- ಎಸ್.ಗಂಗಾವತಿ
ರಾಮಾಯಣದಲ್ಲಿ ಶ್ರೀರಾಮನು ವನವಾಸದಲ್ಲಿರುವಾಗ ನಡೆದ ಕಥೆಯಿದು. ರಾಮಲಕ್ಷ್ಮಣರು ಇಬ್ಬರೂ ವನವಾಸದಲ್ಲಿದ್ದಾಗ ಒಂದು ಸಾರಿ ಕಿಷ್ಕಿಂಧೆಗೆ ಭೇಟಿ ನೀಡುತ್ತಾರೆ.
ಕಿಷ್ಕಿಂಧೆ ಎಂದರೆ ಚಿಕ್ಕದಾದ ದ್ವೀಪ. ಆ ಸಣ್ಣ ರಾಜ್ಯವನ್ನು ವಾಲಿ ಎಂಬುವವನು ಆಳುತ್ತಿದ್ದ. ಅವನು ವಾನರ. ಅವನ ಬಳಿ ವಾನರರ ಬಲಿಷ್ಠವಾದ ಸೈನ್ಯ ಇತ್ತು. ವಾಲಿಯ ತಮ್ಮ ಸುಗ್ರೀವ. ಅವನ ಹೆಂಡತಿ ತಾರಾ. ಅವಳು ತುಂಬಾನೇ ಸುಂದರಿಯಾಗಿದ್ದಳು. ವಾಲಿ ಸುಗ್ರೀವನಿಗೆ ಮೋಸ ಮಾಡಿ ರಾಜ್ಯನ್ನು ಅವನೇ ಆಳುತ್ತಿದ್ದನು. ಜೊತೆಗೆ ತಾರಾಳನ್ನು ಸಹ ಮೋಸದಿಂದ ಮದುವೆಯಾಗಿದ್ದನು. ರಾಜ್ಯದಲ್ಲಿ ಪಾಲು ಕೊಟ್ಟಿರಲಿಲ್ಲ.
ಹೀಗೆ ರಾಮ ಲಕ್ಷ್ಮಣರು ಇವರ ರಾಜ್ಯಕ್ಕೆ ಬಂದಾಗ ಸುಗ್ರೀವನು ತನ್ನ ಅಳಲನ್ನು ಹೇಳಿಕೊಂಡನು. ರಾಮ ಅವನಿಗೆ ಸಹಾಯ ಮಾಡುವುದಾಗಿ ವಚನವಿತ್ತನು.
ವಾಲಿಗೂ ಬುದ್ಧಿ ಹೇಳಿದರು. ಆದರೆ ಎಲ್ಲವೂ ವ್ಯರ್ಥವಾಯಿತು.
ಶ್ರೀರಾಮ ಸುಗ್ರೀವನಿಗೆ ವಾಲಿಯ ಮೇಲೆ ಯುದ್ಧ ಮಾಡಲು ಪ್ರೇರೇಪಿಸಿದನು. ವಾಲಿ, ಸುಗ್ರೀವರು ಯುದ್ಧ ಮಾಡುತ್ತಿರುತ್ತಾರೆ. ಆಗ ಶ್ರೀರಾಮನು ಒಂದು ಮರದ ಮರೆಯಲ್ಲಿ ನಿಂತು ತನ್ನ ಬತ್ತಳಿಕೆಯಿಂದ ಬಾಣವನ್ನು ತೆಗೆದು ಸುಗ್ರೀವ ಜೊತೆ ಸಮರದಲ್ಲಿದ್ದ ವಾಲಿಯ ಕಡೆಗೆ ಬಿಟ್ಟಾಗ ವಾಲಿಯು ಮೃತನಾದನು. ನಂತರ ಸುಗ್ರೀವನಿಗೆ ರಾಜ್ಯಾಭಿಷೇಕ ಮಾಡಿಸಿ ಅವನಿಗೆ ಆಶೀರ್ವಾದ ಮಾಡಿದರು.
ಮುಂದೆ ಸೀತೆಯನ್ನು ಹುಡುಕಲು ಹನುಮಂತನು ಸಹಾಯ ಮಾಡಿದನು. ಮುಂದೆ ಸೀತೆಯನ್ನು ಹುಡುಕಲು ಹನುಮಂತನು ಸಹಾಯ ಮಾಡುತ್ತಾನೆ. ರಾವಣನ ಜೊತೆ ಯುದ್ಧ ಮಾಡುವಾಗ ಶ್ರೀರಾಮನಿಗೆ ವಾನರ ಸೈನ್ಯ ಸಹಾಯ ಮಾಡುತ್ತದೆ.
ರಾಮನ ಒಡನಾಡಿ ಲಕ್ಷ್ಮಣನಿಗೆ ವಾಲಿಯನ್ನು ಸಾಯಿಸಿದುದರ ಬಗ್ಗೆ ಸಂಶಯವಿತ್ತು. ಅಣ್ಣನನ್ನು ಹೇಗೆ ಕೇಳುವುದು ಎಂದು ಯೋಚಿಸುತ್ತಿದ್ದನು. ಅದು ರಾಮನ ಗಮನಕ್ಕೆ ಬರುತ್ತದೆ. ಆಗ ರಾಮ, 'ತಮ್ಮಾ ಯಾಕೋ ನೀನು ಈ ನಡುವೆ ಒಂಥರಾ ಇದ್ದೀಯಾ' ಎನ್ನುತ್ತಾನೆ.
ಅದಕ್ಕೆ ಲಕ್ಷ್ಮಣನು. 'ಅಣ್ಣಾ ನನಗೊಂದು ಸಂದೇಹ. ಅದನ್ನು ನೀನೇ ಪರಿಹಾರ ಮಾಡಬೇಕು. ನೀನು ಯುದ್ಧ ನಿಯಮಗಳನ್ನು ಬಲ್ಲವನು. ಆದರೂ ನೀನು ಮರದ ಮರೆಯಲ್ಲಿ ನಿಂತು ಬಾಣ ಬಿಟ್ಟು ವಾಲಿಯನ್ನು ಸಂಹಾರ ಮಾಡಿದೆಯಲ್ವಾ? ಯಾಕೆ?' ಎನ್ನುತ್ತಾನೆ.
ರಾಮನು, 'ಲಕ್ಷ್ಮಣಾ ಇದೇ ನಿನ್ನ ಸಂದೇಹವಾ. ಅದರ ಹಿಂದೆ ಒಂದು ಕಥೆ ಇದೆ. ಹೇಳ್ತೀನಿ. ವಾಲಿ ಯಾರ ಜೊತೆಯಲ್ಲಿ ಯುದ್ಧ ಮಾಡುವನೋ ಅವನ ಎದುರಾಳಿಯ ಅರ್ಧ ಶಕ್ತಿ ತನಗೆ ದಕ್ಕುಂವತೆ ವರ ದೇವರಿಂದ ವರ ಪಡೆದಿದ್ದ. ಅದಕ್ಕೆ ಅವನನ್ನು ಸೋಲಿಸಲು ಯಾರಿಂದಲೂ ಸಾಧ್ಯವಾಗಿರಲಿಲ್ಲ. ನಿನಗೇ ತಿಳಿದಂತೆ ಯುದ್ಧದಲ್ಲಿ ಯಾವ ಪ್ರಯೋಗವನ್ನೂ ಸಹ ಮಾಡಬಹುದು. ಅದರಲ್ಲೂ ದುಷ್ಟರನ್ನು ಶಿಕ್ಷಿಸಲು ಈ ರೀತಿ ಮಾಡಬೇಕು. ಇದರಲ್ಲಿ ಏನೂ ತಪ್ಪಿಲ್ಲ ಎಂದು ಹೇಳಿದನು. ಆಗ ಲಕ್ಷ್ಮಣನ ಸಂಶಯ ತಿಳಿಯಾಗಿ ಅಣ್ಣನ್ನು, 'ಅಣ್ಣಾ ... ನೀನು ತುಂಬಾ ಬುದ್ಧಿವಂತ' ಎಂದು ರಾಮನನ್ನು ಅಪ್ಪಿಕೊಂಡನು.
ರಾಮಾಯಣದಲ್ಲಿ ಶ್ರೀರಾಮನು ವನವಾಸದಲ್ಲಿರುವಾಗ ನಡೆದ ಕಥೆಯಿದು. ರಾಮಲಕ್ಷ್ಮಣರು ಇಬ್ಬರೂ ವನವಾಸದಲ್ಲಿದ್ದಾಗ ಒಂದು ಸಾರಿ ಕಿಷ್ಕಿಂಧೆಗೆ ಭೇಟಿ ನೀಡುತ್ತಾರೆ.
ಕಿಷ್ಕಿಂಧೆ ಎಂದರೆ ಚಿಕ್ಕದಾದ ದ್ವೀಪ. ಆ ಸಣ್ಣ ರಾಜ್ಯವನ್ನು ವಾಲಿ ಎಂಬುವವನು ಆಳುತ್ತಿದ್ದ. ಅವನು ವಾನರ. ಅವನ ಬಳಿ ವಾನರರ ಬಲಿಷ್ಠವಾದ ಸೈನ್ಯ ಇತ್ತು. ವಾಲಿಯ ತಮ್ಮ ಸುಗ್ರೀವ. ಅವನ ಹೆಂಡತಿ ತಾರಾ. ಅವಳು ತುಂಬಾನೇ ಸುಂದರಿಯಾಗಿದ್ದಳು. ವಾಲಿ ಸುಗ್ರೀವನಿಗೆ ಮೋಸ ಮಾಡಿ ರಾಜ್ಯನ್ನು ಅವನೇ ಆಳುತ್ತಿದ್ದನು. ಜೊತೆಗೆ ತಾರಾಳನ್ನು ಸಹ ಮೋಸದಿಂದ ಮದುವೆಯಾಗಿದ್ದನು. ರಾಜ್ಯದಲ್ಲಿ ಪಾಲು ಕೊಟ್ಟಿರಲಿಲ್ಲ.
ಹೀಗೆ ರಾಮ ಲಕ್ಷ್ಮಣರು ಇವರ ರಾಜ್ಯಕ್ಕೆ ಬಂದಾಗ ಸುಗ್ರೀವನು ತನ್ನ ಅಳಲನ್ನು ಹೇಳಿಕೊಂಡನು. ರಾಮ ಅವನಿಗೆ ಸಹಾಯ ಮಾಡುವುದಾಗಿ ವಚನವಿತ್ತನು.
ವಾಲಿಗೂ ಬುದ್ಧಿ ಹೇಳಿದರು. ಆದರೆ ಎಲ್ಲವೂ ವ್ಯರ್ಥವಾಯಿತು.
ಶ್ರೀರಾಮ ಸುಗ್ರೀವನಿಗೆ ವಾಲಿಯ ಮೇಲೆ ಯುದ್ಧ ಮಾಡಲು ಪ್ರೇರೇಪಿಸಿದನು. ವಾಲಿ, ಸುಗ್ರೀವರು ಯುದ್ಧ ಮಾಡುತ್ತಿರುತ್ತಾರೆ. ಆಗ ಶ್ರೀರಾಮನು ಒಂದು ಮರದ ಮರೆಯಲ್ಲಿ ನಿಂತು ತನ್ನ ಬತ್ತಳಿಕೆಯಿಂದ ಬಾಣವನ್ನು ತೆಗೆದು ಸುಗ್ರೀವ ಜೊತೆ ಸಮರದಲ್ಲಿದ್ದ ವಾಲಿಯ ಕಡೆಗೆ ಬಿಟ್ಟಾಗ ವಾಲಿಯು ಮೃತನಾದನು. ನಂತರ ಸುಗ್ರೀವನಿಗೆ ರಾಜ್ಯಾಭಿಷೇಕ ಮಾಡಿಸಿ ಅವನಿಗೆ ಆಶೀರ್ವಾದ ಮಾಡಿದರು.
ಮುಂದೆ ಸೀತೆಯನ್ನು ಹುಡುಕಲು ಹನುಮಂತನು ಸಹಾಯ ಮಾಡಿದನು. ಮುಂದೆ ಸೀತೆಯನ್ನು ಹುಡುಕಲು ಹನುಮಂತನು ಸಹಾಯ ಮಾಡುತ್ತಾನೆ. ರಾವಣನ ಜೊತೆ ಯುದ್ಧ ಮಾಡುವಾಗ ಶ್ರೀರಾಮನಿಗೆ ವಾನರ ಸೈನ್ಯ ಸಹಾಯ ಮಾಡುತ್ತದೆ.
ರಾಮನ ಒಡನಾಡಿ ಲಕ್ಷ್ಮಣನಿಗೆ ವಾಲಿಯನ್ನು ಸಾಯಿಸಿದುದರ ಬಗ್ಗೆ ಸಂಶಯವಿತ್ತು. ಅಣ್ಣನನ್ನು ಹೇಗೆ ಕೇಳುವುದು ಎಂದು ಯೋಚಿಸುತ್ತಿದ್ದನು. ಅದು ರಾಮನ ಗಮನಕ್ಕೆ ಬರುತ್ತದೆ. ಆಗ ರಾಮ, 'ತಮ್ಮಾ ಯಾಕೋ ನೀನು ಈ ನಡುವೆ ಒಂಥರಾ ಇದ್ದೀಯಾ' ಎನ್ನುತ್ತಾನೆ.
ಅದಕ್ಕೆ ಲಕ್ಷ್ಮಣನು. 'ಅಣ್ಣಾ ನನಗೊಂದು ಸಂದೇಹ. ಅದನ್ನು ನೀನೇ ಪರಿಹಾರ ಮಾಡಬೇಕು. ನೀನು ಯುದ್ಧ ನಿಯಮಗಳನ್ನು ಬಲ್ಲವನು. ಆದರೂ ನೀನು ಮರದ ಮರೆಯಲ್ಲಿ ನಿಂತು ಬಾಣ ಬಿಟ್ಟು ವಾಲಿಯನ್ನು ಸಂಹಾರ ಮಾಡಿದೆಯಲ್ವಾ? ಯಾಕೆ?' ಎನ್ನುತ್ತಾನೆ.
ರಾಮನು, 'ಲಕ್ಷ್ಮಣಾ ಇದೇ ನಿನ್ನ ಸಂದೇಹವಾ. ಅದರ ಹಿಂದೆ ಒಂದು ಕಥೆ ಇದೆ. ಹೇಳ್ತೀನಿ. ವಾಲಿ ಯಾರ ಜೊತೆಯಲ್ಲಿ ಯುದ್ಧ ಮಾಡುವನೋ ಅವನ ಎದುರಾಳಿಯ ಅರ್ಧ ಶಕ್ತಿ ತನಗೆ ದಕ್ಕುಂವತೆ ವರ ದೇವರಿಂದ ವರ ಪಡೆದಿದ್ದ. ಅದಕ್ಕೆ ಅವನನ್ನು ಸೋಲಿಸಲು ಯಾರಿಂದಲೂ ಸಾಧ್ಯವಾಗಿರಲಿಲ್ಲ. ನಿನಗೇ ತಿಳಿದಂತೆ ಯುದ್ಧದಲ್ಲಿ ಯಾವ ಪ್ರಯೋಗವನ್ನೂ ಸಹ ಮಾಡಬಹುದು. ಅದರಲ್ಲೂ ದುಷ್ಟರನ್ನು ಶಿಕ್ಷಿಸಲು ಈ ರೀತಿ ಮಾಡಬೇಕು. ಇದರಲ್ಲಿ ಏನೂ ತಪ್ಪಿಲ್ಲ ಎಂದು ಹೇಳಿದನು. ಆಗ ಲಕ್ಷ್ಮಣನ ಸಂಶಯ ತಿಳಿಯಾಗಿ ಅಣ್ಣನ್ನು, 'ಅಣ್ಣಾ ... ನೀನು ತುಂಬಾ ಬುದ್ಧಿವಂತ' ಎಂದು ರಾಮನನ್ನು ಅಪ್ಪಿಕೊಂಡನು.