ಗೋವು ಮನೆಯೊಳಗೆ ಬಂದರೆ ಸೌಭಾಗ್ಯ ಲಕ್ಷ್ಮಿಒಲಿದಂತೆ
ನಮ್ಮಲ್ಲಿ ಗೋವಿಗೆ ವಿಶೇಷವಾದ ಮಹತ್ವ, ಸ್ಥಾನ ನೀಡಲಾಗಿದೆ. ಅದರಲ್ಲು ಪ್ರಮುಖವಾಗಿ ಗೃಹಪ್ರವೇಶ, ಮಂಗಳ ಕಾರ್ಯದಲ್ಲಿ ಶುಭ ಸಂದರ್ಭಗಳಲ್ಲಿ ವಿಶೇಷವಾಗಿ ಕೆಲವು ಹಬ್ಬಗಳಲ್ಲಿಯೂ ಗೋಪೂಜೆ ಮಾಡಲಾಗುತ್ತದೆ.
ಗೋವುಗಳನ್ನು ಲಕ್ಷ್ಮಿಯ ಅವತಾರ ಎಂದೇ ಕರೆಯುತ್ತಾರೆ. ಹಾಗಾಗಿ ಗೋವುಗಳನ್ನು ಭಕ್ತಿ, ಆರಾಧನೆಯಿಂದ ಪೂಜಿಸುವ ಪದ್ಧತಿ ಅನಾದಿ ಕಾಲದಿಂದಲೂ ಇದೆ. ಹೊಸ ಮನೆಯ ಪ್ರವೇಶ ದಿನದಂದು ಗೋವನ್ನು ಮನೆಯೊಳಗೆ ಕಟ್ಟಿ ಗೋಪೂಜೆ ನಡೆಸಲಾಗುತ್ತದೆ. ಇಂತಹ ದೈವೀಭಾವ ಇರುವಾಗ ಕಾಮಧೇನು ಇದ್ದಕ್ಕಿದ್ದ ಹಾಗೆ ಮನೆಯೊಳಗೆ ಬಂದರೆ ಲಕ್ಷ್ಮೇಯ ಸ್ವರೂಪ ಮನೆಯೊಳಗೆ ಬಂದಂತೆ ಎಂದು ಭಾವಿಸುತ್ತಾರೆ. ಇದರಿಂದ ಮನೆಯ ಬಡತನ ನಿವಾರಣೆಯಾಗುತ್ತದೆ, ಆರೋಗ್ಯ, ಸೌಭಾಗ್ಯವನ್ನು ಲಭಿಸುತ್ತದೆ ಎಂಬ ನಂಬಿಕೆ ಇದೆ.
ಹಾಗೆಯೇ ಬಿಳಿಹಸು ಹುಲ್ಲು ಮೇಯುತ್ತಿರುವುದನ್ನು ಕಂಡರೆ ಶುಭ. ಅದರಿಂದ ಹಣ ಅಥವಾ ಅಮೂಲ್ಯ ಸಂಪತ್ತು ನಿಮ್ಮ ಕೈಸೇರಲಿದೆ ಎಂಬ ನಂಬಿಕೆ ಇದೆ. ಮನೆಯಲ್ಲಿ ಸಾಕಿದ ಹಸು ಅವಳಿ ಕರುಗಳಿಗೆ ಜನ್ಮ ನೀಡಿದರೆ ಶುಭ, ದನಗಳು ಹತ್ತಿರದಲ್ಲಿ ಒಂದಕ್ಕೊಂದು ಮುಖ ಮಾಡಿಕೊಂಡು ಮಲಗಿದ್ದರೆ ಮಳೆ ಬರುತ್ತದೆ ಎಂದು ನಿರ್ಧರಿಸಲಾಗುತ್ತದೆ.
ಕಾಮಧೇನು ಪೂಜೆ ಎಲ್ಲೆಡೆ ನಡೆಯುತ್ತದೆ. ಅದರ ಜತೆಗೆ ಕೆಲವು ಕಡೆ ಗೋದಾನ ಮಾಡುವ ಪದ್ಧತಿಯೂ ಇದೆ. ಇದರಿಂದ ವಿಶೇಷವಾದ ಫಲ ಸಿದ್ಧಿಸುತ್ತದೆ, ಕಷ್ಟಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ. ಗೋಪೂಜೆಯನ್ನು ಸಾಮಾನ್ಯವಾಗಿ ಪ್ರತಿ ಶುಕ್ರವಾರ ಮಾಡುತ್ತಾರೆ. ಹಸು ಮತ್ತು ಕರುವಿಗೆ ಬಾಳೆಹಣ್ಣು ಬೆಲ್ಲ ತಿನ್ನಿಸಿ ಗೋಪೂಜೆ ಕೈಗೊಳ್ಳುತ್ತಾರೆ. ದೀಪಾವಳಿಯಂದು ಗೋವಿಗೆ ಮಹತ್ವದ ಸ್ಥಾನ. ಅಂದು ಗೋವಿಗೆ ಅಲಂಕಾರ ಮಾಡಿ, ಆರತಿ ಎತ್ತಿ, ತಿಲಕ ಇಟ್ಟು, ಸಿಹಿ ತಿನ್ನಿಸಿ ಪೂಜಿಸಲಾಗುತ್ತದೆ.
ನಮ್ಮಲ್ಲಿ ಗೋವಿಗೆ ವಿಶೇಷವಾದ ಮಹತ್ವ, ಸ್ಥಾನ ನೀಡಲಾಗಿದೆ. ಅದರಲ್ಲು ಪ್ರಮುಖವಾಗಿ ಗೃಹಪ್ರವೇಶ, ಮಂಗಳ ಕಾರ್ಯದಲ್ಲಿ ಶುಭ ಸಂದರ್ಭಗಳಲ್ಲಿ ವಿಶೇಷವಾಗಿ ಕೆಲವು ಹಬ್ಬಗಳಲ್ಲಿಯೂ ಗೋಪೂಜೆ ಮಾಡಲಾಗುತ್ತದೆ.
ಗೋವುಗಳನ್ನು ಲಕ್ಷ್ಮಿಯ ಅವತಾರ ಎಂದೇ ಕರೆಯುತ್ತಾರೆ. ಹಾಗಾಗಿ ಗೋವುಗಳನ್ನು ಭಕ್ತಿ, ಆರಾಧನೆಯಿಂದ ಪೂಜಿಸುವ ಪದ್ಧತಿ ಅನಾದಿ ಕಾಲದಿಂದಲೂ ಇದೆ. ಹೊಸ ಮನೆಯ ಪ್ರವೇಶ ದಿನದಂದು ಗೋವನ್ನು ಮನೆಯೊಳಗೆ ಕಟ್ಟಿ ಗೋಪೂಜೆ ನಡೆಸಲಾಗುತ್ತದೆ. ಇಂತಹ ದೈವೀಭಾವ ಇರುವಾಗ ಕಾಮಧೇನು ಇದ್ದಕ್ಕಿದ್ದ ಹಾಗೆ ಮನೆಯೊಳಗೆ ಬಂದರೆ ಲಕ್ಷ್ಮೇಯ ಸ್ವರೂಪ ಮನೆಯೊಳಗೆ ಬಂದಂತೆ ಎಂದು ಭಾವಿಸುತ್ತಾರೆ. ಇದರಿಂದ ಮನೆಯ ಬಡತನ ನಿವಾರಣೆಯಾಗುತ್ತದೆ, ಆರೋಗ್ಯ, ಸೌಭಾಗ್ಯವನ್ನು ಲಭಿಸುತ್ತದೆ ಎಂಬ ನಂಬಿಕೆ ಇದೆ.
ಹಾಗೆಯೇ ಬಿಳಿಹಸು ಹುಲ್ಲು ಮೇಯುತ್ತಿರುವುದನ್ನು ಕಂಡರೆ ಶುಭ. ಅದರಿಂದ ಹಣ ಅಥವಾ ಅಮೂಲ್ಯ ಸಂಪತ್ತು ನಿಮ್ಮ ಕೈಸೇರಲಿದೆ ಎಂಬ ನಂಬಿಕೆ ಇದೆ. ಮನೆಯಲ್ಲಿ ಸಾಕಿದ ಹಸು ಅವಳಿ ಕರುಗಳಿಗೆ ಜನ್ಮ ನೀಡಿದರೆ ಶುಭ, ದನಗಳು ಹತ್ತಿರದಲ್ಲಿ ಒಂದಕ್ಕೊಂದು ಮುಖ ಮಾಡಿಕೊಂಡು ಮಲಗಿದ್ದರೆ ಮಳೆ ಬರುತ್ತದೆ ಎಂದು ನಿರ್ಧರಿಸಲಾಗುತ್ತದೆ.
ಕಾಮಧೇನು ಪೂಜೆ ಎಲ್ಲೆಡೆ ನಡೆಯುತ್ತದೆ. ಅದರ ಜತೆಗೆ ಕೆಲವು ಕಡೆ ಗೋದಾನ ಮಾಡುವ ಪದ್ಧತಿಯೂ ಇದೆ. ಇದರಿಂದ ವಿಶೇಷವಾದ ಫಲ ಸಿದ್ಧಿಸುತ್ತದೆ, ಕಷ್ಟಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ. ಗೋಪೂಜೆಯನ್ನು ಸಾಮಾನ್ಯವಾಗಿ ಪ್ರತಿ ಶುಕ್ರವಾರ ಮಾಡುತ್ತಾರೆ. ಹಸು ಮತ್ತು ಕರುವಿಗೆ ಬಾಳೆಹಣ್ಣು ಬೆಲ್ಲ ತಿನ್ನಿಸಿ ಗೋಪೂಜೆ ಕೈಗೊಳ್ಳುತ್ತಾರೆ. ದೀಪಾವಳಿಯಂದು ಗೋವಿಗೆ ಮಹತ್ವದ ಸ್ಥಾನ. ಅಂದು ಗೋವಿಗೆ ಅಲಂಕಾರ ಮಾಡಿ, ಆರತಿ ಎತ್ತಿ, ತಿಲಕ ಇಟ್ಟು, ಸಿಹಿ ತಿನ್ನಿಸಿ ಪೂಜಿಸಲಾಗುತ್ತದೆ.