ಆ್ಯಪ್ನಗರ

ಶ್ರೀವತ್ಸನಾದ ಭಗವಂತ

ಭಗವಂತ ಮಹಾಲಕ್ಷ್ಮಿಯನ್ನು ತಾನೇ ಧರಿಸಿ (ವಿವಾಹವಾಗಿ) ತನ್ನ ಹೃದಯದಲ್ಲಿಯೇ ಅವಳಿಗೆ ವಾಸಸ್ಥಾನ ಕಲ್ಪಿಸಿದ್ದಾನೆ. ಶ್ರೀವತ್ಸ ಎನಿಸಿದ್ದಾನೆ.

Vijaya Karnataka 6 Apr 2019, 12:00 am
ಆಚಾರ್ಯರು ಸುಂದರವಾಗಿ ತಿಳಿಸುತ್ತಾರೆ. ಅಥೇಂದಿರಾ ಯದ್ಯಪಿ ನಿತ್ಯ ದೇಹಾ ಬಭೂವಾ ತತ್ರಾ ಪರಯಾ ಸ್ವತನ್ವಾ| ಎನ್ನುತ್ತದೆ ಮಹಾಭಾರತ. ಅಂದರೆ ಸಮುದ್ರಮಥನ ಕಾಲದಲ್ಲಿ ಸಾಕ್ಷಾತ್‌ ಮಹಾಲಕ್ಷ್ಮಿ ದೇವಿಯೇ ಅವತರಿಸಿದ್ದಾಳೆ. ಮಹಾಲಕ್ಷ್ಮಿಗೆ ಹೊಸದಾಗಿ ಹುಟ್ಟು ಇಲ್ಲ. ಅವಳು ನಿತ್ಯ ಶರೀರಳು. ನಿತ್ಯ ಮುಕ್ತಳು. ಆದರೂ ಮತ್ತೊಂದು ರೂಪದಿಂದ ಅಲ್ಲಿ ಪ್ರಾದುರ್ಭವಿಸಿದ್ದಾಳೆ. ಭಗವಂತ ಮಹಾಲಕ್ಷ್ಮಿಯನ್ನು ತಾನೇ ಧರಿಸಿ (ವಿವಾಹವಾಗಿ) ತನ್ನ ಹೃದಯದಲ್ಲಿಯೇ ಅವಳಿಗೆ ವಾಸಸ್ಥಾನ ಕಲ್ಪಿಸಿದ್ದಾನೆ. ಶ್ರೀವತ್ಸ ಎನಿಸಿದ್ದಾನೆ.
Vijaya Karnataka Web jnanadeepika

ಈ ಮೂಲಕ ನಮಗೊಂದು ಸಂದೇಶ ನೀಡಿದ. ಹೆಂಡತಿಗೆ ಹೃದಯವನ್ನೇ ಕೊಡಿ! ಹೆಂಡತಿಗೆ ನಾನಾವಿಧ ಆಭರಣಗಳು, ಮನೆಯ ಸಾಮಾನುಗಳು, ಬೆಲೆ ಬಾಳುವ ರೇಷ್ಮೆ ಸೀರೆ, ಬಂಗಾರ, ಆಸ್ತಿ, ಕೇವಲ ಇವುಗಳನ್ನು ಮಾತ್ರ ಕೊಟ್ಟು 'ಗಂಡನ ಕೆಲಸ ಮುಗಿಯಿತು' ಎಂದು ತಿಳಿಯಬೇಡಿ. ಇವುಗಳನ್ನು ಯಾರು ಬೇಕಾದರೂ ಕೊಡಬಹುದು (ಉದಾ: ಪಾಲಕರು ಮಗಳಿಗೆ, ಅತ್ತೆ ಮಾವಂದಿರು ಸೊಸೆಗೆ ಕೊಡಿಸಬಹುದು). ಆದರೆ ಹೆಂಡತಿಗೆ ನಿಮ್ಮ ಹೃದಯವನ್ನೇ ಕೊಡಿ. ವಿಶ್ವಾಸವನ್ನು ಕೊಡಿ. ಪ್ರೀತಿಯನ್ನು ಕೊಡಿ. ಅದರಿಂದ ಧರ್ಮವನ್ನು ಮಾಡಿಸಿ. ಪ್ರೀತಿಯಿಂದ ಸಂಸಾರವನ್ನು ಮುನ್ನಡೆಸಿ. ಅದು ಗಂಡ ತನ್ನ ಹೆಂಡತಿಗೆ ನಿಜವಾಗಿ ಕೊಡಬೇಕಾದ್ದು ಎಂಬುದನ್ನು ತೋರಿಸಿಕೊಡುವುದಕ್ಕಾಗಿ ಭಗವಂತ 'ವಕ್ಷಸಿ ತೇ ಸಮಾಸ್ಥಿತಾ' ಎನ್ನುತ್ತಾನೆ. ಅಂದರೆ ಮಹಾಲಕ್ಷ್ಮಿಗೆ ತನ್ನ ಹೃದಯವನ್ನೇ ಕೊಟ್ಟಿದ್ದಾನೆ. ಶ್ರೀವತ್ಸ ಎನಿಸಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ