ಆ್ಯಪ್ನಗರ

ಉಚ್ಚಿಲ ದೇವಾಲಯದಲ್ಲಿ ಶ್ರೀ ಮನ್ಮಹಾರಥೋತ್ಸವ

ಕರಾವಳಿ ಕಡಲ ಕಿನಾರೆಯ ಪ್ರಸಿದ್ಧ ದೇವಾಲಯಗಳಲ್ಲಿಒಂದಾಗಿರುವ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಸನ್ನಿಧಾನದಲ್ಲಿಫೆ.24ರಂದು ರಥೋತ್ಸವ ಸಂಭ್ರಮ.

Vijaya Karnataka 22 Feb 2020, 3:17 pm
ಮಂಗಳೂರು: ಕರಾವಳಿ ಕಡಲ ಕಿನಾರೆಯ ಪ್ರಸಿದ್ಧ ದೇವಾಲಯಗಳಲ್ಲಿಒಂದಾಗಿರುವ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಸನ್ನಿಧಾನದಲ್ಲಿಫೆ.24ರಂದು ರಥೋತ್ಸವ ಸಂಭ್ರಮ.
Vijaya Karnataka Web Uchila Rathotsava


ಫೆ.21ರಂದು ಪ್ರಾರಂಭಗೊಂಡು, ಫೆ.26ರಂದು ನಡೆಯುವ ಸಂಪ್ರೋಕ್ಷಣೆಯೊಂದಿಗೆ ಉತ್ಸವ ಮುಕ್ತಾಯವಾಗುತ್ತದೆ. ಯಥಾಪ್ರಕಾರ ದೇವಸ್ಥಾನದ ಪದ್ಧತಿಯಂತೆ ಬಲಿ ಉತ್ಸವ, ಸವಾರಿ ಉತ್ಸವದ ಜತೆ ನಿತ್ಯ ಪೂಜೆ ಮಾಡಲಾಗುತ್ತದೆ. ಧ್ವಜಾರೋಹಣದ ರಾತ್ರಿ ರಂಗಪೂಜೆ, ಪಲ್ಲಕ್ಕಿ ಸೇವೆ, ಬಲಿ ಉತ್ಸವ, ಕಟ್ಟೆಪೂಜೆಗೆ ಪುಷ್ಪ ರಥದಲ್ಲಿದೇವರ ಬಲಿ ಮೂರ್ತಿಯ ಬಡಗು ಸವಾರಿ ಇರುತ್ತದೆ.

ಫೆ.19ರಂದು ಉಗ್ರಾಣ ಮುಹೂರ್ತ, 20ರಂದು ಚಂಡಿಕಾ ಹೋಮ, ಅಂಕುರಾರ್ಪಣೆ, ಸಣ್ಣ ರಂಗಪೂಜೆ ಬಲಿ, 21ರಂದು ಮಹಾಶಿವರಾತ್ರಿ, ಧ್ವಜಾರೋಹಣ, ಸಂಜೆ ಧಾರ್ಮಿಕ ಪ್ರವಚನ, ಬಯನ ಬಲಿ, ರಾತ್ರಿ ಮಹಾರಂಗಪೂಜೆ, ಆಯನ ಬಲಿ, 22ರಂದು ಮಹಾಪೂಜೆ, ರಾತ್ರಿ ತಪ್ಪಂಗಾಯಿ ಬಲಿ, 23ರಂದು ಮಹಾಪೂಜೆ, ರುದ್ರ ಯಾಗ, ಸಂಜೆ ಆಶ್ಲೇಷ ಬಲಿ ಸೇವೆ, ಬಯನ ಬಲಿ, ಕಟ್ಟೆಪೂಜೆ, 24ರಂದು ನಿತ್ಯ ಬಲಿ, ಬೆಳಗ್ಗೆ 11.30ಕ್ಕೆ ರಥಾರೋಹಣ, 12 ಗಂಟೆಗೆ ಬ್ರಾಹ್ಮಣ ಸುವಾಸಿನಿ ಆರಾಧನೆ, ರಾತ್ರಿ 9ಕ್ಕೆ ಶ್ರೀಮನ್ಮಹಾ ರಥೋತ್ಸವ, ಉತ್ಸವ ಬಲಿ, ಶ್ರೀ ಭೂತ ಬಲಿ, ಕವಾಟ ಬಂಧನ, 25ರಂದು ಕವಾಟೋದ್ಘಾಟನೆ, ತುಲಾಭಾರ ಸೇವೆ, ಮಹಾಪೂಜೆ, ಸಂಜೆ ಚೆಂಡಾಟ, ರಾತ್ರಿ ಓಕುಳಿ, ಅವಭೃತ ಸ್ನಾನ, ಗಂಧಪೂಜೆ, ಪೂರ್ಣಾಹುತಿ, ಧ್ವಜಾವರೋಹಣ, 26ರಂದು ಶತರುದ್ರಾಭಿಷೇಕ, ಮಹಾಸಂಪ್ರೋಕ್ಷಣೆ, ಮಹಾಮಂತ್ರಾಕ್ಷತೆ, ರಾತ್ರಿ ಮಹಾ ರಂಗಪೂಜೆ, ಬಲಿ ನಡೆಯಲಿದೆ.

ಶ್ರೀ ಮನ್ಮಹಾ ರಥೋತ್ಸವ ವಿಶೇಷ: ಉತ್ಸವದ ಮೂರನೇ ದಿನ ರಥೋತ್ಸವಕ್ಕೆ ರಥ ಕಟ್ಟಲು ಪ್ರಾರಂಭಿಸಲಾಗುತ್ತದೆ. ಅಂದು ಮಧ್ಯಾಹ್ನ ಮೊಗವೀರ ಸಮಾರಾಧನೆ ನಡೆಯುತ್ತದೆ. ರಥೋತ್ಸವದ ದಿನ ಪುಣ್ಯಾರ್ಚನೆ, ರಥ ಬಲಿ, ಅಷ್ಟಾಂಗುಲ ಬಲಿ, ನವಕ, ಚಾರು ಹೋಮ, ಪಲ್ಲಪೂಜೆ, ರಥದ ಸುತ್ತ ಬಲಿ ಮತ್ತು ರಥಾರೋಹಣ ಮಾಡುತ್ತಾರೆ. ತದನಂತರ ರಥವನ್ನು ಸ್ವಲ್ಪ ಎಳೆಯುತ್ತಾರೆ. ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯುತ್ತದೆ. ರಾತ್ರಿ 11 ಗಂಟೆಗೆ ದೇವಸ್ಥಾನದ ರಥಬೀದಿಯಲ್ಲಿರಥವನ್ನು ದೇವಾಲಯಕ್ಕೆ ಒಂದು ಪ್ರದಕ್ಷಿಣೆ ಹಾಕಿ, ಸುಡುಮದ್ದುಗಳನ್ನು ಸಿಡಿಸಿ ರಥೋತ್ಸವ ಮಾಡಲಾಗುತ್ತದೆ. ನಂತರ ಬಲಿ ಮೂರ್ತಿಯನ್ನು ನರ್ತನದ ಮೂಲಕ ದೇವಸ್ಥಾನಕ್ಕೆ ಮರಳಿ ತಂದು ಬಲಿ ಸೇವೆ ಮಾಡಲಾಗುತ್ತದೆ.

ದೇಗುಲದ ವೈಶಿಷ್ಟ್ಯ: ಬಹು ಸಂಸ್ಕೃತಿಗಳ ಸಮ್ಮಿಲನದ ಪ್ರತೀಕವಾಗಿ ಸಾಂಸ್ಕೃತಿಕ ಸಮಾಗಮದ ದ್ಯೋತಕವಾಗಿ ಈ ದೇವಸ್ಥಾನ ನೆಲೆ ನಿಂತಿದ್ದು, ಶ್ರೀ ಮಹಾಲಿಂಗೇಶ್ವರ ಹಾಗೂ ಮಹಾಗಣಪತಿ ಸನ್ನಿಧಾನ ಜತೆಯಾಗಿರುವುದರಿಂದ ಈ ದೇವಾಲಯವು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ