ಆ್ಯಪ್ನಗರ

ದೇವರ ಆಮೆಗಳಿಗೂ ಆಪತ್ಕಾಲ

ಅಸ್ಸಾಂ ಮೂಲಕ ಹರಿಯುವ ಬ್ರಹ್ಮಪುತ್ರ ನದಿ ಮತ್ತು ಸುತ್ತಲಿನ ಪ್ರದೇಶಗಳು ದೈವಿಕ ಶಕ್ತಿಯನ್ನು ಹೊಂದಿವೆ ಎಂದು ನಂಬಲಾದ ಆಮೆಗಳ ಜೀವಕ್ಕೆ ಕುಂದು ಬಂದಿದೆ.

Vijaya Karnataka 13 Sep 2019, 12:26 pm
ನುಮಲಿಂಗಢ: ಅಸ್ಸಾಂ ಮೂಲಕ ಹರಿಯುವ ಬ್ರಹ್ಮಪುತ್ರ ನದಿ ಮತ್ತು ಸುತ್ತಲಿನ ಪ್ರದೇಶಗಳು ದೈವಿಕ ಶಕ್ತಿಯನ್ನು ಹೊಂದಿವೆ ಎಂದು ನಂಬಲಾದ ಆಮೆಗಳ ಜೀವಕ್ಕೆ ಕುಂದು ಬಂದಿದೆ. ಅಪಾರ ಸಂಖ್ಯೆಯಲ್ಲಿಇಲ್ಲಿಆಮೆಗಳು ವಾಸಿಸುತ್ತಿದ್ದು, ವಿಶ್ವದ ಮೊದಲ 25 ಆಮೆ ಸಂರಕ್ಷಣಾ ತಾಣಗಳ ಪೈಕಿ ಒಂದಾಗಿದೆ.
Vijaya Karnataka Web turtle.

ದೈವಿ ಶಕ್ತಿ ಇದೆ ಎಂಬ ನಂಬಿಕೆಯಿಂದಲೇ ಇದರ ಕಳ್ಳ ಸಾಗಾಣಿಕೆ ಅವ್ಯಾಹತವಾಗಿ ಸಾಗುತ್ತಿದೆ. ಜನರು ಇವುಗಳನ್ನು ಖರೀದಿಸಿ ಮನೆಯ ಅಥವಾ ಧಾರ್ಮಿಕ ಸಂಸ್ಥೆಗಳಲ್ಲಿರುವ ಕೊಳಗಳಲ್ಲಿಬಿಡುತ್ತಿದ್ದಾರೆ. ಅಸ್ಸಾಂನಲ್ಲಿರುವ ಬಹುತೇಕ ದೇವಾಲಯಗಳಲ್ಲಿಕಲ್ಯಾಣಿಗಳಿದ್ದು, ಇವುಗಳಲ್ಲಿಅಪರೂಪದ ಈ ಆಮೆಗಳನ್ನು ಸಾಕಲಾಗುತ್ತಿದೆ. ಆದರೆ ಈಗ ಇವು ನಾನಾ ರೀತಿಯ ಧಾರ್ಮಿಕ ನಂಬಿಕೆಗಳಿಂದಾಗಿ ಪರರ ಪಾಲಾಗುತ್ತಿದ್ದು, ಅವುಗಳು ಹೊಸ ನೀರಿಗೆ ಹೊಂದಿಕೊಳ್ಳಲು ಸಾಧ್ಯವಾಗದೆ ಸಾಯುತ್ತಿವೆ.
ಈ ಹಿನ್ನೆಲೆಯಲ್ಲಿಈಶಾನ್ಯ ವಲಯದ ಟಸ್ಕರ್‌ ಟಾಸ್ಕ್‌ ಫೋರ್ಸ್‌ನ (ಆಮೆ ಸಂರಕ್ಷಣೆ ವಿಭಾಗ) ಅಧ್ಯಕ್ಷ ಡಾ. ರಾಜೀವ್‌ ಬಸುಮಂತಿ ನೇತೃತ್ವದ ತಂಡ ಈ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಬಹುತೇಕ ಕಡೆ ಕಲ್ಯಾಣಿಗಳಿಗೂ ಕಾಂಕ್ರೀಟ್‌ ಬಳಿಯಲಾಗುತ್ತಿದೆ. ಇದರಿಂದ ಅವುಗಳಿಗೆ ನೈಸರ್ಗಿಕ ಪರಿಸರದ ಅಭಾವ ಎದುರಾಗುತ್ತಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿಸೂಕ್ತ ಕ್ರಮ ಕೈಗೊಳ್ಳುವುದಾಗಿ ಬಸುಮಂತಿ ತಿಳಿಸಿದರು.

ಆಮೆಗಳು ಉಭಯ ವಾಸಿಗಳಾಗಿದ್ದು, ಕೇವಲ ನೀರಿನಲ್ಲಿ ಬದುಕಲು ಸಾಧ್ಯವಿಲ್ಲ. ಆದರೆ ದೇಗುಲದ ಕೊಳಗಳಲ್ಲಿ ಹೊರಗೆ ಬರಲು ಅವುಗಳಿಗೆ ಅವಕಾಶವೇ ಇಲ್ಲದಂತಾಗಿದೆ. ಈ ಮೂಲಕ ಸಾಮಾನ್ಯ ಜನರ ಜತೆಗೆ ದೇವಾಲಯದ ಆಡಳಿತ ಮಂಡಳಿಗಳೂ ಇವುಗಳ ನಾಶಕ್ಕೆ ಕಾರಣವಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ