ಆ್ಯಪ್ನಗರ

ಅಯೋಧ್ಯೆಯಲ್ಲಿ ದೀಪಾವಳಿ ಆಚರಣೆ

ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಪೂರ್ಣಗೊಳಿಸಿರುವ ಬೆನ್ನ ಹಿಂದೆಯೇ, ವಿಶ್ವ ಹಿಂದೂ ಪರಿಷತ್‌ ದೀಪಾವಳಿಯಲ್ಲಿ ಅಯೋಧ್ಯೆಯಲ್ಲಿ ಹಣತೆ ಹಚ್ಚುವ ಕಾರ್ಯಕ್ರಮ ಆಯೋಜಿಸಿದೆ.

Vijaya Karnataka 19 Oct 2019, 1:09 pm
ಅಯೋಧ್ಯಾ: ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಪೂರ್ಣಗೊಳಿಸಿರುವ ಬೆನ್ನ ಹಿಂದೆಯೇ, ವಿಶ್ವ ಹಿಂದೂ ಪರಿಷತ್‌ ದೀಪಾವಳಿಯಲ್ಲಿಅಯೋಧ್ಯೆಯಲ್ಲಿ ಹಣತೆ ಹಚ್ಚುವ ಕಾರ್ಯಕ್ರಮ ಆಯೋಜಿಸಿದೆ. ಇದರಲ್ಲಿಸಾವಿರಾರು ಸ್ವಾಮೀಜಿಗಳು ಭಾಗವಹಿಸಲಿದ್ದು, ಮಣ್ಣಿನ 5,100 ಹಣತೆಗಳನ್ನು ಬೆಳಗಲಿದ್ದಾರೆ ಎಂದು ವಿಎಚ್‌ಪಿ ವಕ್ತಾರ ಶರದ್‌ ಶರ್ಮಾ ತಿಳಿಸಿದ್ದಾರೆ.
Vijaya Karnataka Web bodhi logo


ಆದರೆ, ಇದಕ್ಕೆ ಅನುಮತಿ ನೀಡಲು ಫೈಜಾಬಾದ್‌ ವಿಭಾಗೀಯ ಕಮಿಷನರ್‌ ನಿರಾಕರಿಸಿದ್ದಾರೆ. 1993ರ ಜನವರಿ 7ರ ಸುಪ್ರೀಂ ಕೋರ್ಟ್‌ ಆದೇಶದಂತೆ ವಿವಾದಿತ ಪ್ರದೇಶದಲ್ಲಿಯಾವುದೇ ರೀತಿಯ ಹೊಸ ಸಂಪ್ರದಾಯಕ್ಕೆ ಅವಕಾಶ ನೀಡಲಾಗುವುದಿಲ್ಲಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ರಾಮ ಜನ್ಮಭೂಮಿ ದೇವಾಲಯದಲ್ಲಿದೀಪಾವಳಿಯಂದು ಪ್ರತಿ ವರ್ಷವೂ 51 ಹಣತೆಗಳನ್ನು ಹಚ್ಚುವ ಸಂಪ್ರದಾಯವಿದೆ ಎಂದು ದೇಗುಲದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ಹೇಳಿದ್ದಾರೆ.

ಈ ನಡುವೆ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿರುವ ಸುಪ್ರೀಂ ಕೋರ್ಟ್‌ ತೀರ್ಪನ್ನು ಕಾಯ್ದಿರಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನ. 17ರಂದು ನಿವೃತ್ತರಾಗಲಿದ್ದು, ಅವರೇ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಂವಿಧಾನ ಪೀಠದ ನೇತೃತ್ವ ವಹಿಸಿದ್ದಾರೆ. ಹೀಗಾಗಿ ಅವರ ನಿವೃತ್ತಿಗೆ ಮೊದಲೇ ತೀರ್ಪು ಹೊರ ಬೀಳುವ ನಿರೀಕ್ಷೆಯಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ