ಆ್ಯಪ್ನಗರ

ತಂಬಿಹಳ್ಳಿಯಲ್ಲಿ ಮಾಧವತೀರ್ಥರ ಆರಾಧನೆ

ಶ್ರೀ ಮಾಧವತೀರ್ಥರ ಆರಾಧನಾ ಮಹೋತ್ಸವ ಸೆ27 ರಿಂದ ಆರಂಭವಾಗಿದ್ದು 28ರವರೆಗೆ ತಂಬಿಹಳ್ಳಿಯ ಜಗದ್ಗುರು ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಮಠದಲ್ಲಿ ನಡೆಯಲಿದೆ.

Vijaya Karnataka 27 Sep 2019, 4:56 pm
ಕೋಲಾರ : ಶ್ರೀ ಮಾಧವತೀರ್ಥರ ಆರಾಧನಾ ಮಹೋತ್ಸವ ಸೆ.27 ರಿಂದ ಆರಂಭವಾಗಿದ್ದು 28ರವರೆಗೆ ತಂಬಿಹಳ್ಳಿಯ ಜಗದ್ಗುರು ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಮಠದಲ್ಲಿ ನಡೆಯಲಿದೆ. ಸೆ.29 ರಂದು ವಿಜಯ ಮಾಧವತೀರ್ಥರ ಆರಾಧನೆ ನಡೆಯಲಿದೆ. ಆರಾಧನ ಮಹೋತ್ಸವದ ದಿವ್ಯ ಸಾನ್ನಿಧ್ಯವನ್ನು ಶ್ರೀಮಠದ ಹಿರಿಯ ಶ್ರೀಗಳಾದ ವಿದ್ಯಾಸಾಗರ ಮಾಧವತೀರ್ಥರು ಹಾಗೂ ಕಿರಿಯ ಪಟ್ಟ ವಿದ್ಯಾಸಿಂಧು ಮಾಧವ ತೀರ್ಥರು ವಹಿಸಲಿದ್ದಾರೆ. ಸೆ.29ರಂದು ಶ್ರೀ ವ್ಯಾಸರಾಜಮಠದ ಅಂಗಸಂಸ್ಥೆಯಾದ ಶ್ರೀ ರಾಜೇಂದ್ರತೀರ್ಥ ಪ್ರತಿಷ್ಠಾನದಿಂದ ಪ್ರಕಟವಾಗುವ 'ಶ್ರೀ ಅಣುತೀರ್ಥ ಗ್ರಂಥ ವಿಜಯ' ಕೃತಿಯ ಕನ್ನಡ, ತೆಲುಗು ಮತ್ತು ತಮಿಳು ಭಾಷೆಯ ಅವತರಣಿಕೆಯನ್ನು ಉಭಯ ಶ್ರೀಗಳು ಬಿಡುಗಡೆ ಮಾಡಲಿದ್ದಾರೆ.
Vijaya Karnataka Web madhvateertha


ಆರಾಧನಾ ದಿನದಂದು ಮಾಧವತೀರ್ಥ ಮಹಾಸ್ವಾಮಿಗಳ ಬೃಂದಾವನಕ್ಕೆ ಪಂಚಾಮೃತಾಭಿಷೇಕ, ಶ್ರೀ ಮಧ್ವಮಾಧವ ವಿದ್ವತ್‌ಸಭಾ ಹಾಗೂ ಪಂಡಿತರಿಂದ ಪ್ರವಚನವಿರುತ್ತದೆ. ನಂತರ ಶ್ರೀಗಳು ಅನುಗ್ರಹ ಭಾಷಣ ಮಾಡಲಿದ್ದಾರೆ. ಅಂದು ಮಧ್ಯಾಹ್ನ 11ಕ್ಕೆ ಸಂಸ್ಥಾನ ಪೂಜೆ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ