ಆ್ಯಪ್ನಗರ

ಜ. 30ರಿಂದ ಶ್ರೀತೇರುಮಲ್ಲೇಶ್ವರ ಜಾತ್ರೆ

ಶ್ರೀ ತೇರುಮಲ್ಲೇಶ್ವರಸ್ವಾಮಿ ಜಾತ್ರೆಯನ್ನು ಪ್ರತಿ ವರ್ಷದಂತೆ ಸಂಭ್ರಮದಿಂದ ನೆರವೇರಿಸಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ತಹಸೀಲ್ದಾರ್‌ ಜಿ.ಎಚ್‌.ಸತ್ಯನಾರಾಯಣ್‌ ಹೇಳಿದರು.

Vijaya Karnataka 4 Jan 2020, 4:14 pm
ಹಿರಿಯೂರು: ಸುಪ್ರಸಿದ್ಧ ದಕ್ಷಿಣಕಾಶಿ ಶ್ರೀ ತೇರುಮಲ್ಲೇಶ್ವರಸ್ವಾಮಿ ಜಾತ್ರೆಯನ್ನು ಪ್ರತಿ ವರ್ಷದಂತೆ ಸಂಭ್ರಮದಿಂದ ನೆರವೇರಿಸಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ತಹಸೀಲ್ದಾರ್‌ ಜಿ.ಎಚ್‌.ಸತ್ಯನಾರಾಯಣ್‌ ಹೇಳಿದರು.
Vijaya Karnataka Web bodhi logo


ಜಾತ್ರೆಯ ಸಿದ್ಧತೆಗಾಗಿ ಶ್ರೀ ತೇರುಮಲ್ಲೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿಅವರು ಮಾತನಾಡಿದರು.

ವೇದಬ್ರಹ್ಮ ಪ್ರಸನ್ನಕುಮಾರ್‌ ಜೋಯಿಸ್‌ ಮಾತನಾಡಿ, ಜ.30ರಂದು ಕಂಕಣ ಕಲ್ಯಾಣೋತ್ಸವದೊಂದಿಗೆ ಪೂಜಾ ಕಾರ್ಯಕ್ರಮ ಪ್ರಾರಂಭವಾಗಲಿದೆ. ಫೆ.9ರಂದು ದೊಡ್ಡ ಉತ್ಸವ ನಡೆಯಲಿದೆ. ಫೆ.10ರಂದು ಮಾಘ ನಕ್ಷತ್ರದಲ್ಲಿಸ್ವಾಮಿ ರಥೋತ್ಸವ ಹಾಗೂ ಸಂಜೆ ಉಮಾಮಹೇಶ್ವರ ಹಾಗೂ ಚಂದ್ರಮೌಳೇಶ್ವರಸ್ವಾಮಿ ರಥ ನಡೆಯಲಿದೆ. ಫೆ.12ರಂದು ಸಂಜೆ ಕರ್ಪೂರದಾರತಿ ಕಾರ್ಯಕ್ರಮವಿದೆ ಎಂದರು.

ಕಾಳಿಕಾಂಬ ದೇವಾಲಯ ಅರ್ಚಕ ನಾಗರಾಜ್‌ ಮಾತನಾಡಿ, ತೇರಿನ ಮೇಲೆ ದೇವಸ್ಥಾನದ ಅರ್ಚಕರು ಬಿಟ್ಟು ಬೇರೆಯವರಿಗೆ ಅವಕಾಶ ನೀಡಬಾರದು ಎಂದರು.

ಎಚ್‌.ಸಿ.ದಿವುಶಂಕರ್‌ ಮಾತನಾಡಿ, ಮುಜರಾಯಿ ಇಲಾಖೆಯ ವತಿಯಿಂದಲೇ ಜಾತ್ರೆ ಕಾರ್ಯಕ್ರಮ ನಡೆಸುವುದು ಸೂಕ್ತ ಎಂದು ಸಲಹೆ ನೀಡಿದರು.

ಜಾತ್ರೆ ಸಮಯದಲ್ಲಿಹೂವಿನ ಹಾರ ಹರಾಜು ಮಾಡಬೇಕು. ಇದರಿಂದ ಜಾತ್ರೆ ವೆಚ್ಚಕ್ಕೂ ಸಹಾಯವಾಗಲಿದೆ ಎಂದು ಗ್ರಾಮಸ್ಥ ರಾಮಣ್ಣ ಸಲಹೆ ನೀಡಿದರು.

ಬ್ರಹ್ಮರಥೋತ್ಸವ ಸಮಯದಲ್ಲಿತೇರಿನ ಮೇಲೆ ಭಕ್ತಾದಿಗಳು ಬಾಳೆಹಣ್ಣು ಹಾಗೂ ಸಿಪ್ಪೆ ಎಸೆದು ತೊಂದರೆ ಕೊಡುತ್ತಾರೆ ಇದನ್ನು ತಪ್ಪಿಸಬೇಕು ಎಂದು ಗ್ರಾಮಸ್ಥ ನಾಗರಾಜ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ