ಆ್ಯಪ್ನಗರ

ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ

ದೇವರಾಯನದುರ್ಗ ಕರಿಗಿರಿಕ್ಷೇತ್ರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆಗಸ್ಟ್‌ 3 ರಿಂದ 25ರವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ .

Vijaya Karnataka 2 Aug 2019, 2:39 pm
ತುಮಕೂರು: ದೇವರಾಯನದುರ್ಗ ಕರಿಗಿರಿಕ್ಷೇತ್ರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆಗಸ್ಟ್‌ 3 ರಿಂದ 25ರವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಸ್ಥಾನದ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಎಚ್‌.ಸವಿತ ತಿಳಿಸಿದ್ದಾರೆ.
Vijaya Karnataka Web karigiri


ಆ.3ರಂದು ಅರಿಶಿನ ಅಲಂಕಾರ, 4ರಂದು ಮುತ್ತಿನ ಕವಚ ಅಲಂಕಾರ, 10 ರಂದು ಶ್ರೀಗಂಧದ ಅಲಂಕಾರ, ಆ.11ರಂದು ಚಿನ್ನದ ಕವಚ ಅಲಂಕಾರ, 17ರಂದು ಬೆಣ್ಣೆ ಅಲಂಕಾರ, 18ರಂದು ವಜ್ರ ಕವಚ ಅಲಂಕಾರ, 24ರಂದು ವಿಶೇಷ ಹೂವಿನ ಅಲಂಕಾರ ಏರ್ಪಡಿಸಲಾಗುವುದು ಹಾಗೂ ಅಂದು ಬೆಳಿಗ್ಗೆ 10.30ರಿಂದ ವಿಶೇಷ ಭಕ್ತಿ ಪ್ರಧಾನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶ್ರಾವಣ ಮಾಸದ ನಾಲ್ಕನೇ ಭಾನುವಾರ ಆ.25ರಂದು ಮುತ್ತಿನ ಕವಚ ಅಲಂಕಾರ ಮತ್ತು ಮಧ್ಯಾಹ್ನ 12 ಗಂಟೆಗೆ ಬೆಳ್ಳಿ ರಥೋತ್ಸವ ಜರುಗಲಿದೆ.

ಸ್ವಾಮಿಯ ಹೆಸರಲ್ಲಿ ಪ್ರಸಾದ ವಿನಿಯೋಗ ಮಾಡುವವರು ಆರೋಗ್ಯ ಇಲಾಖಾ ವತಿಯಿಂದ ಪ್ರಸಾದದ ಗುಣಮಟ್ಟದ ಬಗ್ಗೆ ದೃಢೀಕರಣಗೊಳಿಸಿ ಶುಚಿತ್ವವನ್ನು ಕಾಪಾಡಿಕೊಂಡು ಪ್ರಸಾದ ತಯಾರಿಸಬೇಕು. ಯಾವುದೇ ಅವಘಡಗಳು ಸಂಭವಿಸಿದ್ದಲ್ಲಿ ದೇವಾಲಯದ ಆಡಳಿತ, ಸಿಬ್ಬಂದಿ, ಸಮಿತಿಯವರಾಗಲಿ ಜವಾಬ್ದಾರಾಗಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ