ಆ್ಯಪ್ನಗರ

ಕೇರಳ ಪ್ರವಾಹ ಸಂತ್ರಸ್ತರಿಗೆ ಬೆನ್ನುಕೊಟ್ಟ ಮೀನುಗಾರನಿಗೆ ಮಹೀಂದ್ರಾ ದುಬಾರಿ ಕಾರ್‌ ಗಿಫ್ಟ್

ಮಹೇಂದ್ರಾ ಕಂಪನಿಯ ಸಿಇಓ ಆನಂದ್‌ ಮಹೀಂದ್ರಾ ಅವರು ಸಮಾಜಮುಖಿ ಕಾರ್ಯಕ್ರಮಗಳನ್ನು ಉತ್ತೇಜಿಸುವಲ್ಲಿಎತ್ತಿದ ಕೈ.

Vijaya Karnataka Web 13 Sep 2018, 2:51 pm
ಮಹೀಂದ್ರಾ ಕಂಪನಿಯ ಸಿಇಓ ಆನಂದ್‌ ಮಹೇಂದ್ರಾ ಅವರು ಸಮಾಜಮುಖಿ ಕಾರ್ಯಕ್ರಮಗಳನ್ನು ಉತ್ತೇಜಿಸುವಲ್ಲಿಎತ್ತಿದ ಕೈ. ಸಮಾಜಕ್ಕಾಗಿ ವಿಶೇಷ ಕೊಡುಗೆ ನೀಡಿದವರನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ.
Vijaya Karnataka Web mahendra


ಮಂಗಳೂರಿನಲ್ಲಿ ಬೀದಿಬದಿಯಲ್ಲಿ ಹಳ್ಳಿ ಮನೆ ರೊಟ್ಟಿಸ್‌ ಹೆಸರಿನಲ್ಲಿ ವ್ಯಾಪಾರ ಮಾಡುತ್ತಿದ್ದ ಶಿಲ್ಪಾ ಅವರ ಉದ್ಯಮ ಶೀಲ ಗುಣ ಮೆಚ್ಚಿದ ಆನಂದ್‌ ಮಹೀಂದ್ರಾ ಅವರು ಮಹೀಂದ್ರಾ ಪಿಕಪ್‌ ನೀಡುವ ಮೂಲಕ ಹೊಸ ಆಹಾರ ಮಳಿಗೆ ಸ್ಥಾಪಿಸಲು ನೆರವಾಗಿದ್ದನ್ನು ಇಲ್ಲಿ ನಾವು ನೆನಪಿಸಿಕೊಳ್ಳಬಹುದು.

ವಿಶ್ವ ವೇಟ್‌ ಲಿಫ್ಟಿಂಗ್‌ ಚಾಂಪಿಯನ್‌ ಮೀರಾಬಾಯಿ ಚಾನು ಅವರಿಗೆ TUV300 ನೀಡಿ ಪ್ರೋತ್ಸಾಹಿಸಿದ್ದರು.

ಇದೀಗ ಕೇರಳದ ಮೀನುಗಾರ ಜೈಸಲ್‌ಗೆ MPV ಸೆಗ್‌ಮೆಂಟ್‌ನ ಮರಾಜೊ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ.

ಕೇರಳ ಪ್ರವಾಹಕ್ಕೆ ಸಿಲುಕಿ ತತ್ತರಿಸಿದಾಗ ಸಂತ್ರಸ್ತರ ಸಹಾಯಕ್ಕೆ ಧಾವಿಸಿದ ಜೈಸಲ್‌ ತಮ್ಮ ಹೆಗಲು ನೀಡಿ ಮಹಿಳೆಯರು, ವೃದ್ಧರು ಬೋಟು ಏರಲು ಸಹಾಯ ಮಾಡಿದರು. ಈ ವೀಡಿಯೋ ವೈರಲ್ ಆಗಿ, ಜೈಸಲ್‌ ರಿಯಲ್ ಹೀರೋ ಆಗಿ ಬಿಟ್ಟರು.

ಆ ವೀಡಿಯೋ ನೋಡಿ ಮೆಚ್ಚಿದ ಆನಂದ್ ಮಹೀಂದ್ರಾ ಅವರು ಜೈಸಲ್‌ಗೆ ಸರ್‌ಪ್ರೈಸ್‌ ಗಿಫ್ಟ್ ಆಗಿ ಕಾರು ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ