ಅಜಿತ್ ಆರಾಡಿ
ಉಡುಪಿ:ಇಂದ್ರಾಣಿ ಶ್ರೀಪಂಚದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿನವರಾತ್ರಿ ಸಂದರ್ಭ ದೇವಿಯ ಆರಾಧನೆ ವೈಭವದಿಂದ ನಡೆಯುತ್ತದೆ.
9 ದಿನಗಳ ಪರ್ಯಂತ ಹಾಗೂ ಕುಂಭ ಶುದ್ಧ ಸಪ್ತಮಿಯಂದು ರಥೋತ್ಸವ, ವಾರ್ಷಿಕ ಮಹೋತ್ಸವ ನಡೆಯುತ್ತದೆ. ಈ ವೇಳೆ ಅನ್ನದಾನ, ಚಂಡಿಕಾ ಯಾಗವನ್ನು ಆಯೋಜಿಸಲಾಗುತ್ತದೆ.
ಕಾವೇರಿ ಸಂಕ್ರಮಣದಂದು ತಲಕಾವೇರಿಯಂತೆ ಭಕ್ತಾದಿಗಳು ಇಂದ್ರಾಣಿ ದೇವಾಲಯಕ್ಕೆ ಭೇಟಿ ನೀಡಿ ತೀರ್ಥ ಸ್ನಾನ ಮಾಡುವ ಆಚರಣೆ ತಲೆತಲಾಂತರಗಳಿಂದ ನಡೆದು ಬರುತ್ತಿದೆ.
ಹೂವಿನ ಪೂಜೆ, ದುರ್ಗಾ ನಮಸ್ಕಾರ, ಕುಂಕುಮಾರ್ಚನೆ, ಮಂಗಳಾರತಿ ವಿಶೇಷವಾಗಿ ನಡೆಯುವ ಈ ದೇಗುಲಕ್ಕೆ ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ.
ದೇವಳ ಗರ್ಭಗುಡಿಯಲ್ಲಿಶ್ರೀಲಕ್ಷ್ಮೇ , ನಾರಾಯಣೀ, ಮಹಾಮಾಯಿ, ಮಹಾಲಕ್ಷ್ಮೇ, ಮಹೇಶ್ವರಿ, ಮಹಾದೇವಿ ದೇವರ ವಿಗ್ರಹವಿದೆ. ಇಂದ್ರಾಣಿ ನದಿಯ ಉಗಮ ಸ್ಥಳದಲ್ಲಿಆಂಜನೇಯ ಗುಡಿ, ನಾಗಬನಗಳಿವೆ.
ಭಕ್ತಾದಿಗಳ ಕೌಟುಂಬಿಕ ಕಲಹ, ದಾಂಪತ್ಯ ವಿರಸವನ್ನು ತೊಲಗಿಸಿ, ಇಷ್ಟಾರ್ಥ ಈಡೇರಿಸುತ್ತಾಳೆ ಈ ಮಹಾತಾಯಿ.
ದೇಗುಲದ ಪೂಜೆ, ಪುನಸ್ಕಾರಗಳು : 1992 ರಲ್ಲಿಜೀರ್ಣೋದ್ಧಾರ ಗೊಂಡಿರುವ ಈ ಕ್ಷೇತ್ರದಲ್ಲಿಬೆಳಗ್ಗೆ 6 ಗಂಟೆಗೆ ಬಾಗಿಲು ತೆರೆಯಲಾಗುತ್ತದೆ. ಬೆಳಗ್ಗೆ 7 ಗಂಟೆಗೆ ನೈರ್ಮಾಲ್ಯ ವಿಸರ್ಜನಾ ಪೂಜೆ, 11.30 ಕ್ಕೆ ಅಲಂಕಾರ ಸಹಿತ ಮಹಾಪೂಜೆ, ಸಂಜೆ 7 ಗಂಟೆಗೆ ರಾತ್ರಿ ಪೂಜೆ. ಮಂಗಳವಾರ ಮತ್ತು ಶುಕ್ರವಾರ ವಿಶೇಷ ಪೂಜೆ ದೇವರಿಗೆ ನಡೆಯುತ್ತದೆ.
ಮಂಗಳವಾರ ಪಾರ್ವತಿ ಸ್ವಯಂವರ: ಕೌಟುಂಬಿಕ ಕಲಹ, ದಾಂಪತ್ಯದಲ್ಲಿಮುನಿಸು ಕಾಣಿಸಿಕೊಳ್ಳುವ ದಂಪತಿಗಳು ಈ ಕ್ಷೇತ್ರಕ್ಕೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿದರೆ ಸಮಸ್ಯೆ ಇತ್ಯರ್ಥಗೊಂಡಿರುವ ಸಾಕಷ್ಟು ಉದಾಹರಣೆಗಳಿವೆ. ಕಂಕಣ ಭಾಗ್ಯ ಒದಗಿ ಬಾರದೇ ಇರುವ ಹೆಣ್ಣುಮಕ್ಕಳು ದೇವಾಲಯದಲ್ಲಿಪಾರ್ವತಿ ಸ್ವಯಂವರ ಪೂಜೆ ಸಲ್ಲಿಸಿದರೆ ಮದುವೆ ಭಾಗ್ಯ ಕರುಣಿಸಿದೆ.
ಪೌರಾಣಿಕ ಹಿನ್ನೆಲೆ
ಅನಾರೋಗ್ಯದಿಂದಿದ್ದ ಚ್ಯವನ ಮಹರ್ಷಿಗಳು ತಮ್ಮ ರೋಗ ನಿವಾರಣೆಗಾಗಿ ತಪೋನಿರತರಾಗಿದ್ದಾಗ ಶ್ರೀಮನ್ನಾರಾಯಣನು ಪ್ರತ್ಯಕ್ಷನಾಗಿ ಚ್ಯವನ ಮಹರ್ಷಿಗಳನ್ನು ರೋಗಮುಕ್ತರನ್ನಾಗಿ ಅನುಗ್ರಹಿಸಿದ ಈ ಪವಿತ್ರ ಕ್ಷೇತ್ರವೇ ವೇದಾದ್ರಿ (ವೇದಾಚಲ) ಎಂಬ ಐತಿಹ್ಯವಿದೆ.
ತನ್ನ ಪತಿ ಇಂದ್ರನು ಊರ್ವಶಿಯಲ್ಲಿಅನುರಕ್ತನಾಗಿರುತ್ತಾನೆಂದು ಕುಪಿತಳಾದ ಶಚೀದೇವಿ ಎಲ್ಲೆಲ್ಲೋ ಸುತ್ತುತ್ತಿದ್ದಾಗ ನಾರದ ಮಹರ್ಷಿಯು ಆಕೆಯನ್ನು ಸಾಂತ್ವನಗೊಳಿಸಿ ಚ್ಯವನ ಮಹರ್ಷಿಗಳಿದ್ದ ಈ ಕ್ಷೇತ್ರಕ್ಕೆ ಕರೆತಂದರು. ಶ್ರೀದೇವಿಯ ವರದಿಂದ ಆಕೆ ಪತಿ ಇಂದ್ರನೊಡನೆ ಸಮಾಗಮವನ್ನು ಹೊಂದಿದಳೆಂದು ಸ್ಕಂದ ಪುರಾಣ ಹೇಳುತ್ತದೆ. ಬಳಿಕ ಈ ಕ್ಷೇತ್ರವು ಶಚಿಯ ಹೆಸರಿನಿಂದ ಇಂದ್ರಾಣಿಯಾಗಿ ಪ್ರಸಿದ್ಧಿ ಪಡೆಯಿತು.
ಕ್ಷೇತ್ರದ ಇಂದ್ರಾಣಿ ತೀರ್ಥದಲ್ಲಿತೀರ್ಥ ಸ್ನಾನ, ದೇವಿ ದರ್ಶನ ಪಡೆದಲ್ಲಿ ವಿವಾಹಾಸಕ್ತ ವಧು ಶೀಘ್ರವೇ ಯೋಗ್ಯ ವರನನ್ನು ಪಡೆದು ಸುಖೀ ದಾಂಪತ್ಯ ಜೀವನ ನಡೆಸುತ್ತಾಳೆ.
ಭಕ್ತರ ಅನುಕೂಲಕ್ಕಾಗಿ ಭೋಜನಾ ಶಾಲೆಯ ನಿರ್ಮಾಣ, ಬಹು ಪ್ರಸಿದ್ಧಿ ಪಡೆದ ಪಾರ್ವತಿ ಸ್ವಯಂವರ ಪೂಜೆಯನ್ನು ವ್ಯವಸ್ಥಿತವಾಗಿ ನಡೆಸುವ ಉದ್ದೇಶವಿದೆ.
ಜಯಕರ ಶೆಟ್ಟಿ ಇಂದ್ರಾಳಿ, ಆಡಳಿತ ಮೊಕ್ತೇಸರರು, ಇಂದ್ರಾಣಿ ಶ್ರೀಪಂಚದುರ್ಗಾ ಪರಮೇಶ್ವರಿ ದೇವಸ್ಥಾನ, ಇಂದ್ರಾಳಿ, ಉಡುಪಿ.
ಉಡುಪಿ:ಇಂದ್ರಾಣಿ ಶ್ರೀಪಂಚದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿನವರಾತ್ರಿ ಸಂದರ್ಭ ದೇವಿಯ ಆರಾಧನೆ ವೈಭವದಿಂದ ನಡೆಯುತ್ತದೆ.
9 ದಿನಗಳ ಪರ್ಯಂತ ಹಾಗೂ ಕುಂಭ ಶುದ್ಧ ಸಪ್ತಮಿಯಂದು ರಥೋತ್ಸವ, ವಾರ್ಷಿಕ ಮಹೋತ್ಸವ ನಡೆಯುತ್ತದೆ. ಈ ವೇಳೆ ಅನ್ನದಾನ, ಚಂಡಿಕಾ ಯಾಗವನ್ನು ಆಯೋಜಿಸಲಾಗುತ್ತದೆ.
ಕಾವೇರಿ ಸಂಕ್ರಮಣದಂದು ತಲಕಾವೇರಿಯಂತೆ ಭಕ್ತಾದಿಗಳು ಇಂದ್ರಾಣಿ ದೇವಾಲಯಕ್ಕೆ ಭೇಟಿ ನೀಡಿ ತೀರ್ಥ ಸ್ನಾನ ಮಾಡುವ ಆಚರಣೆ ತಲೆತಲಾಂತರಗಳಿಂದ ನಡೆದು ಬರುತ್ತಿದೆ.
ಹೂವಿನ ಪೂಜೆ, ದುರ್ಗಾ ನಮಸ್ಕಾರ, ಕುಂಕುಮಾರ್ಚನೆ, ಮಂಗಳಾರತಿ ವಿಶೇಷವಾಗಿ ನಡೆಯುವ ಈ ದೇಗುಲಕ್ಕೆ ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ.
ದೇವಳ ಗರ್ಭಗುಡಿಯಲ್ಲಿಶ್ರೀಲಕ್ಷ್ಮೇ , ನಾರಾಯಣೀ, ಮಹಾಮಾಯಿ, ಮಹಾಲಕ್ಷ್ಮೇ, ಮಹೇಶ್ವರಿ, ಮಹಾದೇವಿ ದೇವರ ವಿಗ್ರಹವಿದೆ. ಇಂದ್ರಾಣಿ ನದಿಯ ಉಗಮ ಸ್ಥಳದಲ್ಲಿಆಂಜನೇಯ ಗುಡಿ, ನಾಗಬನಗಳಿವೆ.
ಭಕ್ತಾದಿಗಳ ಕೌಟುಂಬಿಕ ಕಲಹ, ದಾಂಪತ್ಯ ವಿರಸವನ್ನು ತೊಲಗಿಸಿ, ಇಷ್ಟಾರ್ಥ ಈಡೇರಿಸುತ್ತಾಳೆ ಈ ಮಹಾತಾಯಿ.
ದೇಗುಲದ ಪೂಜೆ, ಪುನಸ್ಕಾರಗಳು : 1992 ರಲ್ಲಿಜೀರ್ಣೋದ್ಧಾರ ಗೊಂಡಿರುವ ಈ ಕ್ಷೇತ್ರದಲ್ಲಿಬೆಳಗ್ಗೆ 6 ಗಂಟೆಗೆ ಬಾಗಿಲು ತೆರೆಯಲಾಗುತ್ತದೆ. ಬೆಳಗ್ಗೆ 7 ಗಂಟೆಗೆ ನೈರ್ಮಾಲ್ಯ ವಿಸರ್ಜನಾ ಪೂಜೆ, 11.30 ಕ್ಕೆ ಅಲಂಕಾರ ಸಹಿತ ಮಹಾಪೂಜೆ, ಸಂಜೆ 7 ಗಂಟೆಗೆ ರಾತ್ರಿ ಪೂಜೆ. ಮಂಗಳವಾರ ಮತ್ತು ಶುಕ್ರವಾರ ವಿಶೇಷ ಪೂಜೆ ದೇವರಿಗೆ ನಡೆಯುತ್ತದೆ.
ಮಂಗಳವಾರ ಪಾರ್ವತಿ ಸ್ವಯಂವರ: ಕೌಟುಂಬಿಕ ಕಲಹ, ದಾಂಪತ್ಯದಲ್ಲಿಮುನಿಸು ಕಾಣಿಸಿಕೊಳ್ಳುವ ದಂಪತಿಗಳು ಈ ಕ್ಷೇತ್ರಕ್ಕೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿದರೆ ಸಮಸ್ಯೆ ಇತ್ಯರ್ಥಗೊಂಡಿರುವ ಸಾಕಷ್ಟು ಉದಾಹರಣೆಗಳಿವೆ. ಕಂಕಣ ಭಾಗ್ಯ ಒದಗಿ ಬಾರದೇ ಇರುವ ಹೆಣ್ಣುಮಕ್ಕಳು ದೇವಾಲಯದಲ್ಲಿಪಾರ್ವತಿ ಸ್ವಯಂವರ ಪೂಜೆ ಸಲ್ಲಿಸಿದರೆ ಮದುವೆ ಭಾಗ್ಯ ಕರುಣಿಸಿದೆ.
ಪೌರಾಣಿಕ ಹಿನ್ನೆಲೆ
ಅನಾರೋಗ್ಯದಿಂದಿದ್ದ ಚ್ಯವನ ಮಹರ್ಷಿಗಳು ತಮ್ಮ ರೋಗ ನಿವಾರಣೆಗಾಗಿ ತಪೋನಿರತರಾಗಿದ್ದಾಗ ಶ್ರೀಮನ್ನಾರಾಯಣನು ಪ್ರತ್ಯಕ್ಷನಾಗಿ ಚ್ಯವನ ಮಹರ್ಷಿಗಳನ್ನು ರೋಗಮುಕ್ತರನ್ನಾಗಿ ಅನುಗ್ರಹಿಸಿದ ಈ ಪವಿತ್ರ ಕ್ಷೇತ್ರವೇ ವೇದಾದ್ರಿ (ವೇದಾಚಲ) ಎಂಬ ಐತಿಹ್ಯವಿದೆ.
ತನ್ನ ಪತಿ ಇಂದ್ರನು ಊರ್ವಶಿಯಲ್ಲಿಅನುರಕ್ತನಾಗಿರುತ್ತಾನೆಂದು ಕುಪಿತಳಾದ ಶಚೀದೇವಿ ಎಲ್ಲೆಲ್ಲೋ ಸುತ್ತುತ್ತಿದ್ದಾಗ ನಾರದ ಮಹರ್ಷಿಯು ಆಕೆಯನ್ನು ಸಾಂತ್ವನಗೊಳಿಸಿ ಚ್ಯವನ ಮಹರ್ಷಿಗಳಿದ್ದ ಈ ಕ್ಷೇತ್ರಕ್ಕೆ ಕರೆತಂದರು. ಶ್ರೀದೇವಿಯ ವರದಿಂದ ಆಕೆ ಪತಿ ಇಂದ್ರನೊಡನೆ ಸಮಾಗಮವನ್ನು ಹೊಂದಿದಳೆಂದು ಸ್ಕಂದ ಪುರಾಣ ಹೇಳುತ್ತದೆ. ಬಳಿಕ ಈ ಕ್ಷೇತ್ರವು ಶಚಿಯ ಹೆಸರಿನಿಂದ ಇಂದ್ರಾಣಿಯಾಗಿ ಪ್ರಸಿದ್ಧಿ ಪಡೆಯಿತು.
ಕ್ಷೇತ್ರದ ಇಂದ್ರಾಣಿ ತೀರ್ಥದಲ್ಲಿತೀರ್ಥ ಸ್ನಾನ, ದೇವಿ ದರ್ಶನ ಪಡೆದಲ್ಲಿ ವಿವಾಹಾಸಕ್ತ ವಧು ಶೀಘ್ರವೇ ಯೋಗ್ಯ ವರನನ್ನು ಪಡೆದು ಸುಖೀ ದಾಂಪತ್ಯ ಜೀವನ ನಡೆಸುತ್ತಾಳೆ.
ಭಕ್ತರ ಅನುಕೂಲಕ್ಕಾಗಿ ಭೋಜನಾ ಶಾಲೆಯ ನಿರ್ಮಾಣ, ಬಹು ಪ್ರಸಿದ್ಧಿ ಪಡೆದ ಪಾರ್ವತಿ ಸ್ವಯಂವರ ಪೂಜೆಯನ್ನು ವ್ಯವಸ್ಥಿತವಾಗಿ ನಡೆಸುವ ಉದ್ದೇಶವಿದೆ.
ಜಯಕರ ಶೆಟ್ಟಿ ಇಂದ್ರಾಳಿ, ಆಡಳಿತ ಮೊಕ್ತೇಸರರು, ಇಂದ್ರಾಣಿ ಶ್ರೀಪಂಚದುರ್ಗಾ ಪರಮೇಶ್ವರಿ ದೇವಸ್ಥಾನ, ಇಂದ್ರಾಳಿ, ಉಡುಪಿ.