ಧರ್ಮದ ಪರ ಕೃಷ್ಣನ ಒಲವು
ಮಹಾಭಾರತ ಯುದ್ಧದ ಆರಂಭದಲ್ಲಿ ಶ್ರೀಕೃಷ್ಣ ಕೌರವರು, ಪಾಂಡವರಲ್ಲಿಯಾವುದೇ ಭೇದ ಎಣಿಸುತ್ತಿರಲಿಲ್ಲ ಎಲ್ಲರೂ ಒಂದೆಂದು ಆತ ಕಂಡಿದ್ದ.....
Vijaya Karnataka 14 Dec 2019, 12:00 am
ಮಹಾಭಾರತ ಯುದ್ಧದ ಆರಂಭದಲ್ಲಿ ಶ್ರೀಕೃಷ್ಣ ಕೌರವರು, ಪಾಂಡವರಲ್ಲಿ ಯಾವುದೇ ಭೇದ ಎಣಿಸುತ್ತಿರಲಿಲ್ಲ. ಎಲ್ಲರೂ ಒಂದೆಂದು ಆತ ಕಂಡಿದ್ದ. ಹಾಗಾಗಿ ಕೃಷ್ಣನನ್ನು ಕಂಡರೆ ಕೌರವರಿಗೆ, ಪಾಂಡವರಿಗೆ ಬಹಳ ಪ್ರೀತಿ. ಹೇಗಾದರೂ ಮಾಡಿ ಆತನನ್ನು ತಮ್ಮ ಕಡೆ ಕರೆದುಕೊಳ್ಳಬೇಕೆಂದು ಬಯಸುತ್ತಾರೆ. ಒಂದು ದಿನ ಶ್ರೀಕೃಷ್ಣ ಪಲ್ಲಂಗದ ಮೇಲೆ ಮಲಗಿ ಹಾಯಾಗಿ ನಿದ್ದೆ ಮಾಡುತ್ತಿದ್ದ. ಇದೇ ಸಮಯದಲ್ಲಿ ದುರ್ಯೋಧನ ಕೃಷ್ಣನ ಸಹಾಯವನ್ನು ಯಾಚಿಸಲು ಬಂದ. ಶ್ರೀಕೃಷ್ಣ ಎಚ್ಚರಗೊಳ್ಳುವವರೆಗೂ ಅವನ ತಲೆಯ ಬಳಿ ಕುಳಿತು ಕಾಯತೊಡಗಿದ. ಅಷ್ಟರಲ್ಲಿಧರ್ಮರಾಯನೂ ಕೃಷ್ಣನ ಸಹಾಯವನ್ನು ಕೇಳಲು ಅಲ್ಲಿಗೆ ಬಂದ. ಅವನು ಕೃಷ್ಣನ ಕಾಲಬುಡದಲ್ಲಿ ಕುಳಿತು ಕೃಷ್ಣ ಎಚ್ಚರವಾಗುವುದನ್ನೇ ನಿರೀಕ್ಷಿಸತೊಡಗಿದ.
ಸ್ವಲ್ಪ ಸಮಯದ ನಂತರ ಕೃಷ್ಣ ನಿದ್ದೆಯಿಂದ ಎಚ್ಚೆತ್ತು, ಮೊದಲು ಕಾಲಿನ ಕೆಳಗೆ ಕುಳಿತ ಧರ್ಮರಾಯನನ್ನು ನೋಡಿದ. ಅನಂತರ ತಲೆದಿಂಬಿನ ಬಳಿ ಕುಳಿತಿದ್ದ ದುರ್ಯೋಧನನ್ನು ನೋಡಿದ. ಇಬ್ಬರ ಕುಶಲ ಸಮಾಚಾರವನ್ನು ವಿಚಾರಿಸಿ ನಂತರ ಬಂದ ಕಾರಣವನ್ನು ಕೇಳಿದ. ನಾನು ಮೊದಲು ಬಂದಿದ್ದೇನೆ. ಆದ್ದರಿಂದ ನಾನು ಹೇಳುವುದನ್ನು ಮೊದಲು ಕೇಳು ಎಂದು ದುರ್ಯೋಧನ ವಿನಂತಿಸಿದ. ಅದಕ್ಕೆ ಕೃಷ್ಣನು 'ಆದರೆ ನಾನು ನಿದ್ದೆಯಿಂದ ಎಚ್ಚೆತ್ತ ಕೂಡಲೇ ಧರ್ಮರಾಯನನ್ನು ಮೊದಲು ನೋಡಿದೆ. ಆದ್ದರಿಂದ ಅವನ ಬೇಡಿಕೆಯನ್ನು ಮೊದಲು ಕೇಳುವುದು ಧರ್ಮ' ಎಂದು ಹೇಳಿದ. ಇಬ್ಬರೂ ಬಂದ ಕಾರಣವನ್ನು ವಿವರಿಸಿದರು. ಮಹಾಭಾರತ ಯುದ್ಧದ ಸಮಯದಲ್ಲಿತಮಗೆ ಸಹಾಯ ಮಾಡುವುದು ನನ್ನ ಕರ್ತವ್ಯ. ಇಬ್ಬರಿಗೂ ಬೇಸರವಾಗದಂತೆ ನನ್ನ ಇಡೀ ಶಕ್ತಿಯನ್ನು ಎರಡು ಭಾಗವಾಗಿ ವಿಂಗಡಿಸುತ್ತೇನೆ. ನಿಮಗ ಸರಿ ಕಂಡದ್ದನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ತಿಳಿಸಿದ.
ನನ್ನ ಹದಿನೆಂಟು ಅಕ್ಷೋಹಿಣಿ ಯಾದವ ಸೈನ್ಯ ಒಂದು ಕಡೆ ಇರುತ್ತದೆ. ಇನ್ನೊಂದು ಕಡೆ ನಾನು ಒಬ್ಬನೇ ಇರುತ್ತೇನೆ. ಆದರೆ ನಾನು ಅಸ್ತ್ರ-ಶಸ್ತ್ರ ಹಿಡಿದು ಯುದ್ಧ ಮಾಡುವುದಿಲ್ಲ ಎಂದು ತಿಳಿಸಿದನು.
ದುರ್ಯೋಧನ ಒಂದು ಕ್ಷಣ ಯೋಚಿಸಿದ. ಹದಿನೆಂಟು ಅಕ್ಷೋಹಿಣಿ ಬೃಹತ್ ಸೈನ್ಯ ಆಯ್ಕೆ ಮಾಡಿಕೊಳ್ಳುವುದು ಬುದ್ಧಿವಂತಿಕೆ. ಅಸ್ತ್ರ, ಶಸ್ತ್ರ ಹಿಡಿಯದೆ ಯುದ್ಧ ಮಾಡದೆ ಇರುವ ಕೃಷ್ಣನಿಂದ ಏನೊಂದು ಪ್ರಯೋಜನವಾಗುವುದಿಲ್ಲ. 'ಮಧುಸೂದನ ನಿನ್ನ ಹದಿನೆಂಟು ಅಕ್ಷೋಹಿಣಿ ಸೈನ್ಯ ನನಗಿರಲಿ, ಆ ಸೈನ್ಯದ ಬಲದಿಂದ ಯುದ್ಧದಲ್ಲಿನಾನು ಜಯಶೀಲನಾಗುವುದು ಖಚಿತ ಎಂದ'. ದುರ್ಯೋಧನನ ಮಾತಿಗೆ ಶ್ರೀಕೃಷ್ಣ ಒಪ್ಪುತ್ತಾನೆ.
ಈಗ ಎರಡನೇ ಆಯ್ಕೆ ಧರ್ಮರಾಯನದು. ಇದರಿಂದ ಅವನು ಸಂತೋಷಗೊಂಡು ಮೂರು ಲೋಕದ ಅಧಿಪತಿಯಾದ ಶ್ರೀಕೃಷ್ಣ ನಮ್ಮ ಜತೆಗಿದ್ದರೆ ಸಾಕು. ನಿಶ್ಚಿತವಾಗಿ ಜಯ ನಮ್ಮದೇ ಆಗುತ್ತದೆ ಎಂದು ಭಾವಿಸುತ್ತಾನೆ. ಶ್ರೀಕೃಷ್ಣನ ಬೆಂಬಲವನ್ನು ಬೇಡಿ ತಾನೇ ಧನ್ಯ ಎಂದುಕೊಳ್ಳುತ್ತಾನೆ.
ಧರ್ಮರಾಯ ಬಯಸಿದಂತೆ ಧರ್ಮಕ್ಕೇ ಗೆಲುವಾಗುತ್ತದೆ. ಕೌರವರನ್ನು ಸೋಲಿಸುವ ಪಾಂಡವರು ಜಯಶೀಲರಾಗುತ್ತಾರೆ.
ಸ್ವಲ್ಪ ಸಮಯದ ನಂತರ ಕೃಷ್ಣ ನಿದ್ದೆಯಿಂದ ಎಚ್ಚೆತ್ತು, ಮೊದಲು ಕಾಲಿನ ಕೆಳಗೆ ಕುಳಿತ ಧರ್ಮರಾಯನನ್ನು ನೋಡಿದ. ಅನಂತರ ತಲೆದಿಂಬಿನ ಬಳಿ ಕುಳಿತಿದ್ದ ದುರ್ಯೋಧನನ್ನು ನೋಡಿದ. ಇಬ್ಬರ ಕುಶಲ ಸಮಾಚಾರವನ್ನು ವಿಚಾರಿಸಿ ನಂತರ ಬಂದ ಕಾರಣವನ್ನು ಕೇಳಿದ. ನಾನು ಮೊದಲು ಬಂದಿದ್ದೇನೆ. ಆದ್ದರಿಂದ ನಾನು ಹೇಳುವುದನ್ನು ಮೊದಲು ಕೇಳು ಎಂದು ದುರ್ಯೋಧನ ವಿನಂತಿಸಿದ. ಅದಕ್ಕೆ ಕೃಷ್ಣನು 'ಆದರೆ ನಾನು ನಿದ್ದೆಯಿಂದ ಎಚ್ಚೆತ್ತ ಕೂಡಲೇ ಧರ್ಮರಾಯನನ್ನು ಮೊದಲು ನೋಡಿದೆ. ಆದ್ದರಿಂದ ಅವನ ಬೇಡಿಕೆಯನ್ನು ಮೊದಲು ಕೇಳುವುದು ಧರ್ಮ' ಎಂದು ಹೇಳಿದ. ಇಬ್ಬರೂ ಬಂದ ಕಾರಣವನ್ನು ವಿವರಿಸಿದರು. ಮಹಾಭಾರತ ಯುದ್ಧದ ಸಮಯದಲ್ಲಿತಮಗೆ ಸಹಾಯ ಮಾಡುವುದು ನನ್ನ ಕರ್ತವ್ಯ. ಇಬ್ಬರಿಗೂ ಬೇಸರವಾಗದಂತೆ ನನ್ನ ಇಡೀ ಶಕ್ತಿಯನ್ನು ಎರಡು ಭಾಗವಾಗಿ ವಿಂಗಡಿಸುತ್ತೇನೆ. ನಿಮಗ ಸರಿ ಕಂಡದ್ದನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ತಿಳಿಸಿದ.
ನನ್ನ ಹದಿನೆಂಟು ಅಕ್ಷೋಹಿಣಿ ಯಾದವ ಸೈನ್ಯ ಒಂದು ಕಡೆ ಇರುತ್ತದೆ. ಇನ್ನೊಂದು ಕಡೆ ನಾನು ಒಬ್ಬನೇ ಇರುತ್ತೇನೆ. ಆದರೆ ನಾನು ಅಸ್ತ್ರ-ಶಸ್ತ್ರ ಹಿಡಿದು ಯುದ್ಧ ಮಾಡುವುದಿಲ್ಲ ಎಂದು ತಿಳಿಸಿದನು.
ದುರ್ಯೋಧನ ಒಂದು ಕ್ಷಣ ಯೋಚಿಸಿದ. ಹದಿನೆಂಟು ಅಕ್ಷೋಹಿಣಿ ಬೃಹತ್ ಸೈನ್ಯ ಆಯ್ಕೆ ಮಾಡಿಕೊಳ್ಳುವುದು ಬುದ್ಧಿವಂತಿಕೆ. ಅಸ್ತ್ರ, ಶಸ್ತ್ರ ಹಿಡಿಯದೆ ಯುದ್ಧ ಮಾಡದೆ ಇರುವ ಕೃಷ್ಣನಿಂದ ಏನೊಂದು ಪ್ರಯೋಜನವಾಗುವುದಿಲ್ಲ. 'ಮಧುಸೂದನ ನಿನ್ನ ಹದಿನೆಂಟು ಅಕ್ಷೋಹಿಣಿ ಸೈನ್ಯ ನನಗಿರಲಿ, ಆ ಸೈನ್ಯದ ಬಲದಿಂದ ಯುದ್ಧದಲ್ಲಿನಾನು ಜಯಶೀಲನಾಗುವುದು ಖಚಿತ ಎಂದ'. ದುರ್ಯೋಧನನ ಮಾತಿಗೆ ಶ್ರೀಕೃಷ್ಣ ಒಪ್ಪುತ್ತಾನೆ.
ಈಗ ಎರಡನೇ ಆಯ್ಕೆ ಧರ್ಮರಾಯನದು. ಇದರಿಂದ ಅವನು ಸಂತೋಷಗೊಂಡು ಮೂರು ಲೋಕದ ಅಧಿಪತಿಯಾದ ಶ್ರೀಕೃಷ್ಣ ನಮ್ಮ ಜತೆಗಿದ್ದರೆ ಸಾಕು. ನಿಶ್ಚಿತವಾಗಿ ಜಯ ನಮ್ಮದೇ ಆಗುತ್ತದೆ ಎಂದು ಭಾವಿಸುತ್ತಾನೆ. ಶ್ರೀಕೃಷ್ಣನ ಬೆಂಬಲವನ್ನು ಬೇಡಿ ತಾನೇ ಧನ್ಯ ಎಂದುಕೊಳ್ಳುತ್ತಾನೆ.
ಧರ್ಮರಾಯ ಬಯಸಿದಂತೆ ಧರ್ಮಕ್ಕೇ ಗೆಲುವಾಗುತ್ತದೆ. ಕೌರವರನ್ನು ಸೋಲಿಸುವ ಪಾಂಡವರು ಜಯಶೀಲರಾಗುತ್ತಾರೆ.