ಆ್ಯಪ್ನಗರ

ಸಾಂಪ್ರಾದಾಯಿಕ ಪುದ್ದರ್‌ಮೆಚ್ಚಿ ನೇಮ

ಒರಿ ಉಳ್ಳಾಯೆ ಐವೆರ್‌ ಸತ್ಯೊಲು ನೆಲೆ ನಿಂತ ಹಿನ್ನೆಲೆಯ ಎಕ್ಕಾರು ಮಾಗಣೆಯ ನಡ್ಯೋಡಿ ಕರೆ ಬಳಿ ಅಶ್ವತ್ಥ ಕಟ್ಟೆ್ಟ ಸಮೀಪದ ಗದ್ಧೆಯಲ್ಲಿಪರಂಪರೆಯಿಂದ ನಡೆದು ಬಂದ ಪುದ್ದರ್‌ ಮೆಚ್ಚಿ ...

Vijaya Karnataka 13 Sep 2019, 3:24 pm
ಬಜಪೆ: ಒರಿ ಉಳ್ಳಾಯೆ ಐವೆರ್‌ ಸತ್ಯೊಲು ನೆಲೆ ನಿಂತ ಹಿನ್ನೆಲೆಯ ಎಕ್ಕಾರು ಮಾಗಣೆಯ ನಡ್ಯೋಡಿ ಕರೆ ಬಳಿ ಅಶ್ವತ್ಥ ಕಟ್ಟೆ್ಟ ಸಮೀಪದ ಗದ್ಧೆಯಲ್ಲಿಪರಂಪರೆಯಿಂದ ನಡೆದು ಬಂದ ಪುದ್ದರ್‌ ಮೆಚ್ಚಿ ನೇಮ ಶ್ರೀ ಕೊಡಮಣಿತ್ತಾಯ ಹಾಗೂ ಅರಸು ಉಳ್ಳಾಯ ದೈವಗಳು ಮೊದಲು ಎಕ್ಕಾರಿಗೆ ಆಗಮಿಸಿ ಹುಂಜ ಕೋಳಿ ಹಾಗೂ ಎತ್ತಿನ ರೂಪದಲ್ಲಿ(ಕೋರಿಲಾ-ಬೋರಿಲಾ) ಆವೇಶ ಬಂದು ಅಭಯ ನೀಡಿದ ಜಾಗದಲ್ಲಿನಡೆಯಿತು.
Vijaya Karnataka Web
ಸಾಂಪ್ರಾದಾಯಿಕ ಪುದ್ದರ್‌ಮೆಚ್ಚಿ ನೇಮ


ಪುದ್ದರ್‌ ಮೆಚ್ಚಿ ನೇಮದ ಬಳಿಕವೇ ಎಕ್ಕಾರು ಮಾಗಣೆಯಲ್ಲಿತೆನೆಹಬ್ಬ-ಹೊಸ ಅಕ್ಕಿಊಟ (ಪುದ್ದರ್‌) ನಡೆಯಬೇಕೆಂಬುದು ಪರಂಪರೆಯ ನಿಯಮ.

ಭಂಡಾರ ಮನೆ ಎಕ್ಕಾರು ಕಾವರಮನೆಯಿಂದ ದೈವಗಳ ಭಂಡಾರ ಆಗಮಿಸಿ ಆರಂಭದಲ್ಲಿಶ್ರೀ ಕೊಡಮಣಿತ್ತಾಯ ದೈವದ ನೇಮ ಜರಗಿದ ಬಳಿಕ ಶನಿವಾರ ಬ್ರಾಹ್ಮೀ ಮುಹೂರ್ತದಲ್ಲಿಪಿಲಿಚಾಮುಂಡಿ ದೈವದ ಕಟ್ಟು-ಕಟ್ಟಳೆ ನೇಮ ಪದ್ಧತಿಯಂತೆ ಜರಗಿತು.

ಚೌತಿ ಹಬ್ಬದ ದಿನ ಎಕ್ಕಾರು ಗುಡ್ಡೆಸಾನದ ಸನ್ನಿದಿಯಲ್ಲಿಚೌತಿಪೂಜೆ ಪ್ರಯುಕ್ತ ನಡೆದ ದೈವ ದರ್ಶನದಲ್ಲಿಎಕ್ಕಾರು ಕೃಷ್ಣ ಮಠದ ವೇದಮೂರ್ತಿ ಹರಿದಾಸ ಉಡುಪರು ಸೂಚಿಸಿದ ದಿನವೊಂದನ್ನು ಪುದ್ದರ್‌ ಮೆಚ್ಚಿ ನೇಮಕ್ಕೆ ನಿಗದಿಗೊಳಿಸಿ ಬಹಿರಂಗ ಪಡಿಸಲಾಗುತ್ತದೆ. ಈ ಎಲ್ಲಸಾಂಪ್ರಾದಾಯಿಕ ಪದ್ಧತಿಯ ಕಾರ್ಯಗಳು ಆಡಳಿತ ಮೊಕ್ತೇಸರ-ಗಡಿಕಾರ ನಿತಿನ್‌ ಹೆಗ್ಡೆ ಕಾವರ ಮನೆ (ತಿಮ್ಮ ಕಾವ) ಅವರ ನೇತೃತ್ವದಲ್ಲಿಎಲ್ಲನಾಲ್ಕು ಕರೆಗಳ ಗುರಿಕಾರರು, ಗ್ರಾಮಸ್ಥರ ಉಪಸ್ಥಿತಿಯಲ್ಲಿನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ