ಆ್ಯಪ್ನಗರ

ಕಡಿಯಾಳಿ ದೇವಳ ಮಹಾರಥೋತ್ಸವ ಧಾರ್ಮಿಕ ವಿಧಿಗಳಿಗೆ ಚಾಲನೆ

ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಳದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ವಾರ್ಷಿಕ ಮಹಾರಥೋತ್ಸವಕ್ಕೆ ಏಪ್ರಿಲ್‌.12ರಂದು ಚಾಲನೆ ನೀಡಲಾಯಿತು.

Vijaya Karnataka 20 Apr 2019, 5:00 am
ಉಡುಪಿ:ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಳದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ವಾರ್ಷಿಕ ಮಹಾರಥೋತ್ಸವಕ್ಕೆ ಏಪ್ರಿಲ್‌.12ರಂದು ಚಾಲನೆ ನೀಡಲಾಯಿತು.
Vijaya Karnataka Web KADIYALI


ಬೆಳಗ್ಗೆ 8 ಗಂಟೆಗೆ ರಥೋತ್ಸವ ಭಾನುವಾರ ಧ್ವಜಾರೋಹಣ ನೆರವೇರಿಸಲಾಯಿತು. ಸಂಜೆ ಬಡಗು ಸವಾರಿ, ಬಲಿ, ವಾಹನೋತ್ಸವ, ರಂಗಪೂಜೆ, ದೀಪಾರಾಧನೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು.

ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೆ. ಶ್ರೀನಿವಾಸ್‌ ಹೆಬ್ಬಾರ್‌, ಕಾರ್ಯನಿರ್ವಹಣಾಧಿಕಾರಿ ಗಣೇಶ್‌ ರಾವ್‌, ಸದಸ್ಯರಾದ ಶ್ರೀಶ ಉಪಾಧ್ಯ, ಬೋಜ ಶೇರಿಗಾರ್‌, ಆಶಾ ಶ್ರೀನಿವಾಸ್‌, ಶ್ರೀನಿವಾಸ್‌ ರಾವ್‌, ಶಿವಕುಮಾರ್‌, ಸದಾಶಿವ ದೂಮಣ್ಣ ಶೆಟ್ಟಿ, ಗಿರೀಶ್‌ ನಾಯ್ಕ್‌, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಾದ ರತ್ನಾಕರ ಶೆಟ್ಟಿ ಡಿ., ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳಾದ ನರಸಿಂಹ ಕಾಮತ್‌, ಸುಭಾಶ್ಚಂದ್ರ ಹೆಗ್ಡೆ, ತಂತ್ರಿಗಳಾದ ಗೋವರ್ಧನ ತಂತ್ರಿ, ಅರ್ಚಕ ವೃಂದ, ಸಿಬ್ಬಂದಿ ವರ್ಗ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ