮೂಲಕ ಕೋಟೆಯನ್ನೇ ಕಟ್ಟುತ್ತಾರೆ. ಸಾಮಾಜಿಕವಾಗಿ ಬೆರೆಯುವ ಕಲೆಯ ಜೊತೆಗೆ ಹೆಚ್ಚು ದಯೆಯುಳ್ಳವರಾಗಿರುತ್ತಾರೆ. ಕಷ್ಟ ಕಾಲದಲ್ಲಿ ಕುಗ್ಗದೇ, ಯಾವಾಗಲೂ ತಮಾಷೆಯಿಂದಿರಲು ಇಚ್ಛಿಸುತ್ತಾರೆ.

​ಸಿಂಹ

ಈ ರಾಶಿಚಕ್ರದ ಜನರು ಬಹು ಪ್ರತಿಭಾವಂತರು. ಯಾವುದೇ ವ್ಯಕ್ತಿಗಳು ಇವರನ್ನು ಒಮ್ಮೆ ಭೇಟಿಯಾದರೆ ಸಂತೋಷದಿಂದ ಇವರೊಂದಿಗೆ ಇದ್ದು ಬಿಡುತ್ತಾರೆ. ಯಾಕೆಂದರೆ ಇವರು ತಮ್ಮ ಸಂಗಾತಿಯನ್ನು ಮತ್ತು ಸುತ್ತಮುತ್ತಲಿನ ಜನರನ್ನು ಸಂತೋಷವಾಗಿರಿಸಲು ಪ್ರಯತ್ನಿಸುತ್ತಾರೆ. ತಮ್ಮ ಸುತ್ತಮುತ್ತಲಿನ ಜನರನ್ನು ಹೆಚ್ಚು ಪ್ರೀತಿಸುತ್ತಾರೆ. ಅವರಲ್ಲಿನ ಉತ್ಸಾಹ ಮತ್ತು ತಾಳ್ಮೆಯಿಂದ ಎಲ್ಲರ ಗಮನ ಸೆಳೆಯಲು ಕಾರಣರಾಗುತ್ತಾರೆ. ಆದ್ದರಿಂದ ಎಲ್ಲರ ಆಕರ್ಷಣೆಗೆ ಪಾತ್ರರಾಗುತ್ತಾರೆ. ಈ ರಾಶಿಯ ಅಧಿಪತಿ ಸೂರ್ಯ ಆಗಿರುವುದರಿಂದ ಈ ರಾಶಿಯವರಿಗೆ ಈ ಗುಣಗಳನ್ನು ನೀಡುತ್ತಾನೆ.

ಈ ರಾಶಿಯವರು ತಮ್ಮಷ್ಟಕ್ಕೆ ತಾವಿರಲು ಇಷ್ಟಪಡುವ ನೀರಸ ಸ್ವಭಾವದವರು..! ನಿಮ್ಮ ರಾಶಿಯೂ ಇದೇನಾ..?

​ತುಲಾ

ಈ ರಾಶಿಯ ಅಧಿಪತಿ ಶುಕ್ರ. ಇದು ಈ ಜನರನ್ನು ಸೃಜನಶೀಲ ಮತ್ತು ಕಾಲ್ಪನಿಕವಾಗಿಸುತ್ತದೆ. ಈ ಜನರು ತಮ್ಮ ಜೀವನದಲ್ಲಿ ಸಾಕಷ್ಟು ಸಮತೋಲನದಿಂದ ನಡೆಯುತ್ತಾರೆ. ಅವರು ಸಂಬಂಧಗಳನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಈ ಜನರು ತಮ್ಮ ಸಂಬಂಧಗಳಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ತಮ್ಮ ಮಧುರವಾದ ಧ್ವನಿಯಿಂದಾಗಿ, ಈ ಜನರು ಬೇಗನೆ ಜನರನ್ನು ಆಕರ್ಷಿಸುತ್ತಾರೆ.

​ಮಕರ

ಈ ರಾಶಿಯ ಅಧಿಪತಿ ಶನಿದೇವ. ಇದು ಈ ರಾಶಿಚಕ್ರದ ಜನರನ್ನು ಕಠಿಣ ಪರಿಶ್ರಮ ಮತ್ತು ಶ್ರಮಜೀವಿಗಳನ್ನಾಗಿ ಮಾಡುತ್ತದೆ. ಈ ರಾಶಿಚಕ್ರದ ಜನರು ಅದೃಷ್ಟಕ್ಕಿಂತ ಹೆಚ್ಚಾಗಿ ತಮ್ಮ ಕಾರ್ಯಗಳನ್ನು ನಂಬುತ್ತಾರೆ. ಈ ಜನರು ತತ್ವಗಳನ್ನು ಅನುಸರಿಸಲು ಇಷ್ಟಪಡುತ್ತಾರೆ. ಈ ಜನರು ತಮ್ಮನ್ನು ಎದುರಿಸುತ್ತಿರುವ ವ್ಯಕ್ತಿಯ ಪ್ರಭಾವಕ್ಕೆ ಬಹಳ ಬೇಗನೆ ಬರುತ್ತಾರೆ. ಈ ಗುಣಗಳಿಂದಾಗಿ ಜನರು ಆತನನ್ನು ಪ್ರೀತಿಸುತ್ತಾರೆ.

ನಿಮ್ಮ ಪ್ರೇಮ ನಿವೇದನೆಯನ್ನು ಥಟ್ ಅಂತ ಒಪ್ಪಿಕೊಳ್ಳುವ ರಾಶಿಯವರಿವರು..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ