ಆ್ಯಪ್ನಗರ

ಹೊರನಾಡು ದೇಗುಲಕ್ಕೆ ತೆಂಗಿನಕಾಯಿ ದಾನ

ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ತೆಂಗಿನಕಾಯಿ ದಾನ

Vijaya Karnataka 9 Jul 2019, 4:53 pm
ಚನ್ನಪಟ್ಟಣ: ದೇವಾಲಯಗಳು ಮನುಷ್ಯನ ಶಾಂತಿ ಮತ್ತು ನೆಮ್ಮದಿಯ ಕೇಂದ್ರಗಳು ಎಂದು ಶ್ರೀ ವೆಂಕಟೇಶ್ವರ ಸಾಮಿಲ್‌ ಹಾಗೂ ಟಿಂಬರ್ಸ್‌ ಮಾಲೀಕ ಮಹೇಶ್‌ ಹೇಳಿದರು.
Vijaya Karnataka Web bodhi logo

ಪಟ್ಟಣದ ಕೋಟೆಯಲ್ಲಿರುವ ಸಾಮಿಲ್‌ನಲ್ಲಿ ಆಯೋಜಿಸಲಾಗಿದ್ದ ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ತಮ್ಮ ಸೇವಾಕಾರ್ಯದ ಸುಮಾರು ನಾಲ್ಕುವರೆ ಸಾವಿರ ತೆಂಗಿನ ಕಾಯಿ ಹಾಗೂ ಹೋಮಕ್ಕೆ ಕಟ್ಟಿಗೆಗಳನ್ನು ತುಂಬಿದ ಲಾರಿಗೆ ಬೀಳ್ಕೊಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇವರು, ಧರ್ಮ ಎಂಬುದು ಮನುಷ್ಯನ ಭಾವನೆಗಳ ಮೇಲೆ ಆಧಾರಿತವಾಗಿದ್ದು, ಮನುಷ್ಯನಿಗೆ ಯಾವುದೇ ರೀತಿಯಲ್ಲಿ ಸಂಕಷ್ಟ ಬಂದರೂ ನಂಬಿರುವ ಭಗವಂತ ಇದರೆಲ್ಲರ ತುಲನೆ ಮಾಡಿ ಆಶೀರ್ವದಿಸುತ್ತಾನೆ, ಮನುಷ್ಯ ಒಳ್ಳೆಯದನ್ನು ಮಾಡದಿದ್ದರೂ ಸರಿಯೇ ಕೆಟ್ಟ ಯೋಚನೆ ಮಾಡಬಾರದು ಎಂದರು.

ಹಲವಾರು ವರ್ಷಗಳಿಂದಲೂ ಹೊರನಾಡಿನಲ್ಲಿ ನೆಲಸಿರುವ ಜಗನ್ಮಾತೆ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ನಮ್ಮ ಹಿರಿಯರ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ತೆಂಗಿನಕಾಯಿ, ಅಡುಗೆಗೆ ಸೌದೆ ಹಾಗೂ ದೇವಾಲಯದಲ್ಲಿ ನಡೆಯುವ ಹೋಮ ಯಗಾಧಿಗಳಿಗೆ ಕಟ್ಟಿಗೆಗಳನ್ನು ನೀಡುತ್ತಿದ್ದು, ಪೂರ್ವಿಕರಾದ ಜಯಮ್ಮ ಬೆಟ್ಟೇಗೌಡರ ಹೆಸರಲ್ಲಿ ಈ ಸೇವಾಕಾರ್ಯ ನಡೆಸಿಕೊಂಡು ಬರುತ್ತಿದ್ದು, ಪಟ್ಟಣ ಹಾಗೂ ತಾಲೂಕಿನ ಭಕ್ತರು ಕೂಡ ಈ ಸೇವಾಕಾರ್ಯಕ್ಕೆ ಕೈ ಜೊಡಿಸುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಸತೀಶ್‌, ಸುನಂದಮ್ಮ ತಗೂಡರಯ್ಯ ಹಾಗೂ ಹಲವಾರು ಮಂದಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ