ಆ್ಯಪ್ನಗರ

ಹನುಮಗಿರಿಯಲ್ಲಿ ಬೃಹತ್‌ ಭಜನಾ ಸಂಗಮ

ಒಂದು ಸಾವಿರ ಭಜನಾ ತಂಡಗಳು ಭಾಗಿ, ಡಿಸೆಂಬರ್‌ 3ನೇ ವಾರ ಕಾರ್ಯಕ್ರಮ

Vijaya Karnataka 12 Sep 2019, 7:02 pm
ಹನುಮಗಿರಿ(ಪುತ್ತೂರು): ಈಗಾಗಲೇ ದೇಶಾದ್ಯಂತ ಪ್ರಸಿದ್ಧಿ ಪಡೆದಿರುವ ಹನುಮಗಿರಿ ಶ್ರೀ ಪಂಚಮುಖಿ ಆಂಜನೇಯ, ಶ್ರೀ ಕೋದಂಡರಾಮ ಕ್ಷೇತ್ರದಲ್ಲಿ ಬೃಹತ್‌ ಭಜನಾ ಸಂಗಮ ಕಾರ್ಯಕ್ರಮ ಡಿಸೆಂಬರ್‌ 3 ನೇ ವಾರದಲ್ಲಿ ನಡೆಯಲಿದ್ದು, ಒಂದು ಸಾವಿರ ಭಜನಾ ತಂಡಗಳು ಭಾಗವಹಿಸಲಿವೆ.
Vijaya Karnataka Web hanim

ಭಜನಾ ಸಂಕೀರ್ತನೆಯೊಂದಿಗೆ ಸೂರ್ಯಾಸ್ತ ಸಂದರ್ಭ ಒಂದು ಸಾವಿರ ದೀಪ ಪ್ರಜ್ವಲನೆಯೊಂದಿಗೆ ಏಕಕಾಲದಲ್ಲಿ ಸಾವಿರಾರು ತಂಡಗಳ ವಿಶ್ವದಾಖಲೆಯ ಭಜನಾ ಸಂಗಮ ನೆರವೇರಲಿದೆ. ರಾಷ್ಟ್ರಮಟ್ಟದ ಧಾರ್ಮಿಕ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳ ಸೇವೆ ಸಲ್ಲಿಸುತ್ತಿರುವ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಮೂಡುಬಿದಿರೆ ಆಳ್ವಾಸ್‌ ವಿದ್ಯಾಸಂಸ್ಥೆಯ ಸಂಚಾಲಕ ಡಾ. ಮೋಹನ್‌ ಆಳ್ವ ನೇತೃತ್ವದಲ್ಲಿ ಮಂಗಳೂರು ವಿಭಾಗ ಮಟ್ಟದ ಸ್ವಾಗತ ಸಮಿತಿ ರಚನೆಯಾಗಿದ್ದು, ಈ ಬೃಹತ್‌ ಭಜನಾ ಸಂಗಮದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು , ಕಾಸರಗೋಡು, ಜಿಲ್ಲಾದ್ಯಂತ ಇರುವ ಭಜನಾ ತಂಡಗಳು ಭಾಗವಹಿಸಲಿವೆ. ಕಾರ್ಯಕ್ರಮದಲ್ಲಿ ಒಂದು ದಿನ ಭಜನೆಯ ಮಹತ್ವದ ಬಗ್ಗೆ ಮಾಹಿತಿ ಕಾರ್ಯಕ್ರಮ ಹಾಗೂ ಸಂಜೆ ವಿರಾಟ್‌ ಭಜನಾ ಸಂಗಮ, ಭಜನಾ ಸಂಕೀರ್ತನೆ, ಮೆರವಣಿಗೆ ನಡೆಯಲಿದೆ. ಕಾಯಕ್ರಮಕ್ಕೆ ಈಗಾಗಲೇ ಪೂರ್ವ ತಯಾರಿ ನಡೆಯುತ್ತಿದ್ದು, ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ