ಆ್ಯಪ್ನಗರ

ಇಂಥ ಕನಸು ಬಿದ್ರೆ ಅದೃಷ್ಟ ತರುತ್ತಂತೆ

ಕೆಲವೊಂದು ಕನಸುಗಳು ಶುಭ ಸೂಚನೆ, ಮತ್ತೆ ಕೆಲವ ಅಶುಭವನ್ನು ಸೂಚಿಸುತ್ತದೆ.

Vijaya Karnataka 5 Jul 2019, 2:47 pm
ಕನಸು ಬೀಳದ ವ್ಯಕ್ತಿಗಳೇ ಇಲ್ಲ. ಪ್ರತಿಯೊಬ್ಬರೂ ಕೂಡಾ ನಿದ್ದೆಯಲ್ಲಿ ಕನಸು ಕಾಣುತ್ತಿರುತ್ತಾರೆ. ಆದರೆ ಕಂಡ ಕನಸಿನಲ್ಲಿ ಶೇ.90ರಷ್ಟ ಮರೆತು ಹೋಗಿರುತ್ತದೆ. ಕನಸುಗಳು ಕೆಲವೊಮ್ಮೆ ಖುಷಿ, ಬೇಸರ, ರೊಮ್ಯಾಂಟಿಕ್‌ ಹೀಗೆ ಬೇರೆ ಬೇರೆ ರೀತಿಯ ಘಟನೆಗಳನ್ನಾಧರಿಸಿರುತ್ತದೆ. ಆ ಕನಸುಗಳಿಗೂ ಅರ್ಥವನ್ನು ಕಲ್ಪಿಸಲಾಗುತ್ತದೆ ಮತ್ತು ಅವುಗಳು ಭವಿಷ್ಯದ ಆಗುಹೋಗುಗಳನ್ನು ನಿರ್ಧರಿಸುತ್ತವೆ ಎಂಬ ನಂಬಿಕೆಯೂ ಇದೆ.
Vijaya Karnataka Web dreaaa


ಮಾತ್ರವಲ್ಲ ಕೆಲವೊಂದು ಕನಸುಗಳು ಶುಭ ಸೂಚನೆ, ಮತ್ತೆ ಕೆಲವ ಅಶುಭವನ್ನು ಸೂಚಿಸುತ್ತದೆ. ಕನಸಿನಲ್ಲಿ ಹುಲಿಯ ಕನಸು ಬಿದ್ದರೆ ಬಲಿಷ್ಠರು ಎಂಬುದನ್ನು ಸೂಚಿಸುತ್ತದೆ. ಹೆಣವನ್ನು ಕಂಡರೆ ಧೀರ್ಘಾಯಸ್ಸು, ನಾವೇ ಸತ್ತಂತೆ ಕನಸು ಕಂಡರೆ ಆಯಸ್ಸು ಹೆಚ್ಚುತ್ತದೆ ಎಂದೂ ಹೇಳುತ್ತಾರೆ. ಯಾರಾದರೂ ಅಲಂಕೃತ ಸ್ತ್ರೀ ಕಂಡರೆ ಲಕ್ಷ್ಮೇ ಕಟಾಕ್ಷ. ವಿಪರೀತ ಖುಷಿಯಿಂದ ನಗುತ್ತಿರುವವರನ್ನು ಕಂಡರೆ ಪ್ರೀತಿಪಾತ್ರರ ದರ್ಶನ, ದೇವರಿಗೆ ಪೂಜೆ ಮಾಡುತ್ತಿರುವವರು ಕಂಡು ಬಂದರೆ ಋುಣಬಾಧೆಯಿಂದ ಮುಕ್ತಿ, ಮೊಸರು ಕಂಡರೆ ಧನಲಾಭ, ಸುಖಪ್ರಾಪ್ತಿ, ತುಪ್ಪ ಕಂಡರೆ ಕೈ ಹಾಕಿದ ಕಾರ್ಯದಲ್ಲಿ ಯಶಸ್ಸು, ಹಾವು ಬಲಗೈಗೆ ಕಚ್ಚಿದಂತಹ ಕನಸು ಕಂಡರೆ ಧನಲಾಭ ಇದೆ ಎಂದು ಹೇಳುತ್ತಾರೆ.

ಕುದುರೆ, ಆನೆ, ಹಸು, ಬಿಳಿಯ ಎತ್ತು, ಬಿಳಿ ವಸ್ತ್ರ, ಹೂವುಗಳೊಂದಿಗೆ ಕಂಡು ಬಂದರೆ ಹೆಚ್ಚಿನ ಸುಖಪ್ರಾಪ್ತಿ. ದವಸ ಧಾನ್ಯಗಳು ರಾಶಿ ಹಾಕಿರುವಂತೆ ಕಂಡು ಬಂದರೆ ಜೀವನದಲ್ಲಿ ಉತ್ತಮವಾದ ದಿನಗಳನ್ನು ನೋಡುವ ಯೋಗ ಇದೆ. ಸೂರ್ಯ ಚಂದ್ರ, ನಕ್ಷತ್ರ ಕಾಯಗಳ ಕನಸು ಬಿದ್ದರೆ ಕಾಯಿಲೆ ಗುಣಮುಖವಾಗುತ್ತದೆ, ಸರ್ವಸಿದ್ಧಿಯನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ.

ಕನಸಿನ ಫಲ ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬುದನ್ನು ಸೂಚಿಸುತ್ತದೆ. ಅದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೂಡಾ ಕೈಗೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ