ಆ್ಯಪ್ನಗರ

ದಾವಣಗೆರೆಯಲ್ಲಿ 33 ವರ್ಷಗಳ ಬಳಿಕ ದಸರಾ ಧರ್ಮ ಸಮ್ಮೇಳನ

ದಾವಣಗೆರೆ ಮಹಾನಗರಕ್ಕೆ 33 ವರ್ಷಗಳ ನಂತರ ದಸರಾ ಧರ್ಮ ಸಮ್ಮೇಳನ ನಡೆಸುವ ಅವಕಾಶ ಸಿಕ್ಕಿರುವುದು ಸೌಭಾಗ್ಯ ಎಂದು ಸೂಡಿ ಜುಕ್ತಿ ಹಿರೇಮಠದ ಶ್ರೀ ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Vijaya Karnataka 21 Sep 2019, 2:43 pm
ದಾವಣಗೆರೆ:ದಾವಣಗೆರೆ ಮಹಾನಗರಕ್ಕೆ 33 ವರ್ಷಗಳ ನಂತರ ದಸರಾ ಧರ್ಮ ಸಮ್ಮೇಳನ ನಡೆಸುವ ಅವಕಾಶ ಸಿಕ್ಕಿರುವುದು ಸೌಭಾಗ್ಯ ಎಂದು ಸೂಡಿ ಜುಕ್ತಿ ಹಿರೇಮಠದ ಶ್ರೀ ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Vijaya Karnataka Web bodhi logo


ಸೆ. 29ರಿಂದ ಅ. 8ರವರೆಗೆ ನಡೆಯುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಪೂರ್ವಭಾವಿಯಾಗಿ ಹೈಸ್ಕೂಲ್‌ ಮೈದಾನದಲ್ಲಿ ನಡೆದ ಮಹಾಮಂಟಪದ ಹಂದರಗಂಬ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಧಿಹಿಸಿ ಮಾತನಾಡಿದರು.

ದಾವಣಗೆರೆ ಮಹಾನಗರಕ್ಕೆ ಧರ್ಮ ಸಧಿಮ್ಮೇಳನ ನಡೆಸುವ ಅವಕಾಶ ಸಿಕ್ಕಿರುವುದು ನಮ್ಮೆಲ್ಲರ ಸೌಭಾಗ್ಯ. ಧರ್ಮದ ವಿಚಾರಗಳು ಕ್ಲಿಷ್ಟಕರವಾಗಿರುವ ಇಂದಿನ ಪರಿಸ್ಥಿತಿಯಲ್ಲಿಸತ್ಯ ಸಂದೇಶ ತಿಳಿಸುವ, ವೀರಶೈವ ಪರಂಪರೆ ಬಿತ್ತರಿಸುವ ಉದ್ದೇಶದಿಂದ 10 ದಿವಸ ದಸರಾ ಉತ್ಸವ ನಡೆಯಲಿದೆ. ದಸರಾ ಉತ್ಸವ ದುಷ್ಟಶಕ್ತಿಗಳ ದಮನ ಮಾಡಿ, ಶಿಷ್ಟಶಕ್ತಿಗಳ ರಕ್ಷಣೆ ಮಾಡುವಂತಹದ್ದು. ಶಿವಶಕ್ತಿಯರ ಆರಾಧನೆ ನೆನಪಿಸುವ ಉತ್ಸವವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.

ಶಾಸಕ ಶಾಮನೂರು ಶಿವಶಂಕರಪ್ಪ ಪೂಜೆ ನೆರವೇರಿಸಿ ಮಾತನಾಡಿ, ದಸರಾ ಧರ್ಮ ಸಮ್ಮೇಳನ ಯಶಸ್ವಿಯಾಗಲಿ, ಉತ್ಸವದಿಂದ ಶಾಂತಿ, ನೆಮ್ಮದಿ ಲಭಿಸುತ್ತದೆ ಎಂದರು.

ಹರಪನಹಳ್ಳಿಯ ಶ್ರೀವರಸದ್ಯೋಜಾತ ಸ್ವಾಮೀಜಿ ಮಾತನಾಡಿ, ದಸರಾ ನವರಾತ್ರಿ ಉತ್ಸವ ನಡೆಸುವ ಮುನ್ನ 6ರಿಂದ 7 ಜಿಲ್ಲೆಗಳ ಹೆಸರನ್ನು ಇಟ್ಟುಕೊಂಡು ಅರಿಕೆ ಮಾಡಿಕೊಳ್ಳುತ್ತಾರೆ. ಈ ಪೈಕಿ ದಾವಣಗೆರೆ ಜಿಲ್ಲೆಆಯ್ಕೆಯಾಗಿದೆ ಎಂದರು.

ಆವರಗೊಳ್ಳ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಯಡಿಯೂರಿನ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ತಾವರಕೆರೆಯ ಅಭಿನವಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿಯ ಕೇದಾರ ಶಿವಶಾಂತವೀರ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷ ಅಥಣಿ ವೀರಣ್ಣ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ