ಇಂಥ ಕನಸು ಬಿದ್ದರೆ ಶ್ರೀಮಂತರಾಗುವಿರಿ!
ಅದೃಷ್ಟ ಎಂಬಂತೆ ಏಕಾಏಕಿ ಸಿರಿತನವನ್ನು ಹೊಂದುವವರು ಬಹಳ ಕಡಿಮೆ. ಆದರೆ ಕನಸಿನಲ್ಲಿ ಕಾಣುವ ಘಟನೆಗಳು ಭವಿಷ್ಯದಲ್ಲಿ ಸಂಪತ್ತು ಸಿಗಬಹುದು ಎಂಬ ಸೂಚನೆಯನ್ನು ನೀಡುತ್ತದೆ.
Vijaya Karnataka Web 8 Jun 2019, 12:00 am
ಜೀವನದಲ್ಲಿ ಶ್ರೀಮಂತಿಕೆ ಇರಬೇಕು, ಐಷಾರಾಮಿ ಬದುಕು ನಡೆಸಬೇಕು ಎಂಬುದು ಹಲವರ ಕನಸು. ಆದರೆ ಕೆಲವರು ಶ್ರೀಮಂತ ಮನೆತನದಲ್ಲಿ ಹುಟ್ಟಿರುತ್ತಾರೆ. ಇನ್ನು ಕೆಲವರು ಕಷ್ಟ ಪಟ್ಟು ದುಡಿದು ಶ್ರೀಮಂತಿಕೆಯನ್ನು ಸಂಪಾದಿಸುತ್ತಾರೆ. ಅದೃಷ್ಟ ಎಂಬಂತೆ ಏಕಾಏಕಿ ಸಿರಿತನವನ್ನು ಹೊಂದುವವರು ಬಹಳ ಕಡಿಮೆ. ಆದರೆ ಕನಸಿನಲ್ಲಿ ಕಾಣುವ ಘಟನೆಗಳು ಭವಿಷ್ಯದಲ್ಲಿ ಸಂಪತ್ತು ಸಿಗಬಹುದು ಎಂಬ ಸೂಚನೆಯನ್ನು ನೀಡುತ್ತದೆ ಎಂಬ ನಂಬಿಕೆ ಹಲವರದ್ದು.
ಸಂಪತ್ತಿನ ಅಧಿದೇವತೆ ಲಕ್ಷ್ಮೇ. ಸಿರಿ, ಸಂಪತ್ತು, ಸೌಭಾಗ್ಯಕ್ಕಾಗಿ ಲಕ್ಷ್ಮಿಯನ್ನು ನಿತ್ಯ ಪೂಜಿಸುತ್ತಾರೆ. ವಿಶೇಷ ದಿನಗಳಲ್ಲಿಯೂ ಲಕ್ಷ್ಮೇಯನ್ನು ಫಲ,ಪುಷ್ಪ ಮಂತ್ರಗಳಿಂದ ಆರಾಧಿಸಲಾಗುತ್ತದೆ.
ಲಕ್ಷ್ಮೇ ದೇವಿಯ ಚಿತ್ರಣ ಕನಸಿನಲ್ಲಿ ಬಂದರೆ ಸಂಪತ್ತು ಕೈಸೇರುತ್ತದೆ, ಯಶಸ್ಸು ಲಭಿಸುತ್ತದೆ ಎಂದೇ ಭಾವಿಸಲಾಗುತ್ತದೆ. ಅಲ್ಲದೇ ಹುಡುಗಿ ನೃತ್ಯ ಮಾಡುವುದು, ಕಿಂಗ್ಫಿಶರ್ ಪಕ್ಷಿ ಕನಸಿನಲ್ಲಿ ಕಂಡರೆ ಹಣ ಬರುತ್ತದೆ ಎಂದು ನಂಬಲಾಗುತ್ತದೆ.
ಕದಂಬ ಮರ, ನೆಲ್ಲಿಕಾಯಿ ಕಂಡರೆ ಆರೋಗ್ಯ, ಸೌಭಾಗ್ಯ, ಗೌರವ ಲಭಿಸುತ್ತದೆ ಎಂಬ ನಂಬಿಕೆ ಇದೆ. ಕನಸಿನಲ್ಲಿ ಕಿವಿಯೋಲೆ ಧರಿಸಿದಂತೆ ಕಂಡುಬಂದರೆ, ಹೊಲದಲ್ಲಿ ರೈತ, ಬೆಳಕು, ಚಿನ್ನ, ಚಿನ್ನದ ಉಂಗುರ, ದನದ ಹಾಲು ಕರೆಯುವುದು, ಹಸು, ಅಶ್ವ, ಆನೆ, ಗಿಳಿ, ಜೇನುನೊಣ, ತುಪ್ಪ, ಹಣವನ್ನು ಕಂಡರೆ ಸಂಪತ್ತು ಲಭಿಸುತ್ತದೆ ಎನ್ನುವ ನಂಬಿಕೆ ಇದೆ. ಇಲ್ಲಿ ಹೇಳಿರುವ ಎಲ್ಲ ಘಟನೆಗಳು ಸಕಾರಾತ್ಮಕ ಅಂಶವನ್ನು ನೀಡುವಂತಹವುಗಳೇ ಆಗುವೆ. ಹೊಲದಲ್ಲಿ ರೈತ ಅಂದರೆ ಉತ್ತು ಬಿತ್ತಿ ಬೆಳೆ ತೆಗೆಯುವಾತ. ಅವನು ಕಷ್ಟಪಟ್ಟು ದುಡಿದರೆ ನಾಳೆ ಹೊನ್ನಿನ ಬೆಳೆ ಸಿಗುತ್ತದೆ ಎಂಬುದು ಇದರ ಹಿಂದಿರುವ ತತ್ತ್ವ. ಹಾಗೆಯೇ, ಬೆಳಕು, ಚಿನ್ನದ ವಸ್ತು, ಹಣ, ಎಲ್ಲವೂ ಸಿರಿತನವನ್ನು ಸೂಚಿಸುತ್ತವೆ.
ಸಂಪತ್ತಿನ ಅಧಿದೇವತೆ ಲಕ್ಷ್ಮೇ. ಸಿರಿ, ಸಂಪತ್ತು, ಸೌಭಾಗ್ಯಕ್ಕಾಗಿ ಲಕ್ಷ್ಮಿಯನ್ನು ನಿತ್ಯ ಪೂಜಿಸುತ್ತಾರೆ. ವಿಶೇಷ ದಿನಗಳಲ್ಲಿಯೂ ಲಕ್ಷ್ಮೇಯನ್ನು ಫಲ,ಪುಷ್ಪ ಮಂತ್ರಗಳಿಂದ ಆರಾಧಿಸಲಾಗುತ್ತದೆ.
ಲಕ್ಷ್ಮೇ ದೇವಿಯ ಚಿತ್ರಣ ಕನಸಿನಲ್ಲಿ ಬಂದರೆ ಸಂಪತ್ತು ಕೈಸೇರುತ್ತದೆ, ಯಶಸ್ಸು ಲಭಿಸುತ್ತದೆ ಎಂದೇ ಭಾವಿಸಲಾಗುತ್ತದೆ. ಅಲ್ಲದೇ ಹುಡುಗಿ ನೃತ್ಯ ಮಾಡುವುದು, ಕಿಂಗ್ಫಿಶರ್ ಪಕ್ಷಿ ಕನಸಿನಲ್ಲಿ ಕಂಡರೆ ಹಣ ಬರುತ್ತದೆ ಎಂದು ನಂಬಲಾಗುತ್ತದೆ.
ಕದಂಬ ಮರ, ನೆಲ್ಲಿಕಾಯಿ ಕಂಡರೆ ಆರೋಗ್ಯ, ಸೌಭಾಗ್ಯ, ಗೌರವ ಲಭಿಸುತ್ತದೆ ಎಂಬ ನಂಬಿಕೆ ಇದೆ. ಕನಸಿನಲ್ಲಿ ಕಿವಿಯೋಲೆ ಧರಿಸಿದಂತೆ ಕಂಡುಬಂದರೆ, ಹೊಲದಲ್ಲಿ ರೈತ, ಬೆಳಕು, ಚಿನ್ನ, ಚಿನ್ನದ ಉಂಗುರ, ದನದ ಹಾಲು ಕರೆಯುವುದು, ಹಸು, ಅಶ್ವ, ಆನೆ, ಗಿಳಿ, ಜೇನುನೊಣ, ತುಪ್ಪ, ಹಣವನ್ನು ಕಂಡರೆ ಸಂಪತ್ತು ಲಭಿಸುತ್ತದೆ ಎನ್ನುವ ನಂಬಿಕೆ ಇದೆ. ಇಲ್ಲಿ ಹೇಳಿರುವ ಎಲ್ಲ ಘಟನೆಗಳು ಸಕಾರಾತ್ಮಕ ಅಂಶವನ್ನು ನೀಡುವಂತಹವುಗಳೇ ಆಗುವೆ. ಹೊಲದಲ್ಲಿ ರೈತ ಅಂದರೆ ಉತ್ತು ಬಿತ್ತಿ ಬೆಳೆ ತೆಗೆಯುವಾತ. ಅವನು ಕಷ್ಟಪಟ್ಟು ದುಡಿದರೆ ನಾಳೆ ಹೊನ್ನಿನ ಬೆಳೆ ಸಿಗುತ್ತದೆ ಎಂಬುದು ಇದರ ಹಿಂದಿರುವ ತತ್ತ್ವ. ಹಾಗೆಯೇ, ಬೆಳಕು, ಚಿನ್ನದ ವಸ್ತು, ಹಣ, ಎಲ್ಲವೂ ಸಿರಿತನವನ್ನು ಸೂಚಿಸುತ್ತವೆ.