ಆ್ಯಪ್ನಗರ

8ರಿಂದ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವ

ಬೇಲೂರು ಚನ್ನಕೇಶವಸ್ವಾಮಿ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ ಕಾರ‍್ಯಕ್ರಮಗಳು ಏ.8ರಿಂದ 21ರವರೆಗೆ ನಡೆಯಲಿದೆ

Vijaya Karnataka 6 Apr 2019, 5:00 am
ಬೇಲೂರು:ಚನ್ನಕೇಶವಸ್ವಾಮಿ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ ಕಾರ‍್ಯಕ್ರಮಗಳು ಏ.8ರಿಂದ 21ರವರೆಗೆ ನಡೆಯಲಿದೆ ಎಂದು ದೇವಾಲಯದ ಕಾರ‍್ಯನಿರ್ವಹಣಾಧಿಕಾರಿ ವಿದ್ಯುಲ್ಲತಾ ತಿಳಿಸಿದ್ದಾರೆ.
Vijaya Karnataka Web Belur Chennakeshava


8ರಂದು ದಿವ್ಯ ಶಾರದಾ ಅಲಂಕರೋತ್ಸವದೊಂದಿಗೆ ಪ್ರತಿ ದಿನ ಸಂಜೆ ವಿವಿಧ ಉತ್ಸವಗಳು ಜರುಗಲಿವೆ. ಕ್ರಮವಾಗಿ ಕಲ್ಯಾಣೋತ್ಸವ, ಚಂದ್ರಮಂಡಲಾರೋಹಣೋತ್ಸವ, ಅನಂತ ಪೀಠಾರೋಹಣೋತ್ಸವ, ಹಂಸಾರೋಹಣೋತ್ಸವ, ಬೆಳ್ಳಿ ಮಂಟಪೋತ್ಸವ ಮತ್ತಿತರ ಉತ್ಸವಗಳು ನಡೆಯುತ್ತವೆ. 14ರಂದು ಹನುಮಂತಾರೋಹಣೋತ್ಸವ, 15ರಂದು ಗರುಡೋತ್ಸವ ನಡೆಯಲಿದೆ. 16, 17ರಂದು ರಥೋತ್ಸವ ಜರುಗಲಿದೆ. ಬಳಿಕ ಡೋಲೋತ್ಸವ, ತೆಪ್ಪ್ಪೋತ್ಸವ, ಸಂಹಾರೋಹಣೋತ್ಸವ, ಮೋಹಿನಿ ಅಲಂಕಾರೋತ್ಸವ, ಕಡೆಯ ದಿನ ಶಯನೋತ್ಸವ ನಡೆಯುತ್ತದೆ.

16ರಂದು ರಥೋತ್ಸವವನ್ನು ದೇವಸ್ಥಾನದ ಮುಂದಿನ ರಸ್ತೆಯಲ್ಲಿ ಈಶಾನ್ಯ ಮೂಲೆಯಿಂದ ಆಗ್ನೇಯ ಮೂಲೆಯವರೆಗೆ ಮಾತ್ರವೇ ಎಳೆಯಲಾಗುವುದು. ಮರು ದಿನ ನಾಡಿನ ದಿವ್ಯ ರಥೋತ್ಸವವನ್ನು ದೇಗುಲದ ಸುತ್ತ ಎಳೆಯಲಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ