ಆ್ಯಪ್ನಗರ

ತಿರುಪತಿ ಹುಂಡಿಗೆ 2.4 ಕೋಟಿ ರೂ. ಕಾಣಿಕೆ

ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತನೊಬ್ಬ 2.4 ಕೋಟಿ ರೂ.ಗಳನ್ನು ಕಾಣಿಕೆಯಾಗಿ ಸಮರ್ಪಿಸಿರುವುದು ತಿಳಿದು ಬಂದಿದೆ.

Vijaya Karnataka 2 Aug 2019, 1:37 pm
ತಿರುಪತಿ : ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತನೊಬ್ಬ 2.4 ಕೋಟಿ ರೂ.ಗಳನ್ನು ಕಾಣಿಕೆಯಾಗಿ ಸಮರ್ಪಿಸಿರುವುದು ತಿಳಿದು ಬಂದಿದೆ.
Vijaya Karnataka Web Tirupati


ಹೀಗಾಗಿ ತಿರುಪತಿ ದೇವಾಲಯದ ಶ್ರೀವಾರಿ ಹುಂಡಿಯಲ್ಲಿ ಕಳೆದ ಗುರುವಾರ 6.28 ಕೋಟಿ ನಗದು ಕಾಣಿಕೆ ಸಂಗ್ರಹವಾಗಿದ್ದು ಇದು ದಾಖಲೆಯಾಗಿದೆ. ದಾಖಲೆಯ ಕಾಣಿಕೆ ಸಂಗ್ರಹಕ್ಕೆ ಅಜ್ಞಾತ ವ್ಯಕ್ತಿ ಕೊಡಮಾಡಿದ ದೇಣಿಗೆಯೇ ಕಾರಣ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ಸಾವಿರ ವರ್ಷಗಳಷ್ಟು ಪುರಾತನವಾದ ತಿರುಮಲ ತಿರುಪತಿ ದೇವಸ್ಥಾನದ ಇತಿಹಾಸದಲ್ಲಿ ಇಷ್ಟೊಂದು ಹಣ ಸಂಗ್ರಹವಾಗಿರುವುದು ಇದೇ ಮೊದಲು. ಇದಕ್ಕಿಂತಲೂ ಮೊದಲು ಏಪ್ರಿಲ್‌ 1, 2012ರಲ್ಲಿ ರಾಮನವಮಿ ಉತ್ಸವದ ಸಂದರ್ಭದಲ್ಲಿ 5.73 ಕೋಟಿ ರೂ. ಶ್ರೀವಾರಿ ಹುಂಡಿಯಲ್ಲಿ ದೊರಕಿತ್ತು. ತಿರುಮಲ ತಿರುಪತಿ ದೇವಸ್ಥಾನಕ್ಕೆ ವರ್ಷವಿಡೀ ಯಾತ್ರಿಕರು ಭೇಟಿ ನೀಡುತ್ತಾರೆ. ದೇವಾಲಯದ ಹುಂಡಿಯಲ್ಲಿ ಪ್ರತಿನಿತ್ಯ 2.5 ಕೋಟಿಯಿಂದ 3.5 ಕೋಟಿ ರೂ.ಗಳವರೆಗೆ ಸಂಗ್ರಹವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ