ಆ್ಯಪ್ನಗರ

ಆಮೆಗಳ ರಕ್ಷಣೆಗೆ ಮುಂದಾದ ದೇಗುಲ

ಗುವಾಹಟಿಯಿಂದ 30ಕಿ.ಮೀ. ದೂರದಲ್ಲಿರುವ ಹಾಜೋದ ಹಯಗ್ರೀವ ಮಾಧವ ದೇಗುಲದಲ್ಲಿ ಕಪ್ಪು ಆಮೆಗಳ ಸಂರಕ್ಷ ಣೆಗೆಂದೇ ಕೊಳವನ್ನು ನಿರ್ಮಿಸಲಾಗಿದೆ

Vijaya Karnataka 22 Jun 2019, 12:00 am
ಅಸ್ಸಾಂ: ದಶಾವತಾರಗಳಲ್ಲಿ ಒಂದಾದ ಕೂರ್ಮ ಸಾಕ್ಷಾತ್‌ ವಿಷ್ಣುವಿನ ಅವತಾರ ಸ್ವರೂಪವೆಂದೇ ಹೇಳಲಾಗುತ್ತದೆ. ನಮ್ಮ ದೇಶದಲ್ಲಿ 28 ಜಾತಿಯ ಆಮೆಗಳಿದ್ದು ಅವುಗಳಲ್ಲಿ 20 ಜಾತಿಯ ಆಮೆಗಳು ಅಸ್ಸಾಂನಲ್ಲಿವೆ. ಆಮೆಗಳ ಸಂತತಿ ಇದೀಗ ಅವನತಿಯ ಹಾದಿಯಲ್ಲಿದೆ. ಜಾಗತಿಕ ಭೂಪಟದಿಂದಲೇ ಕಾಣೆಯಾಗುವ ಭೀತಿ ಎದುರಾಗಿದೆ. ಅವುಗಳ ಅದರಲ್ಲೂ ಕಪ್ಪು ಆಮೆಗಳ ಸಂರಕ್ಷ ಣೆಗೆ ಅಸ್ಸಾಂ ಹಾಗೂ ಬಾಂಗ್ಲಾದೇಶದ ಕೆಲವು ದೇಗುಲಗಳು ಮುಂದೆ ಬಂದಿವೆ.
Vijaya Karnataka Web black


ಗುವಾಹಟಿ ಯಿಂದ 30ಕಿ.ಮೀ. ದೂರದಲ್ಲಿರುವ ಹಾಜೋದ ಹಯಗ್ರೀವ ಮಾಧವ ದೇಗುಲದಲ್ಲಿ ಕಪ್ಪು ಆಮೆಗಳ ಸಂರಕ್ಷ ಣೆಗೆಂದೇ ಕೊಳವನ್ನು ನಿರ್ಮಿಸಲಾಗಿದೆ. ಕಳೆದ ಜನವರಿ 27ರಂದು 35 ಆಮೆಗಳನ್ನು ದೇವಸ್ಥಾನದ ವತಿಯಿಂದ ಸಂರಕ್ಷಿಸಿದೆವು. ಅದರಲ್ಲಿ 16 ಕಪ್ಪು ಆಮೆಗಳಿದ್ದವು. ಹೀಗೆ ದೇವಸ್ಥಾನದ ವತಿಯಿಂದ ಸಂರಕ್ಷಿಸಲ್ಪಟ್ಟ ಆಮೆಗಳನ್ನು ನಂತರ ಫೋಬಿತೋರ ವನ್ಯಧಾಮಕ್ಕೆ ಬಿಡುತ್ತೇವೆ ಎನ್ನುತ್ತಾರೆ ಜಯಾದಿತ್ಯ ಪುಕ್ರ್ಯಸ್ತ. ಫೋಬಿತೋರ ವನ್ಯಧಾಮ 50 ಗವಾಹಟಿಯಿಂದ 50ಕಿ.ಮೀ. ದೂರದಲ್ಲಿದೆ.

ದೇವಸ್ಥಾನದ ಕೊಳದಲ್ಲಿ ಬೆಳೆಸುತ್ತಿರುವ ಕೆಲ ಆಮೆಗಳನ್ನು (ಭಾರತೀಯ ಆಮೆ, ನವಿಲು ಆಮೆ)ಗಳನ್ನು ಅಸ್ಸಾಂನ ಮೃಗಾಲಯಕ್ಕೆ ವರ್ಗಾಯಿಸಲಾಗಿದೆ. ಈ ಮೃಗಾಲಯದಲ್ಲಿ 39 ದಿನಗಳ ಕಾಲ ನೋಡಿಕೊಳ್ಳಲಾಗುತ್ತದೆ. ನಂತರ ಅವುಗಳನ್ನು ಕಾಡಿನೊಳಗೆ ಬಿಡುತ್ತೇವೆ ಎನ್ನುತ್ತಾರೆ ಅವರು. ಆಮೆಗಳ ಸಂತತಿಯ ಉಳಿವಿನಲ್ಲಿ ಅಸ್ಸಾಂನ ದೇವಾಲಯಗಳ ಪಾತ್ರ ಹಿರಿದಾಗಿದೆ ಎನ್ನುತ್ತಾರೆ ಪುಕ್ರ್ಯಸ್ತ.

ದೇವಸ್ಥಾನದ ಕೊಳಗಳಲ್ಲಿ ಸಂರಕ್ಷಿಸಲಾದ ಆಮೆಗಳ ಬಗ್ಗೆ ದೈವೀ ಭಾವನೆಯಿರುತ್ತದೆ. ಅವುಗಳ ಸಂರಕ್ಷ ಣೆಗೆ ಸ್ಥಳೀಯರ ಸಹಕಾರವನ್ನು ಸಹ ನಾವು ತೆಗೆದುಕೊಳ್ಳುತ್ತಿದ್ದೇವೆ ಎನ್ನುತ್ತಾರೆ ಗುವಾಹಟಿ ವನ್ಯಧಾಮದ ಪ್ರಾಂತೀಯ ಅರಣ್ಯ ಅಧಿಕಾರಿ ಪ್ರದೀಪ್ತ ಬಾರುಹ್‌.

ನಮ್ಮಲ್ಲಿ 28 ಬಗೆಯ ಆಮೆಗಳಿವೆ. ಅದರಲ್ಲಿ 20 ಬಗೆಯ ಆಮೆಗಳನ್ನು ಅಸ್ಸಾಂನಲ್ಲಿ ಕಾಣಬಹುದು. ಆದರೆ ಆಮೆಗಳನ್ನು ಬೇಟೆಯಾಡುವವರಿಂದ, ಅವುಗಳ ಮೊಟ್ಟೆಯನ್ನು ತಿನ್ನುವವರಿಂದ, ಬದಲಾದ ತಾಪಮಾನ ಹಾಗೂ ಬತ್ತಿದ ಕೊಳಗಳಿಂದಾಗಿ ಆಮೆಗಳ ರಕ್ಷ ಣೆ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಕಲ್ಯಾಣಿಗಳು ಸಹಕಾರಿಯಾಗಿವೆ. ಕೆಲವೊಮ್ಮೆ ದೇವಸ್ಥಾನದ ಕೊಳದಲ್ಲಿರುವ ಆಮೆಗಳಿಗೆ ಅವುಗಳ ಆಹಾರ ಪದ್ಧತಿಗೆ ವಿರುದ್ಧವಾದ ಆಹಾರಗಳನ್ನು ನೈವೇದ್ಯದ ರೂಪದಲ್ಲಿ ನೀಡುವುದು ಅವುಗಳಿಗೆ ಅನನುಕೂಲವೆನಿಸುತ್ತದೆ ಎನ್ನುತ್ತಾರೆ ಪುಕ್ರ್ಯಾಸ್ತ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ