ಆ್ಯಪ್ನಗರ

ಬ್ರಹ್ಮಕಲಶೋತ್ಸವದ ಪ್ರಯುಕ್ತ 48 ದಿನಗಳ ವಿಶೇಷ ಭಜನೆ-ಸಂಕೀರ್ತನೆ

2020ರ ಜ.22ರಂದು ಕಟೀಲಿನಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿದ್ದು ಇದೇ ದಿನ ಮತ್ತೊಮ್ಮೆ ಕೋಟಿ ಜಪಯಜ್ಞದ ಎರಡನೇ ಆವೃತ್ತಿಯ ಸಾಮೂಹಿಕ ಸಂಕಲ್ಪ ದೀಕ್ಷೆ ಕಾರ್ಯಕ್ರಮ ಜರುಗಲಿದೆ.

Vijaya Karnataka 16 Dec 2019, 4:45 pm
ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ 48 ದಿನಗಳ ವಿಶೇಷ ಭಜನೆ-ಸಂಕೀರ್ತನೆ ಭಾನುವಾರ ಪ್ರಾರಂಭಗೊಂಡಿತು.
Vijaya Karnataka Web kateelu bhajane

ಮಂಗಳೂರು ರಾಮಕೃಷ್ಣ ಮಠದ ಶ್ರೀ ಏಕಗವ್ಯಾನಂದ ಸ್ವಾಮೀಜಿ ಹಾಗೂ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಅವರುಗಳು ಭಜನೆ-ಸಂಕೀರ್ತನೆಗೆ ಚಾಲನೆ ನೀಡಿದರು. ಪ್ರತಿನಿತ್ಯ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಭಜನೆ ನಡೆಯಲಿದ್ದು ನಾಡಿನ ಭಜನಾ ತಂಡಗಳಿಗೆ ಪಾಲ್ಗೊಳ್ಳಲು ನೋಂದಣಿಗೆ ಅವಕಾಶವಿದೆ.
ಜ.22ರಂದು ಕೋಟಿ ಜಪಯಜ್ಞದಲ್ಲಿ ಸಾಮೂಹಿಕ ದೀಕ್ಷೆ 2ನೇ ಆವೃತ್ತಿ: 2020ರ ಜ.22ರಂದು ಕಟೀಲಿನಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿದ್ದು ಇದೇ ದಿನ ಮತ್ತೊಮ್ಮೆ ಕೋಟಿ ಜಪಯಜ್ಞದ ಎರಡನೇ ಆವೃತ್ತಿಯ ಸಾಮೂಹಿಕ ಸಂಕಲ್ಪ ದೀಕ್ಷೆ ಕಾರ್ಯಕ್ರಮ ಜರುಗಲಿದೆ. ಜ.22ರಂದೇ ನೋಂದಣಿ ಮಾಡಿದರೆ ಕನಿಷ್ಠ 12 ದಿನಗಳ ಅವಧಿಯ ಕೋಟಿಜಪಯಜ್ಞದ ವೃತ ಫೆ.2ರಂದು ಸಮಾಪ್ತಿಯಾಗುತ್ತದೆ. ಅಲ್ಲದೆ ಪ್ರಸ್ತುತ ಪ್ರತಿನಿತ್ಯ ಬೆಳಗ್ಗೆ 10ಕ್ಕೆ ಹಾಗೂ ಮಧ್ಯಾಹ್ನ 12ಕ್ಕೆ ಕಟೀಲು ದೇವಳದಲ್ಲಿ ಕೋಟಿಜಪಯಜ್ಞದ ಮಂತ್ರದೀಕ್ಷೆ ಪಡೆಯುವ ಅವಕಾಶವಿದೆ.
ಡಿ.17ರಂದು ತಲಪಾಡಿ ಶಾರದಾ ವಿದ್ಯಾಲಯದಲ್ಲಿ ಡಿ. ರಂದು ಮಂಗಳೂರು ಮರೋಳಿ ಶ್ರೀ ಸೂರ‍್ಯನಾರಾಯಣ ದೇವಳದಲ್ಲಿ ಡಿ.29ರಂದು ಕಾರ್ಕಳದಲ್ಲಿ ಕಟೀಲು ಬ್ರಹ್ಮಕಲಶೋತ್ಸವ ಪ್ರಯುಕ್ತ ಕೊಟಿ ಜಪಯಜ್ಞ ಮಂತ್ರದೀಕ್ಷೆ ಸಂಕಲ್ಪ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ