ಆ್ಯಪ್ನಗರ

ಭರತ ಹುಣ್ಣಿಮೆ ಶಕ್ತಿದೇವತೆಗೆ ವಿಶೇಷ ಪೂಜೆ

ಭರತ ಹುಣ್ಣಿಮೆ ಅಂಗವಾಗಿ ಕುದೂರು ಗ್ರಾಮದೇವತೆ, ಲಕ್ಷ್ಮೀದೇವಿ ಹಾಗೂ ಚೌಡೇಶ್ವರಿ ದೇಗುಲದಲ್ಲಿ ವಿಶೇಷ ಹೂವಿನ ಅಲಂಕಾರ ಹಾಗೂ ನಾನಾ ಧಾರ್ಮಿಕ ಸೇವೆಗಳು ನೆರವೇರಿದವು.

Vijaya Karnataka 10 Feb 2020, 4:57 pm
ಕುದೂರು: ಭರತ ಹುಣ್ಣಿಮೆ ಅಂಗವಾಗಿ ಕುದೂರು ಗ್ರಾಮದೇವತೆ, ಲಕ್ಷ್ಮೀದೇವಿ ಹಾಗೂ ಚೌಡೇಶ್ವರಿ ದೇಗುಲದಲ್ಲಿ ವಿಶೇಷ ಹೂವಿನ ಅಲಂಕಾರ ಹಾಗೂ ನಾನಾ ಧಾರ್ಮಿಕ ಸೇವೆಗಳು ನೆರವೇರಿದವು.
Vijaya Karnataka Web kuduru shakti devate

ಮುಂಜಾನೆಯೇ ಹುಣ್ಣಿಮೆ ಅಂಗವಾಗಿ ದೇವಿಗೆ ಅಭಿಷೇಕ ಹಾಗೂ ಅಲಂಕಾರ ಸೇವೆ ಕೈ ಗೊಂಡು ಫಲ ಹಾಗೂ ತರಕಾರಿಗಳಿಂದ ಸಿಂಗರಿಸಲಾಯಿತು. ಗ್ರಾಮದ ನೂರಾರು ಭPಕ್ತರು ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಕುದೂರಮ್ಮ ದೇವಾಲಯದ ಅರ್ಚಕ ಮಲ್ಲಯ್ಯ ಮಾತನಾಡಿ, ಹುಣ್ಣಿಮೆಯ ಬೆಳಕು ಎಲ್ಲೆಡೆ ಶುಭವನ್ನು ತರಲಿ. ಹುಣ್ಣಿಮೆ ದಿನದಂದು ಶಕ್ತಿದೇತೆಗಳ ಆರಾಧನೆ ಮಾಡುವುದರಿಂದ ಪುಣ್ಯಫಲ ಪ್ರಾಪ್ತವಾಗುತ್ತದೆ. ದೇವಾಲಯ ಸೇವಾ ಸಮಿತಿ ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೇವಾ ಕಾರ್ಯದಲ್ಲಿ ಮಗ್ನರಾಗಿದ್ದರು. ದೇವಿ ಎಲ್ಲರಿಗೂ ಸನ್ಮಂಗಲವನ್ನುಂಟು ಮಾಡಲಿ ಎಂದು ಆಶಿಸಿದರು.
ಇದೇ ವೇಳೆ ಸೇವಾ ಸಮಿತಿ ಸದಸ್ಯರು ಹಾಜರಿದ್ದರು.
ಚೌಡೇಶ್ವರಿ ದೇಗುಲದಲ್ಲಿ ಅನ್ನಸಂತರ್ಪಣೆ: ಕುದೂರಿನ ರಾಮಲಿಂಗ ಚೌಡೇಶ್ವರಿ ದೇಗುಲದಲ್ಲಿ ಭರತ ಹುಣ್ಣಿಮೆ ಅಂಗವಾಗಿ ದೇವಾಲಯವನ್ನು ಸಿಂಗರಿಸಿ ಮುಂಜಾನೆಯೇ ನಾನಾ ಸೇವಾ ಕಾರ್ಯಗಳನ್ನು ಕೈ ಗೊಳ್ಳಲಾಯಿತು. ಬಳಿಕ ದೇವಿಗೆ ಅಭಿಷೇಕ, ಉಯ್ಯಾಲೆ ಸೇವೆ, ನಾನಾ ಪುಷ್ಪಗಳಿಂದ ವಿಶೇಷ ಅಲಂಕಾರ ಸೇವೆ ಕೈ ಗೊಂಡು ಮಧ್ಯಾಹ್ನದ ವೇಳೆಗೆ ರಥೋತ್ಸವ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ನಡೆಯಿತು. ಬಳಿಕ ಆಗಮಿಸಿದ್ದ ಎಲ್ಲಾ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ