ಆ್ಯಪ್ನಗರ

ಸೇಡಂನಲ್ಲಿ ಧರ್ಮ ಸಭೆ, ಲಕ್ಷದೀಪೋತ್ಸವ

ಅ.7ರಂದು ಸಂಜೆ 5ಕ್ಕೆ ಧರ್ಮ ಸಭೆ ಮತ್ತು ಲಕ್ಷದೀಪೋತ್ಸವ ಜರುಗಲಿದ್ದು ಶಿವಶಂಕರ ಮಹಾಸ್ವಾಮೀಜಿ, ಸದಾಶಿವ ಸ್ವಾಮೀಜಿ, ಪಂಚಾಕ್ಷರಿ ಸ್ವಾಮೀಜಿ, ಶ್ರೀಮಂತ ತಾತಾ, ಜಗದೇವಮ್ಮ ತಾಯಿ ಸಾನ್ನಿಧ್ಯ ವಹಿಸಲಿದ್ದಾರೆ.

Vijaya Karnataka 4 Oct 2019, 12:58 pm
ಸೇಡಂ: ಐತಿಹಾಸಿಕ ಪಟ್ಟಣದ ದೊಡ್ಡಗಸಿ ಬಡಾವಣೆಯಲ್ಲಿಅ. 8ರವರೆಗೆ ಶಿವಸೇನಾ ದಸರಾ ಉತ್ಸವದ ಬೆಳ್ಳಿ ಹಬ್ಬ ಸಂಭ್ರಮ ಮತ್ತು ಲಕ್ಷದೀಪೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶಿವಸೇನಾ ದಸರಾ ಉತ್ಸವ ಸಮಿತಿಯ ಅಧ್ಯಕ್ಷ ದೇವೀಂದ್ರ ಸುಣಗಾರ ಮತ್ತು ಪ್ರಧಾನ ಕಾರ್ಯದರ್ಶಿ ಲಕ್ಷತ್ರ್ಮಣ ಭೋವಿ ತಿಳಿಸಿದ್ದಾರೆ.
Vijaya Karnataka Web bodhi logo


ಅ.5ರಂದು ಸಂಜೆ 7.30ಕ್ಕೆ ಸೇಡಂನ ಸ್ವರ ಮೆಲೋಡೀಸ್‌ ತಂಡದವರಿಂದ ಸಂಗೀತ ಸಂಜೆ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಸಿಪಿಐ ಶಂಕರಗೌಡ ಪಾಟೀಲ್‌ ಚಾಲನೆ ನೀಡಲಿದ್ದಾರೆ. ಶಿವಕುಮಾರ ಬಾಗೋಡಿ ಅಧ್ಯಕ್ಷತೆ ವಹಿಸಲಿದ್ದಾರೆ.

ಅ.6ರಂದು ಸಂಜೆ 7.30ಕ್ಕೆ ಮಕ್ಕಳಿಂದ ಸಾಂಸ್ಕೃತಿಕ ಸಂಭ್ರಮ ಮತ್ತು ಹಾಸ್ಯ ಕಾರ್ಯಕ್ರಮಕ್ಕೆ ವಾಸವದತ್ತಾ ಕಾರ್ಮಿಕ ಸಂಘದ ಅಧ್ಯಕ್ಷ ಅನಿಲ್‌ ಕುಮಾರ್‌ ಪಾಟೀಲ್‌ ತೆಲ್ಕೂರ್‌ ಚಾಲನೆ ನೀಡಲಿದ್ದಾರೆ. ಲಕ್ಷತ್ರ್ಮಣ ಭೋವಿ ಅಧ್ಯಕ್ಷತೆ ವಹಿಸಲಿದ್ದಾರೆ.

ಅ.8 ರಂದು ಮಧ್ಯಾಹ್ನ 3ಕ್ಕೆ ಮೆರವಣಿಗೆ ಮತ್ತು ಸೀಮೋಲ್ಲಂಘನ ಜರುಗಲಿದೆ. ಪಿಎಸ್‌ಐ ಸುಶೀಲ್‌ ಕುಮಾರ್‌ ಪಾಟೀಲ್‌ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಚಿತ್ರದುರ್ಗ ಕಲಾ ತಂಡದವರಿಂದ ಕೀಲು ಕುದರೆ, ಕೀಲು ಗೊಂಬೆ, ನಂದಿ ಧ್ವಜ ಪ್ರದರ್ಶನವು ಮೆರವಣಿಗೆಗೆ ಮೆರುಗು ನೀಡಲಿವೆ.

ಶಿವಸೇನಾ ದಸರಾ ಉತ್ಸವ ಸಮಿತಿಯ ವತಿಯಿಂದ ಕಳೆದ 25 ವರ್ಷಗಳಿಂದ ದಸರಾ ಉತ್ಸವವನ್ನು ಆಚರಿಸುತ್ತಾ ಬರಲಾಗಿದೆ. ಈ ಬಾರಿಯ ಉತ್ಸವವು ಬೆಳ್ಳಿ ಹಬ್ಬ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ.

ಅ.7ರಂದು ಸಂಜೆ 5ಕ್ಕೆ ಧರ್ಮ ಸಭೆ ಮತ್ತು ಲಕ್ಷದೀಪೋತ್ಸವ ಜರುಗಲಿದ್ದು, ರಾಜ್ಯ ಸಭಾ ಮಾಜಿ ಸದಸ್ಯ ಡಾ.ಬಸವರಾಜ ಪಾಟೀಲ್‌ ಸೇಡಂ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶಿವಶಂಕರ ಮಹಾಸ್ವಾಮೀಜಿ, ಸದಾಶಿವ ಸ್ವಾಮೀಜಿ, ಪಂಚಾಕ್ಷರಿ ಸ್ವಾಮೀಜಿ, ಶ್ರೀಮಂತ ತಾತಾ, ಜಗದೇವಮ್ಮ ತಾಯಿ ಸಾನ್ನಿಧ್ಯ ವಹಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ