ಆ್ಯಪ್ನಗರ

ಉಚ್ಚಂಗಿದುರ್ಗದ ಉತ್ಸವಾಂಬೆಯ ಜಾತ್ರೆ

ಹರಪನಹಳ್ಳಿಯ ಶಕ್ತಿ ದೇವತೆ ಉಚ್ಚಂಗಿದುರ್ಗದ ಉತ್ಸಾವಾಂಬೆಯ ಜಾತ್ರೆ ಅಪಾರ ಭಕ್ತರ ನಡುವೆ ನಡೆಯಿತು.

Vijaya Karnataka 13 Apr 2019, 5:00 am
ಹರಪನಹಳ್ಳಿ: ಶಕ್ತಿ ದೇವತೆ ಉಚ್ಚಂಗಿದುರ್ಗದ ಉತ್ಸಾವಾಂಬೆಯ ಜಾತ್ರೆ ಅಪಾರ ಭಕ್ತರ ನಡುವೆ ನಡೆಯಿತು.
Vijaya Karnataka Web Uchchangi (3)


ಭಕ್ತರು ಆನೆಹೊಂಡದಲ್ಲಿ ಭಾನುವಾರ ಪೂಜೆ ಸಲ್ಲಿಸಿ ದೇವಿಯ ದರ್ಶನ ಪಡೆದರು. ಸಂಜೆ ಚಂದ್ರ ದರ್ಶನ ಮಾಡಿದರು. ತಾಲೂಕಿನ ಉತ್ಸವಾಂಬೆಯ ಜಾತ್ರೆ ಏ.4ರಿಂದ ಆರಂಭಗೊಂಡು 8ರವರೆಗೂ ಧಾರ್ಮಿಕ ವಿಧಿ ವಿಧಾನಗಳಿಂದ ನಾನಾ ಸೇವೆಗಳು ಭಕ್ತರಿಂದ ನಡೆಯಿತು.

ಬೆಟ್ಟದ ತುದಿಯಲ್ಲಿ ಉತ್ಸವಾಂಬೆ ನೆಲೆಸಿದ್ದರೆ, ಬೆಟ್ಟದ ಕೆಳ ಭಾಗದ ತೋಪಿನಲ್ಲಿ ಹಾಲಮ್ಮ ದೇವಿ ನೆಲೆಸಿದ್ದಾಳೆ. ಜಾತ್ರೆಗೆ ನಾನಾ ಜಿಲ್ಲೆಗಳಿಂದ ಸಹಸ್ರಾರಾರು ಭಕ್ತರು ಆಗಮಿಸಿ ಹರಕೆ ತೀರಿಸಿದರು. ಬೆಟ್ಟದ ಮೇಲೆ ಅರಿಶಿನ ಹೊಂಡ, ಆನೆಹೊಂಡ, ಹಿರೇಹೊಂಡ, ಹೊನ್ನೆ ಹೊಂಡ ಇತರೆ ಹೊಂಡಗಳ ಬಳಿ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ಜರುಗಿದವು.

ಪ್ರತಿ ಹುಣ್ಣಿಮೆ ವಿಶೇಷ ದಿನಗಳಲ್ಲಿ ಭಕ್ತರು ಬೆಟ್ಟದ ಮೇಲೆ ಹತ್ತಿ ದೇವಿಯ ದರ್ಶನ ಪಡೆದರೆ, ಈ ಜಾತ್ರೆಯೂ ಪಕ್ಕದ ಹಾಲಮ್ಮನ ತೋಪಿನಲ್ಲಿ ನಡೆಯುತ್ತದೆ. ಬೆಟ್ಟದ ಮೇಲೆ ನೆಲೆಸಿರುವ ದೇವಿಯನ್ನು ವಿವಿಧ ವಾದ್ಯಗಳ ಮೂಲಕ ಊರಿನ ಪ್ರಮುಖ ಬೀದಿಗಳಲ್ಲಿ ಮೂಲಕ ಮೆರವಣಿಗೆಯಲ್ಲಿ ಪಾದಗಟ್ಟೆಗೆ ಕರೆತರಲಾಯಿತು. ಶ್ರೀದೇವಿ ಉಚ್ಚಂಗೆಮ್ಮನ ಓಕುಳಿ ಉತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು.

ಕಾಯಿ ಕಿತ್ತ ಯುವಕರು

ದೇವಿಯ ಪಾದಗಟ್ಟೆಯ ಹತ್ತಿರ ದೇವಿಯ ಪೂಜೆ ನೇರವೇರಿದ ಬಳಿಕ ಯುವಕರು ಪಾದ ಗಟ್ಟೆಯ ಬಳಿ ಓಕುಳಿ ಉತ್ಸವದ ಹೊಂಡದಲ್ಲಿ ತೆಂಗಿನಕಾಯಿ ಕೀಳುವುದರಲ್ಲಿ ಭಾಗವಹಿಸಿದರು. ಉಚ್ಚಂಗಿದುರ್ಗದ ಹಾಲಮ್ಮ ತೋಪಿನ ಬಳಿ ಇರುವ ಪುಷ್ಕರಣಿಯನ್ನು ಭಕ್ತರು ಸ್ವಚ್ಛಗೊಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ