ಆ್ಯಪ್ನಗರ

ಗುರು ರಾಯರ ಜಯಂತ್ಯುತ್ಸವ

ಮಾರ್ಚ್‌ 13 ಮಂತ್ರಾಲಯ ಗುರು ಸಾರ್ವಭೌಮರ 424ನೇ ವರ್ಷದ ವರ್ಧಂತಿ ಉತ್ಸವ. ಮಂತ್ರಾಲಯದಲ್ಲಿ ಗುರು ರಾಯರ ವರ್ಧಂತಿ ಉತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ.

Vijaya Karnataka 30 Mar 2019, 4:19 pm
ಗುರು ಸಾರ್ವಭೌಮರು 16ನೇ ಶತಮಾನದ ಸಂತಶ್ರೇಷ್ಠರು. ದ್ವೈತ ಸಿದ್ಧಾಂತ ಪ್ರತಿಪಾದಕರು. ರಾಘವೇಂದ್ರ ಸ್ವಾಮಿಗಳ ಅನನ್ಯ ಭಕ್ತರು ದೇಶ, ವಿದೇಶಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ಕರ್ನಾಟಕ, ಆಂಧ್ರಪ್ರದೇಶದಲ್ಲಿ ಹೆಚ್ಚಿದ್ದಾರೆ. ಗುರುಗಳ ವರ್ಧಂತಿ ಉತ್ಸವವನ್ನು ಭಾವಭಕ್ತಿಯಿಂದ ಶ್ರೀಮಠದಲ್ಲಿ ಆಚರಿಸಲಾಗುತ್ತದೆ.
Vijaya Karnataka Web raghavendra


ಮಂತ್ರಾಲಯದ ಶ್ರೀಮಠದಲ್ಲಿ ಈ ಉತ್ಸವವನ್ನು ಶ್ರೀ ರಾಘವೇಂದ್ರ ಗುರು ವೈಭವೋತ್ಸವ ಎಂದು ಆಚರಿಸುತ್ತಾರೆ. 398ನೇ ವೈಭವ ಉತ್ಸವದ ಏಳನೆಯ ದಿನವನ್ನು ಅಂದರೆ ಫಲ್ಗುಣ ಮಾಸ ಶುಕ್ಲ ಪಕ್ಷ ಸಪ್ತಮಿಯನ್ನು ವರ್ಧಂತಿ ಉತ್ಸವ ಪರ್ವವೆನ್ನುತ್ತಾರೆ. ವರ್ಧಂತಿ ಉತ್ಸವದ ಅಂಗವಾಗಿ ಶ್ರೀ ರಾಘವೇಂದ್ರ ಸ್ವಾಮಿ ಮಠಗಳಲ್ಲಿ ‘ರಾಘವೇಂದ್ರ ಅಷ್ಟೋತ್ತರ, ರಾಘವೇಂದ್ರ ಅಷ್ಟಾಕ್ಷರಿ ಮತ್ತು ರಾಘವೇಂದ್ರ ಸ್ತೋತ್ರ, ಕವಚ’ ಪಾರಾಯಣ ನಡೆಯುತ್ತದೆ.

ಅಂದು ಲೋಕವ ಬೆಳಗಿದ ಯತಿರಾಯರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ನಡೆಯುತ್ತದೆ. ಸಂಜೆ ರಾಯರ ನೆನಪಿನಲ್ಲಿ ಸತ್ಸಂಗ, ಪ್ರವಚನ, ಉಪನ್ಯಾಸ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಾ. 13ರಂದು ಸಂಜೆ 5.30ಕ್ಕೆ ಡಾ. ನಾಗರಾಜ ಹವಾಲ್ದಾರ್‌ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಏರ್ಪಡಿಸಲಾಗಿದೆ. ರಾತ್ರೆ 9ಕ್ಕೆ ಹೈದರಾಬಾದಿನ ಮಧುರಿಮ ನಾರ್ಲ ಅವರಿಂದ ಕೂಚಿಪುಡಿ ನೃತ್ಯವಿರುತ್ತದೆ.

ತಿರುಮಲ ಶ್ರೀನಿವಾಸ ದೇವರ ಶೇಷವಸ್ತ್ರವನ್ನು ಗುರು ರಾಯರ ಮೂಲ ವೃಂದಾವನಕ್ಕೆ ಅಂದು ಬೆಳಗ್ಗೆ ಸಮರ್ಪಣೆ ಮಾಡಲಾಗುವುದು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ. ವರ್ಧಂತಿ ಮಹೋತ್ಸವದ ನಿಮಿತ್ತ ಗುರು ರಾಯರಿಗೆ 450 ಕಲಾವಿದರಿಂದ ನಾಧಾರ ಸಮರ್ಪಣಾ ಸೇವೆ ನಡೆಯುವುದು ವಿಶೇಷ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ