ಆ್ಯಪ್ನಗರ

ಹೆಚ್ಚಿದ ಆನೆ ರಾಮನ್‌ ಜನಪ್ರಿಯತೆ

ಇಲ್ಲಿನ ಸುಪ್ರಸಿದ್ಧ ಆನೆ ಉತ್ಸವಕ್ಕೆ ಚಾಲನೆ ನೀಡುವ ರಾಮನ್‌ ಎಂದೇ ಖ್ಯಾತವಾಗಿರುವ ಆನೆ ತೆಚ್ಚಿಕ್ಕೊಟ್ಟುಕವು ರಾಮಚಂದ್ರನ್‌ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದಾನೆ.

Vijaya Karnataka 15 Jun 2019, 12:00 am
ತ್ರಿಶೂರ್‌: ಇಲ್ಲಿನ ಸುಪ್ರಸಿದ್ಧ ಆನೆ ಉತ್ಸವಕ್ಕೆ ಚಾಲನೆ ನೀಡುವ ರಾಮನ್‌ ಎಂದೇ ಖ್ಯಾತವಾಗಿರುವ ಆನೆ ತೆಚ್ಚಿಕ್ಕೊಟ್ಟುಕವು ರಾಮಚಂದ್ರನ್‌ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದಾನೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ತ್ರಿಶೂರ್‌ ಪೂರಂ ಗಜ ಉತ್ಸವದಲ್ಲಿ 55ರ ಹರೆಯ ಆನೆಯ ಮೇಲೆ ಕೇರಳ ಸರಕಾರ ಮೊದಲಿಗೆ ನಿಷೇಧ ಹೇರಿತ್ತು. ಆದರೆ ಸಾಮೂಹಿಕ ಬಹಿಷ್ಕಾರ ಹಾಕುವುದಾಗಿ ಆನೆ ಮಾಲೀಕರು ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಒಂದು ಗಂಟೆಗಳ ಕಾಲ ರಾಮನ್‌ ಮೇಲಿನ ನಿಷೇಧವನ್ನು ಹಿಂತೆಗೆದುಕೊಂಡು, ಆನೆ ಉತ್ಸವಕ್ಕೆ ಚಾಲನೆ ನೀಡಲು ಅವಕಾಶ ನೀಡಲಾಗಿತ್ತು.
Vijaya Karnataka Web Trissure Elephent Raman


ಜಾತ್ರೆಯ ಸಂದರ್ಭದಲ್ಲಿ ರಾಮನ್‌ನ ತೀರಾ ಸಮೀಪದಲ್ಲಿ ನಿಂತುಕೊಂಡು ಹಲವಾರು ಅಭಿಮಾನಿಗಳು ಸೆಲ್ಮಿ ತೆಗೆದುಕೊಂಡಿದ್ದರು. ಬಳಿಕ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಚಿತ್ರವನ್ನು ಹರಿಯಬಿಟ್ಟಿದ್ದರು. ಇದಕ್ಕೆ ವಿಶ್ವದೆಲ್ಲೆಡೆಯಿಂದ ಮೆಚ್ಚುಗೆಯ ಸುರಿಮಳೆಯೇ ಹರಿದು ಬರುತ್ತಿದೆ. 10 ಲಕ್ಷಕ್ಕೂ ಹೆಚ್ಚು ಜನರು ಈಗಾಗಲೇ ಇದನ್ನು ಲೈಕ್‌ ಮಾಡಿದ್ದರೆ, ನೂರಾರು ಜನರು ಶೇರ್‌ ಮಾಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ