ಗಂಗಾಧರ ಬಂಡಿಹಾಳ
ಕೊಪ್ಪಳ:ಉತ್ತರ ಕರ್ನಾಟಕದ ಆರಾಧ್ಯ ದೈವ ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಾಲಯದಲ್ಲಿಭಾರತ ಹುಣ್ಣಿಮೆಗೆ ದೇವಿಯ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಆಗಮಿಸಲಿದ್ದು, ವಿಶೇಷ ಪೂಜೆ ನಡೆಯಲಿದೆ.
ಶ್ರೀ ದೇವಿಗೆ ನಿತ್ಯವೂ ನೈವೇದ್ಯ, ಪಂಚಾಮೃತ ಅಭಿಷೇಕ ನಡೆಯಲಿದ್ದು, ಬೆಳಗ್ಗೆ 6 ಗಂಟೆಗೆ ಪೂಜೆ ಮುಕ್ತಾಯವಾಗಲಿದೆ. ಆರತಿ ನಂತರ ಸಾರ್ವಜನಿಕರಿಗೆ ದರ್ಶನ ಪ್ರಾರಂಭವಾಗುತ್ತದೆ. ದೇವಸ್ಥಾನ ಬೆಳಗ್ಗೆ 6 ರಿಂದ ರಾತ್ರಿ 8 ರವರೆಗೆ ಸಾರ್ವಜನಿಕರ ದರ್ಶನಕ್ಕೆ ಲಭ್ಯವಿರುತ್ತದೆ.
ನೈವೇದ್ಯಕ್ಕಾಗಿ ಚಿತ್ರಾನ್ನ, ಹೋಳಿಗೆ, ಮೊಸರನ್ನ, ಕಡ್ಲೆಬೇಳೆ ಪಾಯಸ ತಯಾರಿಸಿ ಭಕ್ತರಿಗೂ ವಿತರಿಸಲಾಗುತ್ತದೆ. ಮಂಗಳವಾರ, ಶುಕ್ರವಾರ ಹಾಗೂ ಪೂರ್ಣಿಮೆ ದಿನದಲ್ಲಿ ಬೆಳಗಿನ ಐದು ಗಂಟೆಯಿಂದ ರಾತ್ರಿ ಎಂಟು ಗಂಟೆಯವರೆಗೆ ತೆರೆದಿರುತ್ತದೆ. ಮಂಗಳವಾರ, ಅಮಾವಾಸ್ಯೆ, ಹುಣ್ಣಿಮೆ, ಏಕಾದಶಿ ದಿನ ಗ್ರಾಮದ ನೂರಾರು ಭಕ್ತರಿಂದ ಸುಪ್ರಭಾತ ಇರುತ್ತದೆ.
ಭಾರತ ಹುಣ್ಣಿಮೆಯ ದಿನ ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ದೇವಿಯ ದರ್ಶನಕ್ಕೆ ರಾಜ್ಯ ಹಾಗೂ ಹೊರ ರಾಜ್ಯದಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದು, ತುಂಗಭದ್ರಾ ನದಿಯಲ್ಲಿಪವಿತ್ರ ಸ್ನಾನ ಮಾಡಿ ದೇವಿಯ ದರ್ಶನ ಪಡೆಯಲಿದ್ದಾರೆ. ಬೆಳಗ್ಗೆ 5 ಗಂಟೆಗೆ ಪೂಜೆ, ಅಭಿಷೇಕ, ಮಹಾನೈವೇದ್ಯ, ಸುಪ್ರಭಾತ ಸೇವೆ, ಮಹಾಮಂಗಳಾರತಿ, ದರ್ಶನ, ತೀರ್ಥ ಪ್ರಸಾದ ವಿತರಣೆಯಾಗಲಿದೆ. ಆದರೆ ಸಂಜೆ ನಡೆಯಲಿರುವ ಹರಕೆ ರಥೋತ್ಸವ ಇರುವುದಿಲ್ಲ.
ಸಂಜೆ 7 ಗಂಟೆಗೆ ಶ್ರೀ ದೇವಿಯ ಉತ್ಸವ ಮೂರ್ತಿಯನ್ನು ಅಲಂಕಾರಗೊಳಿಸಲಾಗುತ್ತದೆ. ಪಲ್ಲಕ್ಕಿಯೊಳಗೆ ಉತ್ಸವ ಮೂರ್ತಿ ಕೂಡಿಸಿ ತುಂಗಭದ್ರಾ ನದಿಗೆ ಮೆರವಣಿಗೆಯಲ್ಲಿಕರೆದೊಯ್ಯಲಾಗುತ್ತದೆ. ನದಿಯಲ್ಲಿಗಂಗಾ ದೇವಿಯ ಪೂಜೆ ಮಾಡಿ ನಂತರ ದೇವಸ್ಥಾನಕ್ಕೆ ತೆರಳಿ ಮಾತಂಗಿ ಪೂಜಾರರಿಗೆ ಉಡಿ ತುಂಬಿ ಹಾಲೆರೆಯಲಾಗುತ್ತದೆ. ಕ್ಷೇತ್ರಪಾಲ ಅಜ್ಜಪ್ಪನಿಗೆ ಗುಗ್ಗರಿ ಮುಟಿಗೆ ಪೂಜೆ, ನೈವೇದ್ಯ ಸಮರ್ಪಣೆ, ಪೂಜಾರರಿಗೆ ಗುಗ್ಗರಿ ಉಡಿ ತುಂಬುವುದು, ಮಹಾಂಗಳಾರತಿ, ನಂತರ ಗುಗ್ಗರಿ ವಿತರಣೆಯೊಂದಿಗೆ ಭಾರತ ಹುಣ್ಣಿಮೆಯ ವಿಶೇಷ ಕಾರ್ಯಕ್ರಮ ಮುಕ್ತಾಯವಾಗುತ್ತದೆ.
ಕೊಪ್ಪಳ:ಉತ್ತರ ಕರ್ನಾಟಕದ ಆರಾಧ್ಯ ದೈವ ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಾಲಯದಲ್ಲಿಭಾರತ ಹುಣ್ಣಿಮೆಗೆ ದೇವಿಯ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಆಗಮಿಸಲಿದ್ದು, ವಿಶೇಷ ಪೂಜೆ ನಡೆಯಲಿದೆ.
ಶ್ರೀ ದೇವಿಗೆ ನಿತ್ಯವೂ ನೈವೇದ್ಯ, ಪಂಚಾಮೃತ ಅಭಿಷೇಕ ನಡೆಯಲಿದ್ದು, ಬೆಳಗ್ಗೆ 6 ಗಂಟೆಗೆ ಪೂಜೆ ಮುಕ್ತಾಯವಾಗಲಿದೆ. ಆರತಿ ನಂತರ ಸಾರ್ವಜನಿಕರಿಗೆ ದರ್ಶನ ಪ್ರಾರಂಭವಾಗುತ್ತದೆ. ದೇವಸ್ಥಾನ ಬೆಳಗ್ಗೆ 6 ರಿಂದ ರಾತ್ರಿ 8 ರವರೆಗೆ ಸಾರ್ವಜನಿಕರ ದರ್ಶನಕ್ಕೆ ಲಭ್ಯವಿರುತ್ತದೆ.
ನೈವೇದ್ಯಕ್ಕಾಗಿ ಚಿತ್ರಾನ್ನ, ಹೋಳಿಗೆ, ಮೊಸರನ್ನ, ಕಡ್ಲೆಬೇಳೆ ಪಾಯಸ ತಯಾರಿಸಿ ಭಕ್ತರಿಗೂ ವಿತರಿಸಲಾಗುತ್ತದೆ. ಮಂಗಳವಾರ, ಶುಕ್ರವಾರ ಹಾಗೂ ಪೂರ್ಣಿಮೆ ದಿನದಲ್ಲಿ ಬೆಳಗಿನ ಐದು ಗಂಟೆಯಿಂದ ರಾತ್ರಿ ಎಂಟು ಗಂಟೆಯವರೆಗೆ ತೆರೆದಿರುತ್ತದೆ. ಮಂಗಳವಾರ, ಅಮಾವಾಸ್ಯೆ, ಹುಣ್ಣಿಮೆ, ಏಕಾದಶಿ ದಿನ ಗ್ರಾಮದ ನೂರಾರು ಭಕ್ತರಿಂದ ಸುಪ್ರಭಾತ ಇರುತ್ತದೆ.
ಭಾರತ ಹುಣ್ಣಿಮೆಯ ದಿನ ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ದೇವಿಯ ದರ್ಶನಕ್ಕೆ ರಾಜ್ಯ ಹಾಗೂ ಹೊರ ರಾಜ್ಯದಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದು, ತುಂಗಭದ್ರಾ ನದಿಯಲ್ಲಿಪವಿತ್ರ ಸ್ನಾನ ಮಾಡಿ ದೇವಿಯ ದರ್ಶನ ಪಡೆಯಲಿದ್ದಾರೆ. ಬೆಳಗ್ಗೆ 5 ಗಂಟೆಗೆ ಪೂಜೆ, ಅಭಿಷೇಕ, ಮಹಾನೈವೇದ್ಯ, ಸುಪ್ರಭಾತ ಸೇವೆ, ಮಹಾಮಂಗಳಾರತಿ, ದರ್ಶನ, ತೀರ್ಥ ಪ್ರಸಾದ ವಿತರಣೆಯಾಗಲಿದೆ. ಆದರೆ ಸಂಜೆ ನಡೆಯಲಿರುವ ಹರಕೆ ರಥೋತ್ಸವ ಇರುವುದಿಲ್ಲ.
ಸಂಜೆ 7 ಗಂಟೆಗೆ ಶ್ರೀ ದೇವಿಯ ಉತ್ಸವ ಮೂರ್ತಿಯನ್ನು ಅಲಂಕಾರಗೊಳಿಸಲಾಗುತ್ತದೆ. ಪಲ್ಲಕ್ಕಿಯೊಳಗೆ ಉತ್ಸವ ಮೂರ್ತಿ ಕೂಡಿಸಿ ತುಂಗಭದ್ರಾ ನದಿಗೆ ಮೆರವಣಿಗೆಯಲ್ಲಿಕರೆದೊಯ್ಯಲಾಗುತ್ತದೆ. ನದಿಯಲ್ಲಿಗಂಗಾ ದೇವಿಯ ಪೂಜೆ ಮಾಡಿ ನಂತರ ದೇವಸ್ಥಾನಕ್ಕೆ ತೆರಳಿ ಮಾತಂಗಿ ಪೂಜಾರರಿಗೆ ಉಡಿ ತುಂಬಿ ಹಾಲೆರೆಯಲಾಗುತ್ತದೆ. ಕ್ಷೇತ್ರಪಾಲ ಅಜ್ಜಪ್ಪನಿಗೆ ಗುಗ್ಗರಿ ಮುಟಿಗೆ ಪೂಜೆ, ನೈವೇದ್ಯ ಸಮರ್ಪಣೆ, ಪೂಜಾರರಿಗೆ ಗುಗ್ಗರಿ ಉಡಿ ತುಂಬುವುದು, ಮಹಾಂಗಳಾರತಿ, ನಂತರ ಗುಗ್ಗರಿ ವಿತರಣೆಯೊಂದಿಗೆ ಭಾರತ ಹುಣ್ಣಿಮೆಯ ವಿಶೇಷ ಕಾರ್ಯಕ್ರಮ ಮುಕ್ತಾಯವಾಗುತ್ತದೆ.