ಆ್ಯಪ್ನಗರ

ಅದಮಾರು ಮಠ: ಪರ್ಯಾಯ ಪೂರ್ವಭಾವಿ ಕಟ್ಟಿಗೆ ಮುಹೂರ್ತ

ಉಡುಪಿ ಶ್ರೀಕೃಷ್ಣನ ಪೂಜೆಯ ಎರಡು ವರ್ಷಗಳ ಪರ್ಯಾಯ ಸರದಿಯಲ್ಲಿರುವ ಅದಮಾರು ಮಠದ ವತಿಯಿಂದ ಕಟ್ಟಿಗೆ ಮುಹೂರ್ತ ಗುರುವಾರ ನೆರವೇರಿತು.

Vijaya Karnataka 5 Jul 2019, 3:31 pm
ಉಡುಪಿ: ಉಡುಪಿ ಶ್ರೀಕೃಷ್ಣನ ಪೂಜೆಯ ಎರಡು ವರ್ಷಗಳ ಪರ್ಯಾಯ ಸರದಿಯಲ್ಲಿರುವ ಅದಮಾರು ಮಠದ ವತಿಯಿಂದ ಕಟ್ಟಿಗೆ ಮುಹೂರ್ತ ಗುರುವಾರ ನೆರವೇರಿತು.
Vijaya Karnataka Web UDP-04U ARUNACHALA3


ಗಣ್ಯರು, ವಿದ್ವಾಂಸರು, ಮಠದ ಪ್ರಮುಖರ ಉಪಸ್ಥಿತಿಯಲ್ಲಿ ಅದಮಾರು ಮಠದ ಪಟ್ಟದ ದೇವರಾದ ಚತುರ್ಭುಜ ಕಾಳೀಯಮರ್ಧನ ಕೃಷ್ಣನ ಗುಡಿ ಎದುರು ಪ್ರಾರ್ಥನೆ, ನವಗ್ರಹ ಪೂಜೆ ನಡೆಯಿತು. ಬಳಿಕ ಅನಂತೇಶ್ವರ, ಚಂದ್ರಮೌಳೀಶ್ವರ, ಶ್ರೀಕೃಷ್ಣ , ಮುಖ್ಯಪ್ರಾಣ, ಗರುಡದೇವರು, ಮಧ್ವ ಗುಡಿ, ಸಿಂಹಾಸನ, ಭೋಜನಶಾಲೆ ಮುಖ್ಯಪ್ರಾಣ, ಸುಬ್ರಹ್ಮಣ್ಯ ದೇವರ ಗುಡಿ, ನವಗ್ರಹ, ಗೋಶಾಲೆಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಅದಮಾರು ಮಠದಿಂದ ಕಟ್ಟಿಗೆಯ ಐದು ಹೊರೆಯನ್ನು ಹೊತ್ತು ಮೆರವಣಿಗೆಯಲ್ಲಿ ಮಧ್ವ ಸರೋವರದ ಒತ್ತಿಗಿರುವ ಕಟ್ಟಿಗೆ ರಥ ಕಟ್ಟೆ ಬಳಿ ಭೂಮಿ ಪೂಜೆ, ಕಟ್ಟಿಗೆ ಪ್ರತಿಷ್ಠೆ, ಪೂಜೆ ಮಾಡಲಾಯಿತು.

ಪರ್ಯಾಯ ಪೀಠವೇರುವ ಮಠಕ್ಕೆ ಸಂಬಂಧಿಸಿದ ಕಾಡಿನಿಂದ ಕಟ್ಟಿಗೆ ಕಡಿದು ತಂದು ಒಪ್ಪಿಸುತ್ತಿದ್ದ ಮುಂಡಾಳ ಸಮಾಜ ಬಾಂಧವರು ಪರಂಪರೆಯಂತೆ ಕಟ್ಟಿಗೆಯನ್ನು ತಲೆಯ ಮೇಲೆ ಹೊತ್ತು ಮೆರವಣಿಗೆಯಲ್ಲಿ ಒಯ್ದರು.

ಕುಂಜಿಬೆಟ್ಟಿನಲ್ಲಿರುವ ಬಬ್ಬುಸ್ವಾಮಿ ದೈವಸ್ಥಾನಕ್ಕೂ ಪರ್ಯಾಯ ಪೀಠದಲ್ಲಿರುವ ಹಾಗೂ ಪರ್ಯಾಯ ಪೀಠವೇರಲಿರುವ ಮಠಕ್ಕೂ ಸಂಬಂಧವಿದ್ದು, ಚೌತಿ, ಯುಗಾದಿ, ಸೋಣ ಸಂಕ್ರಮಣಕ್ಕೆ ಪೂಜಾ ಪರಿಕರ ಕೊಡುವ ಸಂಪ್ರದಾಯ ನಾಲ್ಕು ತಲೆಮಾರಿನಿಂದ ನಡೆದುಕೊಂಡು ಬಂದಿದೆ ಎನ್ನುತ್ತಾರೆ ಗುರಿಕಾರ ಶೇಷು ಹಾಗೂ ಒತ್ತು ಗುರಿಕಾರ ವಾಸು ಬಿ. ಕರ್ಮಾರು. ಮರವನ್ನು ಕಟ್ಟಿಗೆ ಹೊರೆಗೆ ಬಳಸುತ್ತಿದ್ದು ಮೇಸ್ತ್ರಿ ಸುಂದರ ಕರ್ಜೆ ಕಟ್ಟಿಗೆ ವ್ಯವಸ್ಥೆಯ ಉಸ್ತುವಾರಿ ವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ