ಆ್ಯಪ್ನಗರ

ಹರಕೆಯ ರಥಕ್ಕೆ ಶೃಂಗೇರಿ ಕಿರಿಯ ಶ್ರೀಗಳಿಂದ ಚಾಲನೆ

ಬನವಾಸಿಯ ಶ್ರೀ ಮಧುಕೇಶ್ವರ ದೇವರ ನೂತನ ಹರಕೆಯ ರಥಕ್ಕೆ ಶೃಂಗೇರಿ ಮಹಾಸಂಸ್ಥಾನದ ಕಿರಿಯ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಗಳು ಸೋಮವಾರ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

Vijaya Karnataka 3 May 2019, 12:44 pm
ಬನವಾಸಿ: ಬನವಾಸಿಯ ಶ್ರೀ ಮಧುಕೇಶ್ವರ ದೇವರ ನೂತನ ಹರಕೆಯ ರಥಕ್ಕೆ ಶೃಂಗೇರಿ ಮಹಾಸಂಸ್ಥಾನದ ಕಿರಿಯ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಗಳು ಸೋಮವಾರ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
Vijaya Karnataka Web Harakeya Ratha


ಈ ನೂತನ ಹರಕೆ ರಥವನ್ನು ದೇವಸ್ಥಾನದ ಪ್ರಾಕಾರದಲ್ಲಿ ಭಕ್ತರು ಹರಕೆ ಮಾಡಿಕೊಂಡಾಗ ಮಾತ್ರ ವಿಶೇಷ ಪೂಜೆ ಸಲ್ಲಿಸಿ ಎಳೆಯಲಾಗುತ್ತದೆ.

ಈ ಸಂದರ್ಭದಲ್ಲಿ ಶ್ರೀಗಳು ಶ್ರೀ ಮಧುಕೇಶ್ವರ ದೇವರು, ಶ್ರೀ ಪಾರ್ವತಿ ಅಮ್ಮ, ಶ್ರೀ ನರಸಿಂಹ ದೇವರ ಪೂಜೆ ನೆರವೇರಿಸಿದರು. ನಂತರ ನೂರಾರು ಭಕ್ತರಿಗೆ ಮಂತ್ರಾಕ್ಷ ತೆ ನೀಡಿ ಆಶೀರ್ವದಿಸಿದರು.

ಅನೇಕ ಭಕ್ತರು ಪಾದ ಪೂಜೆ ನೆರವೇರಿಸಿದರು.

ಆಸ್ತಿಕತೆಯಿಂದ ಸಂತೃಪ್ತಿ: ಆಸ್ತಿಕರಾಗಿ ಧಾರ್ಮಿಕತೆಯ ಭಾವನೆಯಿಂದ ಕೂಡಿದ ಜನರೇ ಸಂತೃಪ್ತರಾಗಿ ಇರುತ್ತಾರೆ. ಆಸ್ತಿಕತೆಯಿಂದ ಭಗವಂತನ ದರ್ಶನ ಮತ್ತು ಮೋಕ್ಷ ಪ್ರಾಪ್ತಿ ಸಾಧ್ಯವಾಗುತ್ತದೆ ಎಂದು ಶೃಂಗೇರಿ ಸಂಸ್ಥಾನದ ಕಿರಿಯ ಜಗದ್ಗುರುಗಳಾದ ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ನುಡಿದರು.

ಬನವಾಸಿ ಶ್ರೀ ಮಧುಕೇಶ್ವರ ದೇವಸ್ಥಾನದ ಎದುರು ನಡೆದ ಭಕ್ತರ ಸಭೆಯಲ್ಲಿ ಆಶೀರ್ವಚನ ನೀಡಿದರು.

ಮನುಷ್ಯರಾಗಿ ನಾವು ಬಂದ ಮೇಲೆ ಈ ಶರೀರವನ್ನು ಒಳ್ಳೆಯ ಕಾರ್ಯಕ್ಕೆ ಸದ್ವಿನಿಯೋಗ ಆಗುವಂತೆ ನೋಡಿಕೊಳ್ಳಬೇಕು. ಪರಿಶುದ್ಧ ಆಸ್ತಿಕತೆಯಿಂದ ಕಾರ್ಯ ಮಾಡಬೇಕು ಎಂದು ಶ್ರೀಗಳು ನುಡಿದರು.

ವ್ಯರ್ಥ ಆಗುವುದಿಲ್ಲ :ಶಾಸ್ತ್ರಗಳು ಯಾವತ್ತೂ ವ್ಯರ್ಥ ಆಗುವುದಿಲ್ಲ. ಶಾಸ್ತ್ರಬದ್ಧವಾಗಿ ಸಂಪ್ರದಾಯಬದ್ಧವಾಗಿ ನಾವು ಇದ್ದಾಗ ಮಾತ್ರ ಗೆಲುವು ಕಾಣಬಹುದು. ಆಗ ಮಾತ್ರ ನಮ್ಮಲ್ಲಿ ಸಂಪದ್ಭರಿತ ಭಾವನೆ ಮೂಡುತ್ತದೆ. ಪಾಪ ಮಾಡಿ ಅದನ್ನು ಕಳೆದುಕೊಳ್ಳಲು ಪುಣ್ಯ ಕ್ಷೇತ್ರಗಳಿಗೆ ಹೋಗುವ ಜನರು, ಅಲ್ಲಿ ಹೋದಾಗ ಮತ್ತೆ ಪಾಪ ಮಾಡಿದರೆ ಪರಿಹಾರವೇ ಇರುವುದಿಲ್ಲ. ಅದರಿಂದ ನಾನಾ ಕಷ್ಟಗಳು ಬರುವುದು ಹೆಚ್ಚಾಗುತ್ತವೆ ಎಂದರು.

ಭವ್ಯ ಸ್ವಾಗತ : ಇದೇ ಪ್ರಥಮ ಬಾರಿಗೆ ಬನವಾಸಿಗೆ ಆಗಮಿಸಿದ ಶ್ರೀಗಳಿಗೆ ಪಂಪ ವೃತ್ತದಲ್ಲಿ ಭವ್ಯ ಸ್ವಾಗತ ನೀಡಿ ಶ್ರೀ ಮಧುಕೇಶ್ವರ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ