ಆ್ಯಪ್ನಗರ

ವಾಹನೋದ್ಯಮಕ್ಕೆ ಕಂಟಕ ತಂದ ಕೊರೋನಾ..ವಾಹನ ಸಂಸ್ಥೆಗಳ ಉತ್ಪಾದನೆ ಸ್ಥಗಿತ

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೋನಾ ವೈರಸ್‌ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಕೆಲವೊಂದು ವಾಹನ ತಯಾರಕ ಸಂಸ್ಥೆಗಳು ತಮ್ಮ ಉತ್ಪಾದನೆಯನ್ನು ಸ್ಥಗಿತಗೊಳಿಸಲಿದೆ.

Vijaya Karnataka Web 23 Mar 2020, 6:54 pm
ವಿಶ್ವದಾಂದ್ಯತ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್‌ - 19 ನ್ನು ನಿಯಂತ್ರಣಕ್ಕೆ ತರುವ ಸದುದ್ದೇಶದಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಈಗಾಗಲೇ ಸಾಕಷ್ಟು ಕ್ರಮಗಳನ್ನು ಜಾರಿಗೆ ತಂದಿರುವುದರೊಂದಿಗೆ ಸ್ವಲ್ಪ ದಿನಗಳವರೆಗೆ ಕೆಲವೊಂದು ಉತ್ಪಾದನೆಯನ್ನು ಸ್ಥಗಿತಗೊಳಿಸುವಂತೆ ಆದೇಶವನ್ನು ಕೂಡ ಹೊರಡಿಸಿದೆ. ಸರ್ಕಾರದ ಈ ಆದೇಶಕ್ಕೆ ಅನುಗುಣವಾಗಿ ಹಾಗೂ ಕೊರೋನಾ ವೈರಸ್‌ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ವಾಹನ ಉತ್ಪಾದಕ ಸಂಸ್ಥೆಗಳು ಕೂಡ ತಮ್ಮ ಉತ್ಪಾದನೆಯನ್ನು ಸ್ಥಗಿತಗೊಳಿಸಲಿದೆ. ಯಾವೆಲ್ಲಾ ವಾಹನ ಕಂಪೆನಿಗಳು ಕೊರೋನಾದಿಂದ ಸ್ಥಗಿತಗೊಳ್ಳಲಿದೆ ಗೊತ್ತಾ..?
Vijaya Karnataka Web vehicle production closed due to spread of coronavirus
ವಾಹನೋದ್ಯಮಕ್ಕೆ ಕಂಟಕ ತಂದ ಕೊರೋನಾ..ವಾಹನ ಸಂಸ್ಥೆಗಳ ಉತ್ಪಾದನೆ ಸ್ಥಗಿತ


​ಮಾರುತಿ ಸುಜುಕಿ

ಈಗಾಗಲೇ ವಾಹನ ಉತ್ಪಾದಕ ಕಂಪೆನಿಗಳು ತಮ್ಮ ಉತ್ಪಾದನೆಯಲ್ಲಿ ಶುಚಿತ್ವಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದರ ಮೂಲಕ ವಾಹನಗಳನ್ನು ತಯಾರಿಸುತ್ತಿದ್ದರೂ ಕೂಡ ಸರ್ಕಾರದ ಆದೇಶದ ಮೇರೆಗೆ ಮಾರುತಿ ಸುಜುಕಿಯು ತನ್ನ ಉತ್ಪಾದನೆಯನ್ನು ನಿಲ್ಲಿಸಲು ನಿರ್ಧರಿಸಿದೆ. ಕೊರೋನಾ ವೈರಸ್‌ನ ಹರಡುವಿಕೆಯು ನಿಯಂತ್ರಣಕ್ಕೆ ಬರುತ್ತಿದ್ದಂತೆ ಸುಜುಕಿ ಮತ್ತೊಮ್ಮೆ ತನ್ನ ಉತ್ಪಾದನೆಯನ್ನು ಆರಂಭಿಸಲಿದೆ. ಗುರುಗ್ರಾಮ್‌ ಮತ್ತು ಹರಿಯಾಣದ ಮಾನೆಸರ್‌ ನಲ್ಲಿರುವ ಮಾರುತಿ ಸುಜುಕಿಯ ಉತ್ಪಾದನಾ ಕಾರ್ಯವನ್ನು ಹಾಗೂ ಕಛೇರಿ ಕಾರ್ಯಾಚರಣೆಯನ್ನು ನಿಲ್ಲಿಸಲಿದೆ.

​ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌

ಅತಿ ಹೆಚ್ಚು ಜನ ಕೆಲಸ ಮಾಡುವ ಕೈಗಾರಿಕೆಗಳಲ್ಲಿ ಕೇವಲ 50 ಶೇಕಡದಷ್ಟು ಜನರು ಮಾತ್ರ ಕೆಲಸ ಮಾಡಬೇಕೆನ್ನುವ ಕರ್ನಾಟಕ ಸರ್ಕಾರದ ಆದೇಶಕ್ಕೆ ಅನುಗುಣವಾಗಿ ಟೊಯೋಟಾ ವಾಹನ ತಯಾರಕ ಸಂಸ್ಥೆಯು ಕರ್ನಾಟಕದ ಬಿಡದಿಯಲ್ಲಿನ ತನ್ನ ಉತ್ಪಾದನಾ ಕೇಂದ್ರವನ್ನು ಸ್ವಲ್ಪ ದಿನಗಳ ವರೆಗೆ ಮುಚ್ಚಲಿದೆ. ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಬೆಂಗಳೂರಿನ ಟೊಯೋಟಾ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಇನ್ನು ಸ್ವಲ್ಪ ದಿನಗಳ ವರೆಗೆ ಮನೆಯಿಂದಲೇ ಕೆಲಸ ಮಾಡುವಂತೆ ಆದೇಶವನ್ನು ನೀಡಿದೆ.

​ಹೋಂಡಾ ಭಾರತ

ಗ್ರೇಟರ್‌ ನೋಯ್ಡಾ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ತಪುಕರದಲ್ಲಿನ ಹೋಂಡಾ ಉತ್ಪಾದನಾ ಘಟಕಗಳಲ್ಲಿ ನಡೆಯುತ್ತಿರುವ ಉತ್ಪಾದನೆಯನ್ನು ಹೋಂಡಾದ ಸಹವರ್ತಿಗಳು ಹಾಗೂ ಸರಬರಾಜುದಾರರು ಮಾರ್ಚ್‌ 31 ರವರೆಗೆ ಸ್ಥಗಿತಗೊಳಸಲಿದ್ದಾರೆ ಎಂದು ಹೋಂಡಾ ಭಾರತವು ಮಾಹಿತಿಯನ್ನು ನೀಡಿದೆ. ವಲಯ ಮತ್ತು ಪ್ರಾದೇಶಿಕ ಸ್ಥಳಗಳಲ್ಲಿನ ಸಹವರ್ತಿಗಳಿಗೆ ಹೋಂಡಾವು ಮನೆಯಿಂದಲೇ ಕೆಲಸ ಮಾಡುವಂತೆ ಆದೇಶವನ್ನು ನೀಡಿದೆ. ಹೋಂಡಾ ಭಾರತವು ಎಪ್ರಿಲ್‌ 1ರಿಂದ ಪುನಃ ತನ್ನ ಉತ್ಪಾದನೆಯನ್ನುಆರಂಭಿಸುವ ಯೋಜನೆಯನ್ನು ಹಾಕಿಕೊಂಡಿದ್ದು, ಒಂದು ವೇಳೆ ಸರ್ಕಾರ ಮತ್ತು ಆರೋಗ್ಯ ಅಧಿಕಾರಿಗಳು ಮತ್ತಷ್ಟು ಸಮಯಗಳ ಉತ್ಪಾದನಾ ಸಂಸ್ಥೆಯನ್ನು ಮುಚ್ಚಲು ಆದೇಶವನ್ನು ಹೊರಡಿಸಿದರೆ ಹೋಂಡಾ ಭಾರತವು ತನ್ನ ಉತ್ಪಾದನೆಯನ್ನು ಮತ್ತಷ್ಟು ದಿನಗಳವರೆಗೆ ನಿಲ್ಲಿಸಲಿದೆ.

​ಹ್ಯುಂಡೈ ಭಾರತ

ಈ ಮೇಲಿನ ವಾಹನ ತಯಾರಕ ಸಂಸ್ಥೆಗಳಂತೇ ಹ್ಯುಂಡೈ ಭಾರತ ಕೂಡ ತನ್ನ ಚೆನೈನಲ್ಲಿನ ಉತ್ಪಾದನಾ ಕೇಂದ್ರವನ್ನು ಸ್ವಲ್ಪ ದಿನಗಳ ಕಾಲ ಅಂದರೆ ತಮಿಳುನಾಡು ಸರ್ಕಾರವು ಉತ್ಪಾದನೆಯನ್ನು ಪುನಃ ಆರಂಭಿಸಲು ಆದೇಶ ಹೊರಡಿಸುವ ತನಕ ಉತ್ಪಾದನೆಯನ್ನು ಸ್ಥಗಿತಗೊಳಿಸಲಿದೆ.

​ಎಫ್‌ಸಿಎ ಭಾರತ

ಎಫ್‌ಸಿಎ ಭಾರತ ಅಥವಾ ಜೀಪ್‌ ಭಾರತವು ರಂಜನ್‌ಗಾಂವ್‌ ನಲ್ಲಿನ ತನ್ನ ಉತ್ಪಾದನಾ ಸಂಸ್ಥೆಯನ್ನು ಮುಚ್ಚಲಿದೆ ಎಂದು ಮಾಹಿತಿಯನ್ನು ನೀಡಿದೆ. ತನ್ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಆರೋಗ್ಯವನ್ನು ಕಾಪಾಡುವ ಸಲುವಾಗಿ ಉತ್ಪಾದನೆಯನ್ನು ಕೆಲವು ದಿನಗಳ ಕಾಲ ಸ್ಥಗಿತಗೊಳಿಸಲಾಗುತ್ತಿದೆ ಎಂದು ತಿಳಿಸಿದೆ. ರಂಜನ್‌ಗಾಂವ್‌ನಲ್ಲಿನ ಉತ್ಪಾದನಾ ಕಾರ್ಯವು ಮಾರ್ಚ್‌31 ರವರೆಗೆ ಮುಚ್ಚಲಾಗುತ್ತದೆ ಇದರೊಂದಿಗೆ ಕಾರ್ಮಿಕರು ಕೆಲಸ ಮಾಡದಿದ್ದರೂ ಕೂಡ ಅವರ ವೇತನವನ್ನು ನಿಡಲಾಗುವುದು ಎಂದು ಹೇಳಿದೆ.

​ಮಹೀಂದ್ರಾ

ಮಹೀಂದ್ರಾ ಮತ್ತು ಮಹೀಂದ್ರಾ ವು ತನ್ನ ಮಹಾರಾಷ್ಟ್ರ ಜಿಲ್ಲೆಯ ನಾಗ್‌ಪುರ, ಚಕನ್‌ ಮತ್ತು ಕಂಡಿವಲಿಯ ಕೇಂದ್ರಗಳಲ್ಲಿನ ಉತ್ಪಾದನಾ ಚಟುವಟಿಕೆಗಳನ್ನು ನಿಲ್ಲಿಸುವುದಾಗಿದೆ ಘೋಷಿಸಿದೆ. ದೇಶದಲ್ಲಿರುವ ಮಹೀಂದ್ರಾ ಮತ್ತು ಮಹೀಂದ್ರಾದ ಎಲ್ಲಾ ಕಛೇರಿಗಳ ಉದ್ಯೋಗಿಗಳು ಈಗಾಗಲೇ ಮನೆಯಿಂದಲೇ ಕೆಲಸ ಮಾಡಲು ಆರಂಭಿಸಿದ್ದಾರೆ ಎಂದು ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ