ಆ್ಯಪ್ನಗರ

ಶ್ರೀ ಸಾತೇರಿ ದೇವಿ ಜಾತ್ರೆ ಆರಂಭ

ವರ್ಷದಲ್ಲಿ ಏಳು ದಿನ ಮಾತ್ರ ದರ್ಶನ ನೀಡುವ ಕಾರವಾರ ತಾಲೂಕಿನ ಹಣಕೋಣದ ಶ್ರೀ ಸಾತೇರಿ ದೇವಿ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಶನಿವಾರದಿಂದ ಸಾರ್ವಜನಿಕರಿಂದ ವಿವಿಧ ಸೇವೆ ಸ್ವೀಕರಿಸಲಾಯಿತು.

Vijaya Karnataka 14 Dec 2022, 5:19 pm
ಕಾರವಾರ:ವರ್ಷದಲ್ಲಿ ಏಳು ದಿನ ಮಾತ್ರ ದರ್ಶನ ನೀಡುವ ಕಾರವಾರ ತಾಲೂಕಿನ ಹಣಕೋಣದ ಶ್ರೀ ಸಾತೇರಿ ದೇವಿ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಶನಿವಾರದಿಂದ ಸಾರ್ವಜನಿಕರಿಂದ ವಿವಿಧ ಸೇವೆ ಸ್ವೀಕರಿಸಲಾಯಿತು.
Vijaya Karnataka Web tempul


ದೇವಿಯ ದರ್ಶನ ಪಡೆಯಲು ಹಾಗೂ ಸೇವೆ ಸಲ್ಲಿಸಲು ಶನಿವಾರ ಮುಂಜಾನೆಯಿಂದಲೇ ಭಕ್ತರು ಸರದಿಯಲ್ಲಿ ನಿಂತುಕೊಂಡಿದ್ದರು. ಬೆಳಗ್ಗೆ ದೇವಿಯ ಶೃಂಗಾರ ಹಾಗೂ ಪೂಜೆಯ ನಂತರ ಭಕ್ತರಿಂದ ಸೇವೆ ಸ್ವೀಕರಿಸಲಾಯಿತು. ಉಡಿ, ಹಣ್ಣುಕಾಯಿ ಸೇರಿದಂತೆ ತಮ್ಮ ತಮ್ಮ ಹರಕೆಯಂತೆ ಭಕ್ತರು ಬಂಗಾರದ ಆಭರಣಗಳನ್ನು ಶ್ರೀ ದೇವಿಗೆ ಸಮರ್ಪಿಸಿದರು.

ಸೆ.11ರವರೆಗೆ ನಡೆಯುವ ಶ್ರೀ ಸಾತೇರಿ ದೇವಿಯ ಉತ್ಸವಕ್ಕೆ ಮೊದಲ ದಿನವಾಗಿರುವ ಶನಿವಾರ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಿಯ ದರ್ಶನ ಪಡೆದರು. ಪ್ರತಿ ವರ್ಷದಂತೆ ಈ ವರ್ಷವೂ ದೇವಸ್ಥಾನದ ಮುಂಭಾಗದಲ್ಲಿರುವ ಸಭಾಭವನದಲ್ಲಿ ದೇವಿಗೆ ಅರ್ಪಿಸಿರುವ ಸೀರೆ, ಬಂಗಾರದ ಆಭರಣ ಇತ್ಯಾದಿಗಳ ಹರಾಜು ನಡೆಯಿತು. ಉತ್ಸವದ ಪ್ರತಿ ದಿನ ಬೆಳಗ್ಗೆಯಿಂದ ಸಂಜೆಯವರೆಗೆ ಹರಾಜು ನಡೆಯುತ್ತದೆ. ಶನಿವಾರ ಸಂಜೆ ಗೋವಾ ಕಾಣಕೋಣದ ಕುಲಾವಿ ಭಕ್ತರಿಂದ ಭಜನೆ ಕಾರ್ಯಕ್ರಮ ನಡೆಯಿತು.


ಇಂದು ಮಹಾಪ್ರಸಾದ, ಭಜನೆ
ಸೆ.8ರಂದು ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಮಹಾಪ್ರಸಾದ ವಿತರಣೆ ನಡೆಯಲಿದೆ. ದೇವಸ್ಥಾನದ ಮಾಜಿ ಮುಕ್ತೇಸರ ನಾರಾಯಣ ರಘುನಾಥ ನಾಯ್ಕ ಅವರ ಸ್ಮರಣಾರ್ಥ ಅವರ ಕುಟುಂಬದವರು ಮಹಾಪ್ರಸಾದವನ್ನು ಪ್ರಾಯೋಜಿಸಿದ್ದಾರೆ. ಸಂಜೆ 6.30ರಿಂದ ರಾಮದಾಸ ರಾಯಕರ ಇವರಿಂದ ಭಜನೆ ಕಾರ್ಯಕ್ರಮ ನಡೆಯಲಿದೆ. ನಂತರ ಪೂಜೆ ಪ್ರಸಾದ ವಿತರಣೆ ನಡೆಯುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ