ಚನ್ನಗಿರಿ:ಇಲ್ಲಿನ ಕ್ಷತ್ರಿಯ ಮರಾಠ ಸಮಾಜದಿಂದ ಅಂಬಾಭವಾನಿ ಕುಕ್ವಾಡೇಶ್ವರಿಯ ಮಹಾ ಕಾರ್ತಿಕೋತ್ಸವ ಮತ್ತು ಅಮ್ಮನ ಜಾತ್ರಾ ಮಹೋತ್ಸವ ಡಿ. 16 ರಿಂದ 20 ರವರೆಗೆ ನಡೆಸಲು ತೀರ್ಮಾನಿಸಲಾಗಿದೆ.
ಮರಾಠ ಸಮಾಜದ ಸಭೆಯಲ್ಲಿ ಅಧ್ಯಕ್ಷ ನಿಂಗೋಜಿರಾವ್ ದಿನಾಂಕವನ್ನು ಘೋಷಣೆ ಮಾಡಿದರು.
ಕಳೆದ 5 ವರ್ಷಗಳ ಹಿಂದೆ ನಡೆದಿರುವ ಈ ಜಾತ್ರಾ ಮಹೋತ್ಸವ ಈಗ ಮತ್ತೆ ನಡೆಯುತ್ತಿದೆ. ದೇವತೆಯ ಹೂವಿನ ಅಪ್ಪಣೆ ಪಡೆದು ಸಮಾಜದ ಮುಖಂಡರ ಜತೆ ಚರ್ಚಿಸಿ ತೀರ್ಮಾನಿಸಲಾಯಿತು. ನಂತರ ಜಾತ್ರಾ ಸಮಿತಿ, ಕುಸ್ತಿ ಸಮಿತಿ, ಚಪ್ಪರ ಸಮಿತಿ, ಆಹಾರ ಸಮಿತಿ, ಸಾಂಸ್ಕೃತಿಕ ಸಮಿತಿ, ಪ್ರಚಾರ ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿಯೇ ಆಯ್ಕೆ ನಡೆಯಿತು. ಜಾತ್ರಾ ಸಮಿತಿಯ ಗೌರವ ಅಧ್ಯಕ್ಷರಾಗಿ ಸತೀಶ್ ಪವಾರ್, ಅಧ್ಯಕ್ಷರಾಗಿ ಕಾಯಿ ಮಂಜೋಜಿರಾವ್ ಜಾಧವ್, ಕಾರ್ಯದರ್ಶಿ ರೂಪೇಶ್ ಕಾಳೆ, ಖಜಾಂಚಿ ಶಿವಾಜಿ ರಾವ್ ಶಿಂದೆ, ಕುಸ್ತಿ ಸಮಿತಿಯ ಅಧ್ಯಕ್ಷರಾಗಿ ಕಾಫಿ ಪುಡಿ ಶಿವಾಜಿ ರಾವ್, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾಗಿ ಶ್ರೀಕಾಂತ್ಚವ್ಹಾಣ್, ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಅಣ್ಣೋಜಿರಾವ್, ಶಿವಾಜಿ ಯುವಕ ಸಂಘದ ಅಧ್ಯಕ್ಷ ರಾಕೇಶ್ ಆಯ್ಕೆಯಾದರು.
ಸಮಿತಿಯ ಮುಖಂಡರು ಮಾತನಾಡಿ, ದೇವಿಯ ಅಪ್ಪಣೆಯಂತೆ ಚಪ್ಪರದ ಕಾರ್ಯಕ್ರಮಕ್ಕೆ ಸಹ ದಿನಾಂಕವನ್ನು ನಿಗದಿ ಮಾಡುವುದಾಗಿ ತಿಳಿಸಿದರು. ಕುಸ್ತಿ ಸಮಿತಿಯ ಅಧ್ಯಕ್ಷ ಕಾಫಿ ಪುಡಿ ಶಿವಾಜಿ ರಾವ್ ಮಾತನಾಡಿ, ಜಾತ್ರಾ ಕುಸ್ತಿ ನಮ್ಮ ಪೂರ್ವಿಕರು ಮೊದಲಿಂದಲೂ ನಡೆಸಿಕೊಂಡು ಬಂದಿದ್ದಾರೆ. ಜಾತ್ರೆಯ ಎರಡೂ ದಿನ ಕುಸ್ತಿ ಪಂದ್ಯಗಳು ನಡೆಯಲಿವೆ ಎಂದರು.
ಮರಾಠ ಸಮಾಜದ ಸಭೆಯಲ್ಲಿ ಅಧ್ಯಕ್ಷ ನಿಂಗೋಜಿರಾವ್ ದಿನಾಂಕವನ್ನು ಘೋಷಣೆ ಮಾಡಿದರು.
ಕಳೆದ 5 ವರ್ಷಗಳ ಹಿಂದೆ ನಡೆದಿರುವ ಈ ಜಾತ್ರಾ ಮಹೋತ್ಸವ ಈಗ ಮತ್ತೆ ನಡೆಯುತ್ತಿದೆ. ದೇವತೆಯ ಹೂವಿನ ಅಪ್ಪಣೆ ಪಡೆದು ಸಮಾಜದ ಮುಖಂಡರ ಜತೆ ಚರ್ಚಿಸಿ ತೀರ್ಮಾನಿಸಲಾಯಿತು. ನಂತರ ಜಾತ್ರಾ ಸಮಿತಿ, ಕುಸ್ತಿ ಸಮಿತಿ, ಚಪ್ಪರ ಸಮಿತಿ, ಆಹಾರ ಸಮಿತಿ, ಸಾಂಸ್ಕೃತಿಕ ಸಮಿತಿ, ಪ್ರಚಾರ ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿಯೇ ಆಯ್ಕೆ ನಡೆಯಿತು. ಜಾತ್ರಾ ಸಮಿತಿಯ ಗೌರವ ಅಧ್ಯಕ್ಷರಾಗಿ ಸತೀಶ್ ಪವಾರ್, ಅಧ್ಯಕ್ಷರಾಗಿ ಕಾಯಿ ಮಂಜೋಜಿರಾವ್ ಜಾಧವ್, ಕಾರ್ಯದರ್ಶಿ ರೂಪೇಶ್ ಕಾಳೆ, ಖಜಾಂಚಿ ಶಿವಾಜಿ ರಾವ್ ಶಿಂದೆ, ಕುಸ್ತಿ ಸಮಿತಿಯ ಅಧ್ಯಕ್ಷರಾಗಿ ಕಾಫಿ ಪುಡಿ ಶಿವಾಜಿ ರಾವ್, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾಗಿ ಶ್ರೀಕಾಂತ್ಚವ್ಹಾಣ್, ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಅಣ್ಣೋಜಿರಾವ್, ಶಿವಾಜಿ ಯುವಕ ಸಂಘದ ಅಧ್ಯಕ್ಷ ರಾಕೇಶ್ ಆಯ್ಕೆಯಾದರು.
ಸಮಿತಿಯ ಮುಖಂಡರು ಮಾತನಾಡಿ, ದೇವಿಯ ಅಪ್ಪಣೆಯಂತೆ ಚಪ್ಪರದ ಕಾರ್ಯಕ್ರಮಕ್ಕೆ ಸಹ ದಿನಾಂಕವನ್ನು ನಿಗದಿ ಮಾಡುವುದಾಗಿ ತಿಳಿಸಿದರು. ಕುಸ್ತಿ ಸಮಿತಿಯ ಅಧ್ಯಕ್ಷ ಕಾಫಿ ಪುಡಿ ಶಿವಾಜಿ ರಾವ್ ಮಾತನಾಡಿ, ಜಾತ್ರಾ ಕುಸ್ತಿ ನಮ್ಮ ಪೂರ್ವಿಕರು ಮೊದಲಿಂದಲೂ ನಡೆಸಿಕೊಂಡು ಬಂದಿದ್ದಾರೆ. ಜಾತ್ರೆಯ ಎರಡೂ ದಿನ ಕುಸ್ತಿ ಪಂದ್ಯಗಳು ನಡೆಯಲಿವೆ ಎಂದರು.