ಆ್ಯಪ್ನಗರ

ಪಂಚಭಾಷೆಗಳಲ್ಲಿ ಭಾಗವತ ಮೊಬೈಲ್‌ ಆ್ಯಪ್‌ ಬಿಡುಗಡೆ

ಐದು ಭಾಷೆಗಳಲ್ಲಿ ಸಿದ್ಧಪಡಿಸಲಾದ 'ಭಾಗವತ' ಅಪ್ಲಿಕೇಶನ್‌(ಆ್ಯಪ್‌)ನ ಬಿಡುಗಡೆ ಸಮಾರಂಭವು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು.

Vijaya Karnataka 16 Aug 2019, 4:58 pm
ಉಡುಪಿ:ಉಡುಪಿಯ ಶ್ರೀಮನ್ಮಧ್ವ ಸಿದ್ಧಾಂತ ಪ್ರಬೋಧಕ ಸಂಸ್ಕೃತ ಸಂಶೋಧನಾ ಕೇಂದ್ರದ ವತಿಯಿಂದ ಐದು ಭಾಷೆಗಳಲ್ಲಿ ಸಿದ್ಧಪಡಿಸಲಾದ 'ಭಾಗವತ' ಅಪ್ಲಿಕೇಶನ್‌(ಆ್ಯಪ್‌)ನ ಬಿಡುಗಡೆ ಸಮಾರಂಭವು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು.
Vijaya Karnataka Web BHAGAVATA


ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ನೂತನ ಆ್ಯಪ್‌ ಬಿಡುಗಡೆಗೊಳಿಸಿ ಮಾತನಾಡಿ, ಶ್ರೀ ಮದ್ಭಾಗವತದ ಶ್ರವಣ, ಅಧ್ಯಯನಗಳು ನಮ್ಮ ಎಲ್ಲ ಇಹ-ಪರ ದುಃಖಗಳನ್ನು ಪರಿಹರಿಸುವಂತಹುದ್ದಾಗಿದೆ. ಆದ್ದರಿಂದ ಎಲ್ಲರೂ ಅಗತ್ಯವಾಗಿ ಅದರ ಅಧ್ಯಯನ ಮಾಡಬೇಕು. ಇದಕ್ಕೆ ಅನುಕೂಲವಾಗಿ ಉಡುಪಿ ಎಸ್‌ಎಂಎಸ್‌ಪಿ ಸಂಸ್ಕೃತ ಸಂಶೋಧನಾ ಕೇಂದ್ರ 5 ಭಾಷೆಗಳಲ್ಲಿ ಭಾಗವತದ ಅಪ್ಲಿಕೇಶನ್‌ ಸಿದ್ಧಪಡಿಸಿರುವುದು ಶ್ಲಾಘನೀಯ ಕಾರ್ಯ ಎಂದರು.

ಏನಿದು ಭಾಗವತ ಆ್ಯಪ್‌?: ಉಡುಪಿಯ ಎಸ್‌ಎಂಎಸ್‌ಪಿ ಸಂಸ್ಕೃತ ಸಂಶೋಧನ ಕೇಂದ್ರವು ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಭಾಗವತದ ಅಪ್ಲಿಕೇಶನ್‌ ಸಿದ್ಧಪಡಿಸಿದೆ. ಪ್ರಸ್ತುತ ಇದು ಆರಂಭಿಕ ಹಂತದಲ್ಲಿ ಇರುವುದರಿಂದ ಇನ್ನಷ್ಟೇ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಅಪ್‌ಲೋಡ್‌ ಮಾಡಬೇಕಿದೆ. ಸರ್ಚ್‌ ಎಂಜಿನ್‌ ಹೊಂದಿರುವ ಈ ಆ್ಯಪ್‌ನಲ್ಲಿ ಸುಮಾರು 1.82 ಲಕ್ಷ ಶಬ್ದಗಳಿವೆ. ಹೀಗಾಗಿ ಆಸಕ್ತರು ಭಾಗವತದ ಯಾವುದೇ ಶಬ್ದವನ್ನು ಸರ್ಚ್‌ಗೆ ಹಾಕಿದರೆ, ಕ್ಷಣಾರ್ಧದಲ್ಲಿ ಆ ಪದ ಎಲ್ಲಿ ಬರುತ್ತದೆ. ಅದರ ಅರ್ಥ ಆಯಾ ಭಾಷೆಗಳಲ್ಲಿ ಮೂಡಿಬರುತ್ತದೆ ಎಂದು ಸಂಶೋಧನ ಕೇಂದ್ರದ ನಿರ್ದೇಶಕ ಡಾ. ಕಡಂದಲೆ ಗಣಪತಿ ಭಟ್‌ ತಿಳಿಸಿದ್ದಾರೆ.

ಪ್ರಸ್ತುತ ಭಾಗವತ ಬರವಣಿಗೆ(ಟೆಕ್ಸ್ಟ್‌) ಮಾತ್ರ ಇದ್ದು, ಮುಂದಿನ ದಿನಗಳಲ್ಲಿ ಆಡಿಯೋ, ವಿಡಿಯೋ ರೂಪದಲ್ಲಿ ಇಂಟರ್‌ನೆಟ್‌ ಮೂಲಕ ಲಭ್ಯವಾಗಲಿದೆ. ಈ ಅಪ್ಲಿಕೇಶನ್‌ ಬಗ್ಗೆ ಆಸಕ್ತಿ ಹೊಂದಿರುವವರು ಸಂಶೋಧನಾ ಕೇಂದ್ರವನ್ನು ಸಂಪರ್ಕಿಸಬಹುದು. ಮಾಹಿತಿಗೆ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಕಡಂದಲೆ ಗಣಪತಿ ಭಟ್‌ ಅವರನ್ನು ಸಂಪರ್ಕಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ