ಆ್ಯಪ್ನಗರ

ಸಿಂಹಾಸನವನ್ನೇರಿ ಶ್ರೀಗಳಿಂದ ಭಕ್ತರಿಗೆ ದರ್ಶನ

ನಾಗಮಂಗಲ ತಾಲೂಕಿನ ಧಾರ್ಮಿಕ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶರನ್ನವರಾತ್ರಿ ಉತ್ಸವಗಳು ಪ್ರಾರಂಭಗೊಂಡು ನಿತ್ಯ ಭಕ್ತಿ ಸಡಗರದೊಂದಿಗೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.

Vijaya Karnataka 5 Oct 2019, 1:31 pm
ನಾಗಮಂಗಲ:ತಾಲೂಕಿನ ಧಾರ್ಮಿಕ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶರನ್ನವರಾತ್ರಿ ಉತ್ಸವಗಳು ಪ್ರಾರಂಭಗೊಂಡು ನಿತ್ಯ ಭಕ್ತಿ ಸಡಗರದೊಂದಿಗೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.
Vijaya Karnataka Web Adhichuchanagiri


ಶ್ರೀ ಕ್ಷೇತ್ರದಲ್ಲಿ9 ದಿನ ನಡೆಯುವ ನವರಾತ್ರಿ ವೈಭವದ ಹಿನ್ನೆಲೆಯಲ್ಲಿಶ್ರೀಮಠ ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿದೆ. ತಳಿರು ತೋರಣ, ಫಲ ಪುಷ್ಪಾಲಂಕಾರ ನವರಾತ್ರಿ ಉತ್ಸವಕ್ಕೆ ಮೆರುಗು ನೀಡುತ್ತಿದೆ. ಮಠದಲ್ಲಿ ಹೋಮ ಹವನಗಳು ನಡೆದು ಶ್ರೀಕ್ಷೇತ್ರದ ಅಧಿಧಿದೇವತೆಗಳಿಗೆ ಪೂಜಾ ಕೈಂಕರ್ಯಗಳು ಜರುಗುತ್ತಿವೆ.

ನಿತ್ಯ ರಾತ್ರಿ 7ಕ್ಕೆ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸರ್ವಾಲಂಕಾರಭೂಷಿತರಾಗಿ ಚಿನ್ನದ ಕಿರೀಟವನ್ನು ಧರಿಸಿ ವಟುಗಳ ವೇದ ಘೋಷಗಳೊಂದಿಗೆ ಸಾವಿರಾರು ಭಕ್ತರ ನಡುವೆ ಮೆರವಣಿಗೆಯಲ್ಲಿ ಆಗಮಿಸಿ ಶ್ರೀಕ್ಷೇತ್ರದ ದೇವತೆಗಳಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ನಂತರ ಜ್ವಾಲಾಪೀಠಕ್ಕೆ ಪೂಜೆ ಸಲ್ಲಿಸಿ ಸಿದ್ಧ ಸಿಂಹಾಸನವನ್ನು ಅಲಂಕರಿಸುತ್ತಾರೆ. ಈ ವೇಳೆ ಸಿದ್ಧ ಸಿಂಹಾಸನ ಪೂಜೆ, ಷೋಡಶೋಪಾಚಾರ ಪೂಜೆಗಳು ಶ್ರೀಗಳಿಗೆ ನೆರವೇರುತ್ತವೆ. ನಂತರ ಶ್ರೀಗಳು ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ.

ನವರಾತ್ರಿ ಪ್ರಥಮ ದಿನದ ಪೂಜಾ ಕೈಂಕರ್ಯದ ಜವಾಬ್ದಾರಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬೆಂಗಳೂರಿನ ವಿಜಯನಗರ ಶಾಖಾ ಮಠ ಮತ್ತು ತಾಲೂಕಿನ ಬಿ.ಜಿ.ನಗರದ ಶಿಕ್ಷಣ ಸಂಸ್ಥೆಯು ವಹಿಸಿಕೊಂಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ